ಆ್ಯಪ್ನಗರ

ಶಿವಮೊಗ್ಗದಲ್ಲಿ 10ಕ್ಕೆ ಕನ್ನಡ ನಾಮಫಲಕ ಅಭಿಯಾನ

ಕನ್ನಡದಲ್ಲಿ ನಾಮಫಲಕ ಇಲ್ಲದೇ ಹೋದರೆ ಆ ಅಂಗಡಿಗಳ ಅಥವಾ ವ್ಯಾಪಾರಸ್ಥರಿಗೆ ಕೂಡಲೇ ಕನ್ನಡದಲ್ಲಿ ನಾಮಫಲಕ ಬರೆಸುವಂತೆ ಮನವಿ ಮಾಡಲಾಗುವುದು. ಆದಾಗ್ಯೂ ಇಂಗ್ಲೀಷ್‌ ಪದ ಬಳಕೆಯಾದರೆ ಹೋರಾಟ ಸ್ವರೂಪ ತೀವ್ರಗೊಳಿಸಲಾಗುವುದು ಎಂದರು.

Vijaya Karnataka 8 Mar 2019, 6:51 pm
ಶಿವಮೊಗ್ಗ: ಕೋರ್ಟ್‌ ಆದೇಶದಂತೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಪದ ಬಳಕೆಗೆ ಆಗ್ರಹಿಸಿ ಕರ್ನಾಟಕ ತುಂಗಾ ರಕ್ಷಣಾ ವೇದಿಕೆಯಿಂದ ಮಾ.10ರಂದು ನಗರದಲ್ಲಿ ಕನ್ನಡದ ನಾಮಫಲಕ ಅಭಿಯಾನ ನಡೆಯಲಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಎನ್‌. ಶಂಕರ್‌ನಾಗ್‌ ಹೇಳಿದರು.
Vijaya Karnataka Web Kannada


ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿ, ಅಂದು ಬೆಳಗ್ಗೆ 10.30ಕ್ಕೆ ಶಿವಪ್ಪ ನಾಯಕ ವೃತ್ತದಿಂದ ಗೋಪಿವೃತ್ತ ಹಾಗೂ ಗೋಪಿ ವೃತ್ತದಿಂದ ಖಾಸಗಿ ಬಸ್‌ ನಿಲ್ದಾಣವರೆಗೆ ನಾಮಫಲಕ ಅಭಿಯಾನ ನಡೆಸಲಾಗುವುದು. ಕೋರ್ಟ್‌ ಆದೇಶ ಮತ್ತು ವ್ಯಾಪಾರಸ್ಥರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಅಭಿಯಾನ ನಡೆಯಲಿದೆ ಎಂದರು.

ಕನ್ನಡದಲ್ಲಿ ನಾಮಫಲಕ ಇಲ್ಲದೇ ಹೋದರೆ ಆ ಅಂಗಡಿಗಳ ಅಥವಾ ವ್ಯಾಪಾರಸ್ಥರಿಗೆ ಕೂಡಲೇ ಕನ್ನಡದಲ್ಲಿ ನಾಮಫಲಕ ಬರೆಸುವಂತೆ ಮನವಿ ಮಾಡಲಾಗುವುದು. ಆದಾಗ್ಯೂ ಇಂಗ್ಲೀಷ್‌ ಪದ ಬಳಕೆಯಾದರೆ ಹೋರಾಟ ಸ್ವರೂಪ ತೀವ್ರಗೊಳಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ರೌಡಿ ಶೀಟ್‌ ತಯಾರಿಸುತ್ತಿರುವುದು ಸರಿಯಷ್ಟೆ. ಆದರೆ, ಅವರ ಜತೆಗೆ ರೌಡಿಗಳಲ್ಲದವರನ್ನು ರೌಡಿಶೀಟ್‌ನಲ್ಲಿ ಸೇರಿಸಿ, ಅಮಾಯಕರನ್ನು ಹಿಡಿದು ಕೇಸ್‌ ದಾಖಲಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಎಸ್ಪಿ ಪರಿಶೀಲನೆ ನಡೆಸಿ, ರೌಡಿಗಳಿಗೆ ಶಿಕ್ಷೆ ವಿಧಿಸಿ, ಅಮಾಯಕರಿಗೆ ಶಿಕ್ಷೆಯಾಗುವುದನ್ನು ತಡೆಯಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಪದಾಧಿಕಾರಿಗಳ ನೇಮಕ: ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿಕೊಂಡ ತುಂಗಾ ರಕ್ಷಣಾ ವೇದಿಕೆ ಇಂದು ಬೆಂಗಳೂರಿನವರೆಗೆ ಹಬ್ಬಿದೆ. ಹಾಗಾಗಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕರ್ನಾಟಕ ತುಂಗಾ ರಕ್ಷಣಾ ವೇದಿಕೆಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರನ್ನಾಗಿ ಗೋವಿಂದೇಗೌಡ ಅವರನ್ನು ನೇಮಕ ಮಾಡಲಾಗಿದೆ. ಆಟೋ ಚಾಲಕ ಘಟಕಕ್ಕೆ ವಿನಯ್‌ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ದಾವಣಗೆರೆ ಜಿಲ್ಲೆಗೆ ಬಾಬು ಅವರನ್ನು ನೇಮಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷ ನೇಮಕ ಪ್ರಕ್ರಿಯೆ ನಡೆಯತ್ತಿದೆ ಎಂದು ಎನ್‌.ಶಂಕರನಾಗ್‌ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ