ಆ್ಯಪ್ನಗರ

ಮೀಸಲು ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ

ಪರಿಶಿಷ್ಟ ಪಂಗಡಕ್ಕೆ ಈಗ ನೀಡುತ್ತಿರುವ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ತಾಲೂಕು ವಾಲ್ಮೀಕಿ ಮಹರ್ಷಿ ನಾಯಕ ಸಮಾಜದಿಂದ ಗುರುವಾರ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

Vijaya Karnataka 8 Jun 2019, 5:00 am
ಶಿಕಾರಿಪುರ: ಪರಿಶಿಷ್ಟ ಪಂಗಡಕ್ಕೆ ಈಗ ನೀಡುತ್ತಿರುವ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ತಾಲೂಕು ವಾಲ್ಮೀಕಿ ಮಹರ್ಷಿ ನಾಯಕ ಸಮಾಜದಿಂದ ಗುರುವಾರ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
Vijaya Karnataka Web SMR-6SKP7


ಸಮಾಜದ ತಾಲೂಕು ಅಧ್ಯಕ್ಷ ಎಚ್‌.ಹನುಮಂತಪ್ಪ ಮಾತನಾಡಿ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಕೇವಲ ಶೇ.3 ಮಾತ್ರ ಮೀಸಲಾತಿ ನೀಡಲಾಗುತ್ತಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಎಸ್ಟಿ ಜನಸಂಖ್ಯೆ 42.48ಲಕ್ಷ ದಷ್ಟಿದ್ದು, ರಾಜ್ಯದ ಜನಸಂಖ್ಯೆಯಲ್ಲಿ ಶೇ. 6.95ರಷ್ಟಿದೆ. ಹೆಚ್ಚುತ್ತಿರುವ ಜನಸಂಖ್ಯೆ ಆಧಾರದಲ್ಲಿ ನಮ್ಮ ಜನಾಂಗಕ್ಕೆ ಕನಿಷ್ಠ ಶೇ.7 ಮೀಸಲು ನೀಡಬೇಕು ಎಂದರು.

ರಾಜ್ಯದ ಹಲವೆಡೆ ಎಸ್ಟಿ ಜನಾಂಗದ ಸರ್ಟಿಫಿಕೇಟ್‌ ಪಡೆದು ಮೋಸ ಮಾಡುವ ಪ್ರಕರಣವೂ ಹೆಚ್ಚಾಗಿದೆ. ತಹಸೀಲ್ದಾರ್‌ ಮಟ್ಟದಲ್ಲಿ ಹಲವು ಮೇಲ್ಮಟ್ಟದ ಜಾತಿಯವರು ಸೌಲಭ್ಯ ಪಡೆದುಕೊಳ್ಳುತ್ತಿದ್ದು ಅದನ್ನು ನಿಲ್ಲಿಸಬೇಕು, ಈಗಾಗಲೆ ನೀಡಿರುವ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಸಮಾಜದ ಮುಖಂಡರಾದ ಸುರೇಶ್‌, ಮಾರವಳ್ಳಿ ಉಮೇಶ್‌, ಮೇಘರಾಜ್‌, ಎಂ.ಎಚ್‌.ಮಲ್ಲಿಕಾರ್ಜುನ್‌, ಹಾಲಪ್ಪ, ಸುರೇಶ್‌, ಸಿದ್ದಪ್ಪ, ಜಗದೀಶ್‌, ಕರಿಬಸಪ್ಪ, ಬಸವರಾಜ್‌, ಬಸವಣ್ಯಪ್ಪ, ಜಯಪ್ಪ, ಕೆ.ಎಸ್‌.ಹುಚ್ರಾಯಪ್ಪ, ನಾಗರಾಜ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ