ಆ್ಯಪ್ನಗರ

ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ

ಜಾರ್ಖಂಡ್‌ ರಾಜ್ಯದಲ್ಲಿ ಇತ್ತೀಚೆಗೆ ತಬ್ರೀಜ್‌ ಅನ್ಸಾರಿ ಎಂಬ ಅಲ್ಪಸಂಖ್ಯಾತ ಸಮುದಾಯದ ಯುವಕನ ಹತ್ಯೆ ಖಂಡಿಸಿ ಶಿರಾಳಕೊಪ್ಪದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 30 Jun 2019, 5:00 am
ಶಿರಾಳಕೊಪ್ಪ: ಜಾರ್ಖಂಡ್‌ ರಾಜ್ಯದಲ್ಲಿ ಇತ್ತೀಚೆಗೆ ತಬ್ರೀಜ್‌ ಅನ್ಸಾರಿ ಎಂಬ ಅಲ್ಪಸಂಖ್ಯಾತ ಸಮುದಾಯದ ಯುವಕನ ಹತ್ಯೆ ಖಂಡಿಸಿ ಶಿರಾಳಕೊಪ್ಪದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web SMR-28SLKP01 PHOTO 01


ಇತ್ತಿಹಾದ್‌ ಫೌಂಡೇಶನ್‌ ಶಿರಾಳಕೊಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ನೇತೃತ್ವದಲ್ಲಿ ಪಟ್ಟಣದ ಎಚ್‌.ಕೆ ರಸ್ತೆಯಿಂದ ಮೆರವಣಿಗೆ ನಡೆಸಿ, ಬಸ್‌ ನಿಲ್ದಾಣ ಸರ್ಕಲ್‌ನಲ್ಲಿ ನೂರಾರು ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ, ತಬ್ರೀಜ್‌ ಅನ್ಸಾರಿ ಹತ್ಯೆ ಖಂಡಿಸಿ ಘೋಷಣೆ ಕೂಗಿದರು. ನಂತರ ನಾಡ ಕಚೇರಿಗೆ ತೆರಳಿ ಉಪ ತಹಸೀಲ್ದಾರ್‌ ಆನಂದ ಗರಡಿ ಅವರಿಗೆ ಮನವಿ ಸಲ್ಲಿಸಿದರು.

ಇತ್ತಿಹಾದ್‌ ಫೌಂಡೇಶನ್‌ ಅಧ್ಯಕ್ಷ ನವಿದ್‌ ಮಾತನಾಡಿ, ನಮ್ಮ ದೇಶವು ಹಲವಾರು ಜಾತಿ, ಧರ್ಮಗಳ ಸಂಸ್ಕೃತಿ ಹೊಂದಿರುವುದಾಗಿದೆ. ಆದರೆ, ತಬ್ರೀಜ್‌ ಅನ್ಸಾರಿಯನ್ನು ಅಮಾನುಷವಾಗಿ ಹತ್ಯೆಗೈದಿರುವುದು ಈ ದೇಶದ ದುರಂತವೇ ಸರಿ ಎಂದರು.

ದನದ ಮಾಂಸ ಹೆಸರಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ. ದನದ ಮಾಂಸ ನಮಗೆ ಬೇಕೆಂದು ನಾವು ಹೇಳುತ್ತಿಲ್ಲ. ಸರಕಾರವೇ ಅಧಿಕ ಲಾಭಕ್ಕಾಗಿ ದನದ ಮಾಂಸ ರಫ್ತುಮಾಡಿ ಹಣ ಗಳಿಸುತ್ತಿದೆ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಈ ದೇಶದ ದಲಿತರು, ಅಲ್ಪಸಂಖ್ಯಾತರು ಶಾಂತಿ ಪ್ರಿಯರಾಗಿದ್ದಾರೆ. ಇಂತಹ ಅಮಾನವೀಯ ಕೃತ್ಯ ನಿಲ್ಲದೆ ಹೋದರೆ ಮುಂದೆ ತೀವ್ರ ಹೋರಾಟ ಅನಿವಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸಂಜೀದ್‌, ಸದಸ್ಯರಾದ ನದೀಮ್‌ ಶಾ, ಅರ್ಶೀಲ್‌, ಮೋಹ್ಸಿನ್‌, ರಬ್ಬಾನಿ, ರಬ್ಬಿ, ಸಮೀವುಲ್ಲಾ, ಇಮ್ತಿಯಾಜ್‌, ಮುನ್ನಾ, ಬಿಲಾಲ್‌, ಮುದಾಸಿರ್‌, ಮಕುಬುಲ್‌, ಜಬ್ಬಾರ್‌ ಸಾಬ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ