ಆ್ಯಪ್ನಗರ

ಸಾಹಿತ್ಯದಿಂದ ಮಾನವನ ಅಂತಃಕರಣದ ಶುದ್ಧಿ

ಕೃತಿಗಳು ವ್ಯಕ್ತಿಯ ಅಂತಃಕರಣದ ಶುದ್ಧಿ ಮಾಡುವುದರೊಂದಿಗೆ ಬದುಕಿನ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಸ.ಚಿ.ರಮೇಶ ಹೇಳಿದರು.

Vijaya Karnataka 6 May 2019, 9:47 pm
ರಿಪ್ಪನ್‌ಪೇಟೆ: ಕೃತಿಗಳು ವ್ಯಕ್ತಿಯ ಅಂತಃಕರಣದ ಶುದ್ಧಿ ಮಾಡುವುದರೊಂದಿಗೆ ಬದುಕಿನ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಸ.ಚಿ.ರಮೇಶ ಹೇಳಿದರು.
Vijaya Karnataka Web SMR-5RPT1


ಶ್ರೀ ಕ್ಷೇತ್ರ ಹೂಂಬುಜ ಜೈನ ಮಠದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರುತ ಭಕ್ತಿ ಮತ್ತು 59 ವಿಭಿನ್ನ ಅಮೂಲ್ಯ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೈನ್ಯ ಸಾಹಿತ್ಯವು ವರ್ಣ ಮತ್ತು ಜಾತಿಯನ್ನು ಮೀರಿದ ಚೌಕಟ್ಟನ್ನು ಹೊಂದಿದೆ. ಹಾಗೇಯೆ ಜಗತ್ತಿನಲ್ಲಿ ಶ್ರೇಷ್ಠ ಕತೆಗಾರರು ಜೈನರು ಮತ್ತು ಭೌದ್ಧರು ಅಂದಿನ ಕಾಲದಲ್ಲಿಯೆ ಅನೇಕ ಕೃತಿಗಳನ್ನು ರಚಿಸಿ ಸಾಂಸ್ಕೃತಿಕ ಸಂವಿಧಾನದ ಮೂಲಕ ಅಪಾರ ಕೊಡುಗೆ ನೀಡಿ ಮಾನವನ ಕಲ್ಯಾಣಕ್ಕೆ ದಾರಿದೀಪವಾಗಿದ್ದಾರೆ ಎಂದರು.

ಖ್ಯಾತ ವಿದ್ವಾಂಸ ಡಾ.ಹಂ.ಪ. ನಾಗರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವಧರ್ಮದ ಸಮನ್ವಯವೇ ಇಂದಿನ ಜಗತ್ತಿಗೆ ಬೇಕಾದ ಸಂಜೀವಿನಿ. ಜೈನ ಧರ್ಮವು ಪ್ರಾಚೀನ ಧರ್ಮವಾಗಿದೆ. ಮಹಾನ್‌ ಆಚಾರ್ಯರುಗಳ ಕೃಪೆಯಿಂದ ತೀರ್ಥಂಕರರ ವಾಣಿ ಶಾಸ್ತ್ರ ರೂಪದಲ್ಲಿ ಉಪಲಬ್ಧವಿದೆ ಹಾಗೂ ಅದರ ರಸಸ್ವಾದವನ್ನು ಮಾಡುತ್ತ ಅನೇಕ ಭವ್ಯ ಜೀವಗಳು ಮೋಕ್ಷ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದರು.

ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ನಶಿಸಿ ಹೋಗುತ್ತಿದ್ದ ಜಿನವಾಣಿಯನ್ನು 20ನೇ ಶತಮಾನದಲ್ಲಿ ಶ್ರೀ ಶಾಂತಿಸಾಗರ ಮಹಾರಾಜರು ಮೊಟ್ಟಮೊದಲು ತಾಮ್ರ ಪತ್ರಗಳ ಮೇಲೆ ಲಿಪಿಬದ್ಧ ಮಾಡಿಸಿ, ಶಾಸ್ತ್ರ ಸಂವರ್ಧನೆಯ ಮಹಾನ್‌ ಕಾರ್ಯ ಮಾಡಿದ್ದಾರೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಆಚಾರ್ಯ ಶ್ರೀ 108 ವರ್ಧಮಾನಸಾಗರ ಮಹಾರಾಜರು ಮತ್ತು ಸಸಂಘದವರು ವಹಿಸಿದ್ದರು.

ಆಚಾರ್ಯಶ್ರೀ ಶಾಂತಿಸಾಗರರವರ ಮುನಿದೀಕ್ಷೆಯ ಶತಾಬ್ಧಿ ಹಾಗೂ 108 ಶ್ರೀ ವರ್ಥಮಾನಸಾಗರ ಮಹಾರಾಜರ ಮುನಿದೀಕ್ಷೆಯ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು.

ಕೊಲ್ಕತ್ತದಿಂದ ಆಗಮಿಸಿದ ಆನಂದ ಪ್ರಕಾಶ ಶಾಸ್ತ್ರಿ ಮತ್ತು ಜೈನ್‌ ಮಿಲನ್‌ ಭಕ್ತರಿಂದ ಧಾರ್ಮೀಕ ಕಾರ್ಯಕ್ರಮಗಳು ಜರುಗಿತು,

ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿ ನೂರಾರು ಸಂಖ್ಯೆಯ ಭಕ್ತರ ಜೋತೆಯಲ್ಲಿ ಜಿಲ್ಲೆಯ ಸಾಗರ , ಶಿವಮೊಗ್ಗ ಹಾಗೂ ತೀರ್ಥಹಳ್ಳಿ ತಾಲೂಕಿನ ಅಪಾರ ಭಕ್ತಾದಿಗಳು ಶೃತ ಭಕ್ತಿ ಧಾರ್ಮೀಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ