ಶಿಕಾರಿಪುರ: ಕಳೆದ ಹದಿನೈದು ದಿನಗಳಿಂದ ವೈದ್ಯರು ಕರ್ತವ್ಯಕ್ಕೆ ಹಾಜರಾಗದಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಘಟಕದಲ್ಲಿಗುರುವಾರ ನಡೆದಿದೆ.
ಕಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಘಟಕ 24 ಗಂಟೆ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆಯಾದರೂ 3 ತಿಂಗಳಿನಿಂದ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಿತ್ಯ ಆಗಮಿಸುವ ರೋಗಿಗಳು ವೈದ್ಯ ಸಿಬ್ಬಂದಿಗೆ ಹಿಡಿಶಾಪ ಹಾಕಿ ಮನೆಗೆ ಮರಳುತ್ತಿದ್ದಾರೆ. ಹಣ ಇದ್ದವರು ಪಟ್ಟಣಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ವೈದ್ಯರು ಆಗಮಿಸುವವರೆಗೂ ವಾಪಸ್ ತೆರಳುವುದಿಲ್ಲಎಂದು ಪಟ್ಟು ಹಿಡಿದರು.
ಗ್ರಾಮದ ಮುಖಂಡ ಗಣೇಶ್ ಮಾತನಾಡಿ, ಈ ಆಸ್ಪತ್ರೆಯಲ್ಲಿದ್ದ ವೈದ್ಯ ಚಂದ್ರಪ್ಪ ಇದೀಗ ಚಿಕ್ಕಜೋಗಿಹಳ್ಳಿಯಲ್ಲೂಹೆಚ್ಚುವರಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿ ಕೆಲಸದ ನಡುವೆ ರೋಗಿಗಳಿಗೆ ಸರಿಯಾಗಿ ಸ್ಪಂದಿಸಲು, ಚಿಕಿತ್ಸೆ ನೀಡುವುದಕ್ಕೆ ಆಗುತ್ತಿಲ್ಲ. ಈ ಕುರಿತು ಡಿಎಚ್ಒ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪುನೇದಹಳ್ಳಿ, ಜಕ್ಕನಹಳ್ಳಿ, ಅಂಬಾರಗೊಪ್ಪ, ಉಡುಗಣಿ, ಕಣಿವೆಮನೆ ಸೇರಿ ಹಲವು ಗ್ರಾಮದ ಗರ್ಭಿಣಿಯರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುತ್ತಾರೆ. ಶಿಕಾರಿಪುರ ಸರಕಾರಿ ಆಸ್ಪತ್ರೆ ಬಿಟ್ಟರೆ ಇಲ್ಲಿಯೇ ಹೆಚ್ಚು ಹೆರಿಗೆ ಆಗುತ್ತದೆ. ಅದಕ್ಕಾಗಿ ಇಲ್ಲಿಗೆ ಕಾಯಂ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ಜಿ.ಪಂ.ಸದಸ್ಯ ನರಸಿಂಗನಾಯ್ಕ ಆಗಮಿಸಿ ಡಿಎಚ್ಒ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ನಂತರ, ವೈದ್ಯ ಚಂದ್ರಪ್ಪ, ಹೋತನಕಟ್ಟೆ ವೈದ್ಯ ನವೀದ್ ಸ್ಥಳಕ್ಕೆ ಆಗಮಿಸಿದರಲ್ಲದೇ ಸೋಮವಾರಕ್ಕೆ ಕಾಯಂ ವೈದ್ಯರನ್ನು ನೇಮಿಸುವ ಭರವಸೆ ನೀಡಿದರು. ಅಲ್ಲಿಯವರೆಗೆ ಇಬ್ಬರೂ ವೈದ್ಯರು ನಿತ್ಯ ರೋಗಿಗಳ ತಪಾಸಣೆ ನಡೆಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಗ್ರಾ.ಪಂ.ಅಧ್ಯಕ್ಷ ಹಾಲೇಶಪ್ಪ, ಉಪಾಧ್ಯಕ್ಷೆ ಶಾರದಮ್ಮ, ಗದಿಗೆಪ್ಪ, ಗಂಗಾಧರ ಸೇರಿದಂತೆ ನೂರಾರು ಜನರು ಇದ್ದರು.
ಕಪ್ಪನಹಳ್ಳಿ ಪ್ರಾಥಮಿಕ ಆರೋಗ್ಯ ಘಟಕ 24 ಗಂಟೆ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆಯಾದರೂ 3 ತಿಂಗಳಿನಿಂದ ವೈದ್ಯರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಿತ್ಯ ಆಗಮಿಸುವ ರೋಗಿಗಳು ವೈದ್ಯ ಸಿಬ್ಬಂದಿಗೆ ಹಿಡಿಶಾಪ ಹಾಕಿ ಮನೆಗೆ ಮರಳುತ್ತಿದ್ದಾರೆ. ಹಣ ಇದ್ದವರು ಪಟ್ಟಣಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ವೈದ್ಯರು ಆಗಮಿಸುವವರೆಗೂ ವಾಪಸ್ ತೆರಳುವುದಿಲ್ಲಎಂದು ಪಟ್ಟು ಹಿಡಿದರು.
ಗ್ರಾಮದ ಮುಖಂಡ ಗಣೇಶ್ ಮಾತನಾಡಿ, ಈ ಆಸ್ಪತ್ರೆಯಲ್ಲಿದ್ದ ವೈದ್ಯ ಚಂದ್ರಪ್ಪ ಇದೀಗ ಚಿಕ್ಕಜೋಗಿಹಳ್ಳಿಯಲ್ಲೂಹೆಚ್ಚುವರಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿ ಕೆಲಸದ ನಡುವೆ ರೋಗಿಗಳಿಗೆ ಸರಿಯಾಗಿ ಸ್ಪಂದಿಸಲು, ಚಿಕಿತ್ಸೆ ನೀಡುವುದಕ್ಕೆ ಆಗುತ್ತಿಲ್ಲ. ಈ ಕುರಿತು ಡಿಎಚ್ಒ ಅವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪುನೇದಹಳ್ಳಿ, ಜಕ್ಕನಹಳ್ಳಿ, ಅಂಬಾರಗೊಪ್ಪ, ಉಡುಗಣಿ, ಕಣಿವೆಮನೆ ಸೇರಿ ಹಲವು ಗ್ರಾಮದ ಗರ್ಭಿಣಿಯರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿಆಗಮಿಸುತ್ತಾರೆ. ಶಿಕಾರಿಪುರ ಸರಕಾರಿ ಆಸ್ಪತ್ರೆ ಬಿಟ್ಟರೆ ಇಲ್ಲಿಯೇ ಹೆಚ್ಚು ಹೆರಿಗೆ ಆಗುತ್ತದೆ. ಅದಕ್ಕಾಗಿ ಇಲ್ಲಿಗೆ ಕಾಯಂ ವೈದ್ಯರನ್ನು ನೇಮಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ಜಿ.ಪಂ.ಸದಸ್ಯ ನರಸಿಂಗನಾಯ್ಕ ಆಗಮಿಸಿ ಡಿಎಚ್ಒ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ನಂತರ, ವೈದ್ಯ ಚಂದ್ರಪ್ಪ, ಹೋತನಕಟ್ಟೆ ವೈದ್ಯ ನವೀದ್ ಸ್ಥಳಕ್ಕೆ ಆಗಮಿಸಿದರಲ್ಲದೇ ಸೋಮವಾರಕ್ಕೆ ಕಾಯಂ ವೈದ್ಯರನ್ನು ನೇಮಿಸುವ ಭರವಸೆ ನೀಡಿದರು. ಅಲ್ಲಿಯವರೆಗೆ ಇಬ್ಬರೂ ವೈದ್ಯರು ನಿತ್ಯ ರೋಗಿಗಳ ತಪಾಸಣೆ ನಡೆಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಗ್ರಾ.ಪಂ.ಅಧ್ಯಕ್ಷ ಹಾಲೇಶಪ್ಪ, ಉಪಾಧ್ಯಕ್ಷೆ ಶಾರದಮ್ಮ, ಗದಿಗೆಪ್ಪ, ಗಂಗಾಧರ ಸೇರಿದಂತೆ ನೂರಾರು ಜನರು ಇದ್ದರು.