ಆ್ಯಪ್ನಗರ

8ಕ್ಕೆ ಕಾರ್ಮಿಕ ಸಂಘಟನೆಯಿಂದ ಬೃಹತ್‌ ಪ್ರತಿಭಟನೆ

ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಜ.8 ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಎಸ್‌.ಬಿ.ಶಿವಶಂಕರ್‌ ಹೇಳಿದರು.

Vijaya Karnataka 4 Jan 2020, 5:00 am
ಶಿವಮೊಗ್ಗ: ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಜ.8 ರಂದು ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಎಸ್‌.ಬಿ.ಶಿವಶಂಕರ್‌ ಹೇಳಿದರು.
Vijaya Karnataka Web protest from labour organisation on 8th
8ಕ್ಕೆ ಕಾರ್ಮಿಕ ಸಂಘಟನೆಯಿಂದ ಬೃಹತ್‌ ಪ್ರತಿಭಟನೆ


ಸುದ್ದಿಗೋಷ್ಠಿಯಲ್ಲಿಶುಕ್ರವಾರ ಅವರು ಮಾತನಾಡಿ, ಕೇಂದ್ರ ಸರಕಾರದ ಕಾರ್ಮಿಕ ನೀತಿಗಳ ವಿರುದ್ಧ ಜ.8ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಇದರ ಅಂಗವಾಗಿ ಜಿಲ್ಲೆಯಲ್ಲೂಕೂಡ ಮುಷ್ಕರ ನಡೆಸಲಾಗುವುದು. ಅಂದು ಸೈನ್ಸ್‌ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್‌ ಮೆರವಣಿಗೆಯಲ್ಲಿಸಾಗಿ ನಂತರ ಮನವಿ ಸಲ್ಲಿಸಲಾಗುವುದು ಎಂದರು.

ರಾಷ್ಟ್ರದಲ್ಲಿಆರ್ಥಿಕತೆ ಕುಂಠಿತವಾಗುತ್ತಿದೆ. ಉತ್ಪಾದನೆ ನಿಂತುಹೋಗಿದೆ. ಸುಮಾರು 10 ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಕೇಂದ್ರ ಸರಕಾರ ಕಾಪೋರ್‍ರೇಟ್‌ ವಲಯಕ್ಕೆ, ಬಂಡವಾಳಗಾರರಿಗೆ ಸಾವಿರಾರು ಕೋಟಿ ರೂ.ಗಳ ರಿಯಾಯಿತಿ ನೀಡಿದೆ. ಶ್ರಮಿಕರ ವರ್ಗ ಅತ್ಯಂತ ಸಂಕಷ್ಟದಲ್ಲಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ನಾರಾಯಣ, ಕೆ.ಪ್ರಭಾಕರನ್‌, ಹನುಮಮ್ಮ, ಬಂಗಾರಪ್ಪ, ಕೆ.ಪ್ರಕಾಶ್‌ ಇದ್ದರು.

----
ಉದ್ಯೋಗ ಸೃಷ್ಟಿ, ಕಾರ್ಮಿಕರ ಪರ ಕಾಯಿದೆ, ಬಂಡವಾಳಶಾಹಿಗಳಿಗೆ ಮಣೆ ಹಾಕಬಾರದು, ಗುತ್ತಿಗೆ ಪದ್ದತಿ ರದ್ದು, ಕನಿಷ್ಠ ವೇತನ ಜಾರಿ, 10 ಸಾವಿರ ಕನಿಷ್ಠ ಪಿಂಚಣಿ ವೇತನ, ಬೆಲೆ ಏರಿಕೆ ನಿಯಂತ್ರಣ, ಅಸಂಘಟಿತ ಕಾರ್ಮಿಕರಿಗೆ ಯೋಜನೆ, ಸ್ವಾಮಿನಾಥನ್‌ ವರದಿ ಜಾರಿಮಾಡಬೇಕು, ರೈತರ ಬೆಳೆಗಳಿಗೆ ಬೆಲೆ ಸಿಗಬೇಕು, ಆತ್ಮಹತ್ಯೆ ತಡೆಯಬೇಕು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಲಪಡಿಸಬೇಕು.

-ಎಸ್‌.ಬಿ.ಶಿವಶಂಕರ್‌, ಜೆಸಿಟಿಯು ಜಿಲ್ಲಾಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ