ಆ್ಯಪ್ನಗರ

ಶಿಕ್ಷಣ ವ್ಯವಸ್ಥೆಯ ಗುಣಾತ್ಮಕ ಮೌಲ್ಯಮಾಪನ ಅಗತ್ಯ

ಶಿಕ್ಷ ಣ ವ್ಯವಸ್ಥೆ ಹೆಚ್ಚು ಹೆಚ್ಚು ಸುಧಾರಣೆ ಕಾಣುತ್ತಿದೆ ಎಂದು ಗ್ರಹಿಸುವ ಬದಲು ಗುಣಾತ್ಮಕ ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ ಎಂದು ಬೆಂಗಳೂರಿನ ಜೋಷಿ ಫೌಂಡೇಷನ್‌ ಅಧ್ಯಕ್ಷ ಅಬಸೆ ದಿನೇಶ್‌ಕುಮಾರ್‌ ಜೋಷಿ ಹೇಳಿದರು.

Vijaya Karnataka 26 Jun 2018, 5:00 am
ಸಾಗರ: ಶಿಕ್ಷ ಣ ವ್ಯವಸ್ಥೆ ಹೆಚ್ಚು ಹೆಚ್ಚು ಸುಧಾರಣೆ ಕಾಣುತ್ತಿದೆ ಎಂದು ಗ್ರಹಿಸುವ ಬದಲು ಗುಣಾತ್ಮಕ ಮೌಲ್ಯಮಾಪನ ಮಾಡುವ ಅವಶ್ಯಕತೆಯಿದೆ ಎಂದು ಬೆಂಗಳೂರಿನ ಜೋಷಿ ಫೌಂಡೇಷನ್‌ ಅಧ್ಯಕ್ಷ ಅಬಸೆ ದಿನೇಶ್‌ಕುಮಾರ್‌ ಜೋಷಿ ಹೇಳಿದರು.
Vijaya Karnataka Web SMR-25SGR1


ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾರದಾಪುರದ ಇಕ್ಕೇರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಅಖಿಲ ಭಾರತ ಬ್ರಾಹ್ಮಿನ್‌ ವೆಲ್‌ಫೇರ್‌ ಸೊಸೈಟಿ ಉಚಿತವಾಗಿ ಕೊಡಮಾಡಿದ ನೋಟ್‌ಪುಸ್ತಕಗಳನ್ನು 8ರಿಂದ 10ನೇ ತರಗತಿ ಮಕ್ಕಳಿಗೆ ವಿತರಣೆ ಮಾಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ 625ಕ್ಕೆ 625 ಅಂಕಗಳನ್ನೂ ಪಡೆಯುವ ವಿದ್ಯಾರ್ಥಿಗಳಿದ್ದಾರೆ. ಇದು ಶೈಕ್ಷ ಣಿಕವಾಗಿ ಮಕ್ಕಳ ಓದು ಉತ್ತಮವಾಗಿದೆ ಎಂಬ ಕಾರಣಕ್ಕೆ ಎಂದು ತರ್ಕಿಸುವುದು ಸಂಪೂರ್ಣವಾಗಿ ಸರಿಯಾಗುವುದಿಲ್ಲ. ಈ ರೀತಿ ಜೇಬು ಭರ್ತಿ ಅಂಕಗಳನ್ನು ಪರೀಕ್ಷೆಗಳಲ್ಲಿ ದಯಪಾಲಿಸುವುದು ಒಂದು ಅಪಾಯಕಾರಿ ಮನೋಭಾವದ ಹುಟ್ಟಿಗೆ ಕಾರಣವಾಗಬಹುದು. ಅಂಕಗಳ ಆಧಾರದಲ್ಲಿ ತಾವು ತೀರಾ ಬುದ್ಧಿವಂತರು ಎಂದು ಭಾವಿಸುವ ಮಕ್ಕಳು ಮುಂದೆ ಎಡವಿ ಬೀಳಬಹುದು. ಈ ಕಾರಣದಿಂದಾಗಿಯೇ ಮೌಲ್ಯಮಾಪನದ ಗುಣಮಟ್ಟವನ್ನು ಕುಗ್ಗಿಸಿ ಅಂಕ ನೀಡಿಕೆಯನ್ನು ಧಾರಾಳಗೊಳಿಸುವ ಮಾದರಿ ಸಮ್ಮತವಲ್ಲ ಎಂದರು.

ಇಕ್ಕೇರಿ ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್‌.ಟಿ.ರತ್ನಾಕರ್‌ ಮಾತನಾಡಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ವಿ.ಅನಂತ್‌ ಅಧ್ಯಕ್ಷ ತೆ ವಹಿಸಿದ್ದರು. ಮುಖ್ಯ ಶಿಕ್ಷ ಕ ಸಿ.ರಜನೀಶ್‌ ಹಾಜರಿದ್ದರು. ಎಚ್‌.ಎಂ.ಮಾನಸ ಪ್ರಾರ್ಥಿಸಿ, ಎಚ್‌. ಉಮೇಶ್‌ ಸ್ವಾಗತಿಸಿದರು. ಸಂಕೇತ್‌ ಹುಲಿಮನೆ ವಂದಿಸಿ, ಎಸ್‌.ಜಿ. ಶ್ರೀಕಾಂತ್‌ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ