ಆ್ಯಪ್ನಗರ

ಕಸ ವಿಲೇವಾರಿ ವಾಹನ ತಡೆದು ಪ್ರತಿಭಟನೆ

ನಗರ ಸಮೀಪದ ಹನುಮಂತಾಪುರ ಬಳಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆ ಖಂಡಿಸಿ ಪುರದಾಳು ಗ್ರಾಮದ ನಿವಾಸಿಗಳು ಸೋಮವಾರ ಕಸ ವಿಲೇವಾರಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

Vijaya Karnataka 9 Jul 2019, 5:00 am
ಶಿವಮೊಗ್ಗ: ನಗರ ಸಮೀಪದ ಹನುಮಂತಾಪುರ ಬಳಿ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕದ ಅವ್ಯವಸ್ಥೆ ಖಂಡಿಸಿ ಪುರದಾಳು ಗ್ರಾಮದ ನಿವಾಸಿಗಳು ಸೋಮವಾರ ಕಸ ವಿಲೇವಾರಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
Vijaya Karnataka Web SMR-8ganesh1


ನಗರದ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಹನುಮಂತಪುರದ ಬಳಿ ವಿಲೇವಾರಿ ಘಟಕ ನಿರ್ಮಿಸಿದೆ. ಆದರೆ, ನಿರ್ವಹಣೆಗೆ ಕ್ರಮ ಕೈಗೊಂಡಿಲ್ಲ. ಕಸ ವಿಲೇವಾರಿ ಸಿಬ್ಬಂದಿ ವ್ಯವಸ್ಥಿತ ವಿಲೇವಾರಿ ಮಾಡುವ ಬದಲು ಅವೈಜ್ಞಾನಿಕ ಹಾಗೂ ಅಸಮರ್ಪಕ ವಿಲೇವಾರಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಭರವಸೆ ಈಡೇರಿಸಲಿಲ್ಲ: ತ್ಯಾಜ್ಯ ವಿಲೇವಾರಿ ಘಟಕ ಅವ್ಯವಸ್ಥೆ ಖಂಡಿಸಿ ಈ ಹಿಂದೆ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದ ಸಂದರ್ಭ ಪಾಲಿಕೆ ಅಧಿಕಾರಿಗಳು ಕೂಡಲೇ ಸರಿಪಡಿಸಿ, ರಸ್ತೆ ನಿರ್ಮಿಸಿಕೊಡುವುದಾಗಿ ಮೇಯರ್‌ ಮತ್ತು ಉಪಮೇಯರ್‌ ಭರವಸೆ ನೀಡಿದ್ದರು. ಅದು ಇನ್ನೂ ಭರವಸೆಯಾಗಿಯೇ ಉಳಿದಿದೆ. ಪರಿಣಾಮ ಈ ಘಟಕ ಅಸ್ವಚ್ಛತೆಯಿಂದ ಗಬ್ಬು ನಾರುತ್ತಿದೆ. ಸೊಳ್ಳೆ ಉತ್ಪಾದನೆಗೆ, ಬೀದಿ ನಾಯಿಗಳ ಕಿತ್ತಾಟಕ್ಕೆ ಪ್ರಶಸ್ತ ಸ್ಥಳವಾಗಿದ್ದು, ಅವ್ಯವಸ್ಥೆ ತಡೆಗೆ ಸರಿಯಾದ ಕ್ರಮ ಇಲ್ಲ. ಇದೇ ಮಾರ್ಗದ ವ್ಯಾಪ್ತಿಯಲ್ಲಿ ಅನುಪಿನಕಟ್ಟೆ , ಹನುಮಂತಾಪುರ, ಬೇಳೂರು, ಶಾಂತಿಪುರ, ಪುರದಾಳು ಗ್ರಾಮಗಳ ನಿವಾಸಿಗಳು, ವಿದ್ಯಾರ್ಥಿಗಳು ನಿತ್ಯ ಓಡಾಡಬೇಕಿದೆ. ಗಬ್ಬುನಾರುತ್ತಿರುವ ವಾಸನೆಯಿಂದ ಜನರು ರೋಸಿ ಹೋಗಿದ್ದಾರೆ. ಸೊಳ್ಳೆ, ನಾಯಿ ಕಾಟದ ಜತೆಗೆ ಆರೋಗ್ಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ವಾಹನ ತಡೆದು ಪ್ರತಿಭಟನೆ: ವಿಲೇವಾರಿ ಘಟಕ ಅವ್ಯವಸ್ಥೆ ಕಂಡು ಹಲವು ಬಾರಿ ಕಸ ವಿಲೇವಾರಿ ಸಿಬ್ಬಂದಿಗೆ ವ್ಯವಸ್ಥಿತವಾಗಿ ವಿಲೇವಾರಿಗೆ ಎಚ್ಚರಿಕೆ ನೀಡಿದರೂ ಅವೈಜ್ಞಾನಿಕ ವಿಲೇವಾರಿ ಮುಂದುರಿದಿದೆ. ಹೀಗಾಗಿ ಸೋಮವಾರ ಪುರದಾಳು ಗ್ರಾಮಸ್ಥರು ಕಸ ವಿಲೇವಾರಿ ವಾಹನ ತಡೆದು ಪ್ರತಿಭಟನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ