ಆ್ಯಪ್ನಗರ

ಸಂಸದ ಹೆಗಡೆ ಹೇಳಿಕೆ ವಿರುದ್ಧ ಪ್ರತಿಭಟನೆ

ಮಹಾತ್ಮ ಗಾಂಧೀಜಿ ಕುರಿತಾಗಿ ಸಂಸದ ಅನಂತ್‌ ಕುಮಾರ ಹೆಗಡೆ ಹೇಳಿಕೆ ನೀಡಿರುವುದನ್ನು ಖಂಡಿಸಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 6 Feb 2020, 5:00 am
ಶಿವಮೊಗ್ಗ: ಮಹಾತ್ಮ ಗಾಂಧೀಜಿ ಕುರಿತಾಗಿ ಸಂಸದ ಅನಂತ್‌ ಕುಮಾರ ಹೆಗಡೆ ಹೇಳಿಕೆ ನೀಡಿರುವುದನ್ನು ಖಂಡಿಸಿ ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web protest against mp hegades statement
ಸಂಸದ ಹೆಗಡೆ ಹೇಳಿಕೆ ವಿರುದ್ಧ ಪ್ರತಿಭಟನೆ


ಸ್ವಾತಂತ್ರ್ಯ ಹೋರಾಟಗಾರರಲ್ಲಿಅಗ್ರಗಣ್ಯರಾದ ಮಹಾತ್ಮ ಗಾಂಧೀಜಿ ಅವರನ್ನು ಈಗಿನ ಕೆಲ ಜನನಾಯಕರು ಅವಮಾನಿಸುವ, ಕೆಟ್ಟ ಪದಗಳಿಂದ ನಿಂದಿಸುವ ಕೆಲಸ ಮಾಡುತ್ತಿರುವುದು ದುರಾದೃಷ್ಟಕರ ಎಂದು ಪ್ರತಿಷ್ಠಾನದ ಮುಖಂಡರು ಆರೋಪಿಸಿದರು.

ಅನಂತ್‌ ಕುಮಾರ ಹೆಗಡೆ ಸಂಸದರೆಂದು ಹೇಳಿಕೊಳ್ಳಲು ಖೇದವಾಗುತ್ತದೆ. ಉದಾತ್ತವಾದ ಭಾವನೆ ವಿಚಾರಗಳೇ ಅವರಿಗೆ ತಿಳಿಯದಿರುವುದು ದುರಾದೃಷ್ಟಕರ. ಕಾನೂನಿಯಲ್ಲಿತಪ್ಪು ಮಾಡಿದವರಿಗೆ ಶಿಕ್ಷೆ ಇರುತ್ತದೆ. ಆದರೆ, ಇಂತಹ ಜನನಾಯಕರಿಗೆ ಶಿಕ್ಷೆ ಆಗುತ್ತಿಲ್ಲ. ಅವರನ್ನು ಹಾಡಿ ಹೊಗಳುವ ಜನರಿದ್ದಾರೆ ಎಂದು ಟೀಕಿಸಿದರು.

ಇಂತಹ ನಾಯಕರು ಮುಂದಿನ ಪೀಳಿಗೆಗೆ ಆದರ್ಶ ಬೋಧಿಸುವ, ತಿಳಿವಳಿಕೆ ನೀಡುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ. ದ್ವೇಷ ರಾಜಕಾರಣ, ದ್ವೇಷ ಹರಡುವುದೇ ವಿನಃ ಶಾಂತಿ ಸ್ಥಾಪಿಸುವುದಿಲ್ಲ. ದೇಶಕ್ಕಾಗಿ ತ್ಯಾಗ ಮಾಡಿದ ಗಾಂಧೀಜಿಗೆ ಆದ ಅವಮಾನ, ನಿಂದನೆ ಯಾವ ಭಾರತೀಯನು ಸಹಿಸಲು ಸಾಧ್ಯವಿಲ್ಲಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿತಿಳಿಸಿದ್ದಾರೆ.

ಪ್ರತಿಷ್ಠಾನದ ಎಸ್‌.ಬಿ.ಅಶೋಕ್‌ ಕುಮಾರ್‌, ಕಾರ್ತಿಕ್‌, ಶ್ರೀನಿವಾಸನ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ