ಆ್ಯಪ್ನಗರ

ಗುಂಜನೂರು ಗ್ರಾಮಸ್ಥರಿಂದ ಪ್ರತಿಭಟನೆ

ಶಾಲಾ ಅಭಿವೃದ್ಧಿಗಾಗಿ ಮೀಸಲಿಟ್ಟ ಜಾಗವನ್ನು ವ್ಯಕ್ತಿಯೊಬ್ಬರು ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ಗುಂಜನೂರು ಗ್ರಾಮಸ್ಥರು ಒತ್ತುವರಿ ಸ್ಥಳದಲ್ಲಿಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 17 Nov 2019, 5:00 am
ಸೊರಬ: ಶಾಲಾ ಅಭಿವೃದ್ಧಿಗಾಗಿ ಮೀಸಲಿಟ್ಟ ಜಾಗವನ್ನು ವ್ಯಕ್ತಿಯೊಬ್ಬರು ಅಕ್ರಮವಾಗಿ ಭೂ ಕಬಳಿಕೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ಗುಂಜನೂರು ಗ್ರಾಮಸ್ಥರು ಒತ್ತುವರಿ ಸ್ಥಳದಲ್ಲಿಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web protest by gunjanur villagers
ಗುಂಜನೂರು ಗ್ರಾಮಸ್ಥರಿಂದ ಪ್ರತಿಭಟನೆ


ಗ್ರಾಮದ ಸರ್ವೆ ನಂ.50ರಲ್ಲಿಪ್ರೌಢಶಾಲೆ ಆವರಣಕ್ಕೆ ಹೊಂದಿಕೊಂಡಿರುವ 3.36 ಎಕರೆ ಜಮೀನನ್ನು ಉಮೇಶ್‌ ಎಂಬುವರು ರಾಜಕೀಯ ಪ್ರಭಾವ ಬಳಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದರು. ಈ ಬಗ್ಗೆ ಖಾತೆ ಮಾಡಿಸಿಕೊಂಡ ವ್ಯಕ್ತಿಯ ಹೆಸರಿಗಿದ್ದ ಭೂಮಿಯ ಹಕ್ಕು ವಜಾಗೊಳಿಸುವಂತೆ ಗ್ರಾಮದಿಂದ ನ್ಯಾಯಾಲಯ ಮೊರೆ ಹೋಗಿದ್ದು, ಕೋರ್ಟ್‌ ಮಂಜೂರಾಗಿದ್ದ ಭೂಮಿಯ ಖಾತೆ ರದ್ದುಪಡಿಸಿ ಆದೇಶ ಹೊರಡಿಸಿದೆ.

ಈ ನಡುವೆಯೂ ಉಮೇಶ್‌ ಅವರು ರಾಜಕೀಯ ಬಲದಿಂದ ಅಕ್ರಮವಾಗಿ ಗಿಡಮರಗಳನ್ನು ಕಡಿದು ಸಾಗುವಳಿ ಮಾಡಲು ಮುಂದಾಗಿದ್ದು, ಅಲ್ಲದೇ ಪಾಳು ಭೂಮಿಯಲ್ಲಿಅಡಕೆ, ಬಾಳೆ ಸಸಿಗಳನ್ನು ತಂದಿಟ್ಟು ಗ್ರಾಮಸ್ಥರು ಕಿತ್ತು ಹಾಕಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಭೂಮಿ ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮಸ್ಥರಾದ ಬಲೀಂದ್ರ, ರಾಮಪ್ಪ, ಶಿವಪ್ಪ, ಸುರೇಂದ್ರ, ಬಂಗಾರಪ್ಪ, ಮಂಜಪ್ಪ, ಕಾಳಪ್ಪ, ರಮೇಶ, ದಾನಪ್ಪ, ನಾರಾಯಣಪ್ಪ, ಪರಸಪ್ಪ, ಗ್ರಾ.ಪಂ. ಸದಸ್ಯರಾದ ಚಂದ್ರಪ್ಪ, ಸತೀಶಗೌಡ, ಹುಚ್ಚಪ್ಪ ಮತ್ತಿತರರು ಪಾಲ್ಗೊಂಡಿದ್ದರು.

===============
ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಲ್ಲಿಶಾಲಾ ಕಾಲೇಜುಗಳ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲು ಗ್ರಾಮಸ್ಥರು ಚಿಂತನೆ ನಡೆಸಿರುವುದರಿಂದ ಯಾವುದೇ ಕಾರಣಕ್ಕೂ ಅಕ್ರಮ ಭೂ ಕಬಳಿಕೆ ಮಾಡಲು ಬಿಡುವುದಿಲ್ಲಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ