ಆ್ಯಪ್ನಗರ

ಖಾಸಗಿ ಸಾಲ ಮನ್ನಾ ಸೂಕ್ತವಲ್ಲ

ಖಾಸಗಿ ಸಾಲ ಮನ್ನಾ ಮಾಡುವ ರಾಜ್ಯ ಸರಕಾರದ ತೀರ್ಮಾನ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಂಬಿಕೆ ಮೇಲೆ ನಿಂತಿರುವ ಆರ್ಥಿಕ ವ್ಯವಹಾರಗಳಿಗೆ ಹೆಚ್ಚು ನಿರ್ಬಂಧ ಹೇರುವುದು ಅಪಾಯಕಾರಿ. ರಾಜ್ಯ ಸರಕಾರದ ನಿರ್ಧಾರವನ್ನು ಜನರು ಪ್ರತಿಭಟಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Vijaya Karnataka 31 Aug 2018, 5:00 am
ತೀರ್ಥಹಳ್ಳಿ : ಖಾಸಗಿ ಸಾಲ ಮನ್ನಾ ಮಾಡುವ ರಾಜ್ಯ ಸರಕಾರದ ತೀರ್ಮಾನ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಂಬಿಕೆ ಮೇಲೆ ನಿಂತಿರುವ ಆರ್ಥಿಕ ವ್ಯವಹಾರಗಳಿಗೆ ಹೆಚ್ಚು ನಿರ್ಬಂಧ ಹೇರುವುದು ಅಪಾಯಕಾರಿ. ರಾಜ್ಯ ಸರಕಾರದ ನಿರ್ಧಾರವನ್ನು ಜನರು ಪ್ರತಿಭಟಿಸಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
Vijaya Karnataka Web SMR-29TTH8


ಪಟ್ಟಣದಲ್ಲಿ ಬುಧವಾರ ವರ್ತಕರ ಸೌಹಾರ್ದ ಸಹಕಾರ ನಿಯಮಿತ ಉದ್ಘಾಟಿಸಿ ನಂತರ ಶ್ರೀರಾಮಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರ್ಥಿಕ ವ್ಯವಹಾರ ನಂಬಿಕೆ ಪಡೆದರೆ ಜನರ ವಿಶ್ವಾಸಗಳಿಸಲು ಸಾಧ್ಯ. ಆರ್ಥಿಕ ನೆರವು ನೀಡುವ ಸಂಘ ಸಂಸ್ಥೆಗಳ ಸ್ಥಾಪನೆ ಅಭಿವೃದ್ಧಿಗೆ ಪೂರಕ. ತಪ್ಪು ಆಗದಂತೆ ಎಚ್ಚರವಹಿಸಿದರೆ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.

ಸಹಕಾರ ಸಂಘಗಳಿಂದ ಸಿಗುವ ಆರ್ಥಿಕ ನೆರವು ವ್ಯಕ್ತಿಗೆ ಸಹಕಾರವಾಗುವ ಜತೆಗೆ ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತದೆ. ವರ್ತಕರ ಸೌಹಾರ್ದ ಸಹಕಾರ ಸಂಘದ ಯಶಸು ಸೇವೆ, ಪಾರದರ್ಶಕ ವ್ಯವಹಾರದ ಕ್ರಮ ಆವಲಂಬಿಸಿದೆ. ಸಹಕಾರ ಕ್ಷೇತ್ರದಲ್ಲಿ ಸೇವಾ ಚಟುವಟಿಕೆ ಜವಾಬ್ದಾರಿ ಹೊತ್ತವರು ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು. ತಪ್ಪು ಘಟಿಸಿದರೆ ಆಡಳಿತ ಮಂಡಳಿ ಹೊಣೆ ಆಗಬೇಕಿದೆ ಎಂಬುದನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಎ.ಆರ್‌. ಪ್ರಸನ್ನಕುಮಾರ್‌ ಮಾತನಾಡಿ, ಕ್ರಿಯಾಶೀಲತೆಯಿಂದ ವಿಸ್ತಾರವಾಗಿ ಕಾರ‍್ಯನಿರ್ವಹಿಸುವ ಅವಕಾಶ ಸಹಕಾರ ಕ್ಷೇತ್ರದಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ನಂಬಿಕೆ ವ್ಯವಹಾರ ಹೆಚ್ಚು ಮಹತ್ವ ಪಡೆದಿದೆ ಎಂದರು.

ವರ್ತಕರ ಸೌಹಾರ್ದ ಸಹಕಾರ ನಿಯಮಿತ ಅಧ್ಯಕ್ಷ ಡಾನ್‌ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಂದೇಶಜವಳಿ ಷೇರುಪತ್ರ ವಿತರಿಸಿ, ವರ್ತಕರ ಸಂಘದ ಅಧ್ಯಕ್ಷ ಚೈತನ್ಯಜವಳಿ ಮಾತನಾಡಿದರು. ನಿಯಮಿತ ಉಪಾಧ್ಯಕ್ಷೆ ಸಹನಾಭಟ್‌, ನಿರ್ದೇಶಕರಾದ ಸೊಪ್ಪುಗುಡ್ಡೆ ರಾಘವೇಂದ್ರ,ನಾಗರಾಜ್‌, ಬಳಗಟ್ಟೆಗಿರೀಶ್‌, ರಾಘವೇಂದ್ರ ಶೆಣೈ, ಕೋಣಂದೂರು ಅಶೋಕ್‌, ರಾಘವೇಂದ್ರಮಲ್ಯ,ಯುವರಾಜ್‌, ಮೋಹಿನಿ ಆಚಾರ‍್ಯ, ಇಒ ರೂಪಾ ಎಸ್‌.ರಾವ್‌ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ