ಆ್ಯಪ್ನಗರ

ಅವೈಜ್ಞಾನಿಕ ವಾಹನ ನಿಲುಗಡೆ ಖಂಡಿಸಿ ಪ್ರತಿಭಟನೆ

ನಗರದ ಮಾಲ್‌, ಕಾಂಪ್ಲೆಕ್ಸ್‌ ಬಳಿ ಅವೈಜ್ಞಾನಿಕ ವಾಹನ ನಿಲುಗಡೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಲೆನಾಡು ಕನ್ನಡ ಪಡೆಯಿಂದ ಮಂಗಳವಾರ ನಗರದ ಗೋಪಿವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

Vijaya Karnataka 13 Nov 2019, 3:37 pm
ಶಿವಮೊಗ್ಗ: ನಗರದ ಮಾಲ್‌, ಕಾಂಪ್ಲೆಕ್ಸ್‌ ಬಳಿ ಅವೈಜ್ಞಾನಿಕ ವಾಹನ ನಿಲುಗಡೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮಲೆನಾಡು ಕನ್ನಡ ಪಡೆಯಿಂದ ಮಂಗಳವಾರ ನಗರದ ಗೋಪಿವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.
Vijaya Karnataka Web protest to condemn unscientific vehicle parking
ಅವೈಜ್ಞಾನಿಕ ವಾಹನ ನಿಲುಗಡೆ ಖಂಡಿಸಿ ಪ್ರತಿಭಟನೆ


ನಗರದ ಅಮೀರ್‌ ಅಹಮ್ಮದ್‌ ವೃತ್ತದಲ್ಲಿರುವ ಸಿಟಿ ಸೆಂಟರ್‌ ಮಾಲ್‌, ಗೋಪಿ ವೃತ್ತದ ಇಕ್ಕೆಲಗಳಲ್ಲಿ, ಶಿವಪ್ಪ ನಾಯಕ ಮಾರುಕಟ್ಟೆ ಆವರಣ, ಶಿವಮೂರ್ತಿ ಸರ್ಕಲ್‌, ಮೆಟ್ರೊ ಆಸ್ಪತ್ರೆ ಆವರಣ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ ನಿಲ್ದಾಣ ಆವರಣ ಸೇರಿದಂತೆ ಪ್ರತಿಷ್ಠಿತ ಅಂಗಡಿ, ಮಾಲ್‌ಗಳ ಮುಂಭಾಗದಲ್ಲಿಅವೈಜ್ಞಾನಿಕವಾಗಿ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದ ಸಾರ್ವಜನಿಕರು ಟ್ರಾಫಿಕ್‌ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿಮಲೆನಾಡು ಕನ್ನಡ ಪಡೆ ಜಿಲ್ಲಾಧ್ಯಕ್ಷ ಮಂಜುನಾಥ ಪೂಜಾರಿ, ಎ.ಶಂಕರ್‌, ನಾಗರಾಜ್‌, ಮನೋಹರ ಮರಡಿ ಮತ್ತಿತರರು ಹಾಜರಿದ್ದರು.

------------------

ಬಿ.ಎಚ್‌.ರಸ್ತೆ, ಸವಳಂಗ ರಸ್ತೆ, ನೆಹರೂ ರಸ್ತೆ, ಜೈಲು ರಸ್ತೆಗಳಲ್ಲಿಎಲ್ಲೆಂದರಲ್ಲಿಅವೈಜ್ಞಾನಿಕವಾಗಿ ವಾಹನಗಳ ನಿಲುಗಡೆ ಮಾಡುವುದನ್ನು ನಿಷೇಧಿಸಿ ವೈಜ್ಞಾನಿಕ ರೀತಿಯಲ್ಲಿನಿಲುಗಡೆಗೆ ಅನುವು ಮಾಡಿಕೊಡಬೇಕು. ಹೋಟೆಲ್‌, ಮಾಲ್‌, ಆಸ್ಪತ್ರೆಗಳಲ್ಲಿಪಾರ್ಕಿಂಗ್‌ ಬಳಸದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಮಲೆನಾಡು ಕನ್ನಡ ಪಡೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ