ಆ್ಯಪ್ನಗರ

ಹಲ್ಲೆಕೋರರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ

ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ನಿರಂತರ ದೌರ್ಜನ್ಯ ಖಂಡಿಸಿ ಮಂಗಳವಾರ ಮುಸ್ಲಿಂ ಮುತ್ತಹಿದ ಮಹಾಝ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Vijaya Karnataka 31 Jul 2019, 5:00 am
ಶಿವಮೊಗ್ಗ : ಅಲ್ಪಸಂಖ್ಯಾತರ ಮತ್ತು ದಲಿತರ ಮೇಲಿನ ನಿರಂತರ ದೌರ್ಜನ್ಯ ಖಂಡಿಸಿ ಮಂಗಳವಾರ ಮುಸ್ಲಿಂ ಮುತ್ತಹಿದ ಮಹಾಝ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
Vijaya Karnataka Web SMR-30GANESH2


ಜಾರ್ಖಂಡ್‌ನ ಯುವಕ ತಬ್ರೇಜ್‌ ಅನ್ಸಾರಿ ಎಂಬುವನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಇಡೀ ರಾಷ್ಟ್ರವೇ ತಲೆ ತಗ್ಗಿಸುವಂತಾಗಿದೆ. ಈ ತರಹದ ಘಟನೆಗಳು ದಲಿತರು, ಸಿಖ್ಖರು ಹಾಗೂ ಅಲ್ಪಸಂಖ್ಯಾತರ ಮೇಲೆ ಸತತ 5 ವರ್ಷಗಳಿಂದ ರಾಷ್ಟ್ರದಲ್ಲಿ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ತರಹದ ಗುಂಪು ಹಿಂಸಾಚಾರ ಘಟನೆಗಳಲ್ಲಿ ಸಾಕಷ್ಟು ಹಿಂದುಗಳು ಹಾಗೂ ಮುಸ್ಲಿಮರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹÜ ಘಟನೆಗಳು ದಾದ್ರಿ, ಜಾರ್ಖಂಡ್‌, ಅಲ್ವಾರ್‌, ಮಹಾರಾಷ್ಟ್ರದ ಖೈರಲಾಂಜಿ ಗ್ರಾಮ, ಬಾಂದ್ರ ಜಿಲ್ಲೆ ಹಾಗೂ ದೇಶದ ಇನ್ನೂ ಹಲವು ಕಡೆಗಳಲ್ಲಿ ನಡೆದಿದ್ದು, ಬಹಳಷ್ಟು ಜನ ಹತ್ಯೆಯಾಗಿದ್ದಾರೆ. ಇದರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಹಲ್ಲೆಕೋರರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಸ್ಲಿಂ ಮುತ್ತಹಿದ ಮಹಾಝ್‌ ಅಧ್ಯಕ್ಷ ಫರ್ವಿಜ್‌ ಅಹಮ್ಮದ್‌, ಸೈಯದ್‌ ಇಕ್ಬಾಲ್‌ ಪಾಷ, ಎಚ್‌.ಕೆ.ಅಬ್ದುಲ್‌ ವಾಜೀದ್‌, ಇಮ್ತಿಯಾಜ್‌ ಖಾನ್‌, ಮೌಲಾನ ಶಕಿಲ್‌ ಉಲ್ಲಾ ಖಾನ್‌, ಖಾಜಿ ಉಸ್ಮಾನ್‌, ಆಯ್ಯುಬ್‌ ಖಾನ್‌, ಅಬ್ದುಲ್‌ ವಾಹಬ್‌, ಎಂ.ಗುರುಮೂರ್ತಿ, ಎಸ್‌.ಬಿ.ಅಶೋಕ್‌ಕುಮಾರ್‌, ಕೆ.ಎಲ್‌.ಅಶೋಕ್‌, ಕೆ.ಪಿ.ಶ್ರೀಪಾಲ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ