ಆ್ಯಪ್ನಗರ

ಕಾಗೋಡರಿಂದ ಹುಸಿ ರೈತ ಕಾಳಜಿ: ಹಾಲಪ್ಪ

192 ಎ ಕಾಯಿದೆಗೆ ತಿದ್ದುಪಡಿ ಬಿಜೆಪಿ ಸರಕಾರದ ಅವಧಿಯಲ್ಲಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಆಗಿದೆ ಎಂದು ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜನರಿಗೆ ಭೂಮಿಹಕ್ಕು ಕೊಡುತ್ತೇನೆ ಎಂದು ವೀರಾವೇಶದಿಂದ ಹೇಳುವ ಕಾಗೋಡು ತಿಮ್ಮಪ್ಪ ಅವರು 192 ಎ ಕಾಯಿದೆಗೆ ತಿದ್ದುಪಡಿ ಮಾಡುವ ಬಗ್ಗೆ ಕಂದಾಯ ಸಚಿವರಾಗಿದ್ದಾಗ ಯಾಕೆ ಪ್ರಯತ್ನ ಮಾಡಲಿಲ್ಲ ಎಂದು ಶಾಸಕ ಎಚ್‌.ಹಾಲಪ್ಪ ಪ್ರಶ್ನಿಸಿದರು.

Vijaya Karnataka 28 Nov 2018, 5:00 am
ಸಾಗರ: 192 ಎ ಕಾಯಿದೆಗೆ ತಿದ್ದುಪಡಿ ಬಿಜೆಪಿ ಸರಕಾರದ ಅವಧಿಯಲ್ಲಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಆಗಿದೆ ಎಂದು ಕಾಂಗ್ರೆಸ್ಸಿಗರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಜನರಿಗೆ ಭೂಮಿಹಕ್ಕು ಕೊಡುತ್ತೇನೆ ಎಂದು ವೀರಾವೇಶದಿಂದ ಹೇಳುವ ಕಾಗೋಡು ತಿಮ್ಮಪ್ಪ ಅವರು 192 ಎ ಕಾಯಿದೆಗೆ ತಿದ್ದುಪಡಿ ಮಾಡುವ ಬಗ್ಗೆ ಕಂದಾಯ ಸಚಿವರಾಗಿದ್ದಾಗ ಯಾಕೆ ಪ್ರಯತ್ನ ಮಾಡಲಿಲ್ಲ ಎಂದು ಶಾಸಕ ಎಚ್‌.ಹಾಲಪ್ಪ ಪ್ರಶ್ನಿಸಿದರು.
Vijaya Karnataka Web pseudo farmer care halappa
ಕಾಗೋಡರಿಂದ ಹುಸಿ ರೈತ ಕಾಳಜಿ: ಹಾಲಪ್ಪ


ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಾಗರ ಮತ್ತು ಹೊಸನಗರ ಭಾಗದಲ್ಲಿ ಎಚ್‌. ಹಾಲಪ್ಪ ಗೆದ್ದು ಬಂದ ಮೇಲೆಯೆ ರೈತರಿಗೆ ಅರಣ್ಯ ಇಲಾಖೆಯಿಂದ ನೋಟಿಸ್‌ ನೀಡಲಾಗುತ್ತಿದೆ ಎಂಬ ಭಾವನೆ ಮೂಡುವಂತೆ ಮಾತನಾಡಲಾಗುತ್ತದೆ. ಆದರೆ, ರೈತ ಪರ ಕಾಳಜಿ ಇಟ್ಟುಕೊಂಡಿದ್ದ ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದಾಗ 192ಎ ಕಾಯಿದೆಗೆ ತಿದ್ದುಪಡಿ ಮಾಡಿದ್ದರೆ ರೈತರು ಬೆಂಗಳೂರಿನ ಕೋರ್ಟ್‌ಗೆ ಅಲೆಯುವ ಸ್ಥಿತಿ ಬರುತ್ತಿರಲಿಲ್ಲ ಎಂದು ಎಂದರು.

1964ರಲ್ಲಿ 192 ಎ ಕಾಯಿದೆ ಮೂಲಕ ಷಹರಗಳಲ್ಲಿನ ಭೂಕಬಳಿಕೆ ನಿಯಂತ್ರಣಕ್ಕೆ ಕಡಿವಾಣ ಹಾಕಲು ಉದ್ದೇಶಿಸಲಾಗಿದೆ. ಆದರೆ, ಮಲೆನಾಡು ಭಾಗದ ರೈತರು ಪರದಾಡುವ ಸ್ಥಿತಿ ಇದೆ. ನಂತರ ಬಂದ ಸರಕಾರಗಳು ಈ ಕಾಯಿದೆ ತಿದ್ದುಪಡಿಗೆ ಯತ್ನಿಸಲಿಲ್ಲ. ಈಗ ಪಕ್ಷಾತೀತವಾಗಿ ಹೋರಾಟ ಮಾಡುವ ಮಾತನಾಡುತ್ತಿರುವ ಬಿ.ಆರ್‌.ಜಯಂತ್‌ ಪತ್ರಿಕಾಗೋಷ್ಠಿ ವೇಳೆ ತಮ್ಮದೆ ಪಕ್ಷ ದವರನ್ನು ಮಾತ್ರ ಇರಿಸಿಕೊಂಡಿದ್ದರು. ಮಸರೂರು ಜನ ಮತ ಬಹಿಷ್ಕಾರ ಹಾಕಿದ್ದಾಗ ನಾನು ಎಲ್ಲ ಪಕ್ಷ ದವರನ್ನೂ ಕರೆದುಕೊಂಡು ಹೋಗಿದ್ದೆ. ಯಾವ ಪಕ್ಷ ದವರಿಗಾದರೂ ಅಡ್ಡಿಲ್ಲ; ಆದರೆ ಮತ ಹಾಕಿ ಎಂದು ಗ್ರಾಮಸ್ಥರಿಗೆ ಕೋರಿದ್ದೆ ಎಂದು ತಿಳಿಸಿದರು.

ಹಿಂದಿನಿಂದಲೂ ಕಾಗೋಡು ತಿಮ್ಮಪ್ಪ ಅವರು ಕ್ಷೇತ್ರ ವ್ಯಾಪ್ತಿಯ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದೀವರನ್ನು ಇರಿಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹಿಂದೆ ಧರ್ಮಪ್ಪ, ಎಲ್‌.ಟಿ.ತಿಮ್ಮಪ್ಪ ಸೇರಿದಂತೆ ಯಾರೆ ಶಾಸಕರಾಗಿದ್ದರೂ ಕಾಗೋಡು ಪರೋಕ್ಷ ವಾಗಿ ತಮ್ಮ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಯಾರೇ ಎಂಎಲ್‌ಎ ಆದರೂ ಇವರದ್ದೇ ಆಡಳಿತ ನಡೆಸಿದ್ದಾರೆ. ತಮ್ಮ ಬಳಗದ ಆಡಳಿತ ನಡೆಸುವ, ಹೆಜ್ಜೆ ಹೆಜ್ಜೆಗೂ ಮೀಟಿಂಗ್‌ ಮಾಡುವ ಮನೋಭಾವ ತಿಮ್ಮಪ್ಪ ಅವರದ್ದಾಗಿದೆ. ಈಗ ನಾನು ಶಾಸಕನಾಗಿರುವುದು ಕಾಗೋಡು ತಿಮ್ಮಪ್ಪ ಅವರಿಗೆ ತೊಡಕಾಗಿದೆ. ಹಕ್ಕುಪತ್ರ ಕೊಡುತ್ತೇನೆ ಎಂದು ಗುಮ್ಮ ತೋರಿಸಿ ಕಾಗೋಡು ತಿಮ್ಮಪ್ಪ ಇನ್ನೆಷ್ಟು ದಿನ ದೀವರ ಜನಾಂಗವನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳುತ್ತಾರೆ. ಕಾಗೋಡು ತಿಮ್ಮಪ್ಪ ಅವರ ಬಗ್ಗೆ ಗೌರವ ಇದೆ. ಅಂದ ಮಾತ್ರಕ್ಕೆ ಅವರ ದಬ್ಬಾಳಿಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಾವೇ ಕ್ಷೇತ್ರದ ವಾರಸುದಾರರೆಂದು ಬಿಂಬಿಸಿಕೊಂಡು ನಡೆಸುವ ಡೋಂಗಿ ಹೋರಾಟಕ್ಕೆ ಕೊನೆ ಹಾಡಬೇಕೆಂದರು.

ಅರಣ್ಯ ಇಲಾಖೆ ನೋಟಿಸ್‌ ನೀಡುತ್ತಿರುವುದರಿಂದ ಸಾಕಷ್ಟು ರೈತರು ಆತಂಕದಲ್ಲಿದ್ದಾರೆ. ಮುಂದಿನ ಅಧಿವೇಶನದಲ್ಲಿ ರೈತರಿಗೆ ಅರಣ್ಯ ಇಲಾಖೆ ನೋಟಿಸ್‌ ನೀಡುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಸುವ ಜತೆಗೆ ಅದನ್ನು ತಕ್ಷ ಣ ತಡೆ ಹಿಡಿದು ರೈತರ ಹಿತ ರಕ್ಷ ಣೆ ಕಾಪಾಡಲು ಸದನದ ಒಳಗೆ ಮತ್ತು ಹೊರಗೆ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಯು.ಎಚ್‌.ರಾಮಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಡಿ.ಮೇಘರಾಜ್‌, ಕಾರ್ಯದರ್ಶಿ ಚೇತನರಾಜ ಕಣ್ಣೂರು, ತಾಲೂಕು ಅಧ್ಯಕ್ಷ ಪ್ರಸನ್ನ ಕೆರೆಕೈ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ