ತೀರ್ಥಹಳ್ಳಿ: ಮಂಗನ ಕಾಯಿಲೆ ಜ್ವರ ಪೀಡಿತರು ಎಷ್ಟು ಜನರಿದ್ದಾರೆ. ಚುಚ್ಚುಮದ್ದು ಲಸಿಕೆ ಔಷಧ, ಡಿಎಂಪಿ ತೈಲ ವಿತರಣೆ ಆಗಿದಿಯೇ. ಜ್ವರ ಪೀಡಿತರನ್ನು ಮಣಿಪಾಲ್ ಆಸ್ಪತ್ರೆಗೆ ಏಕೆ ಕಳುಹಿಸುತ್ತೀರಿ. ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಏಕೆ ಕೊಡುತ್ತಿಲ್ಲ. ಪ್ರಶ್ನೆ ಕೇಳಿದರೆ ಹಾರಿಕೆ ಉತ್ತರ ಕೊಡ್ತೀರಾ...
ಹೀಗೆಂದು ಮಂಗಳವಾರ ತಾ.ಪಂ.ಸಭಾಂಗಣದಲ್ಲಿ ಮಂಗನ ಕಾಯಿಲೆ ಜ್ವರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತಂತೆ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಅವರು ಆರೋಗ್ಯ, ಅರಣ್ಯ, ಪಶು ಸಂಗೋಪಾನ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ಜ್ವರ ಎಲ್ಲಾ ತಾಲೂಕುಗಳಿಗೆ ವ್ಯಾಪಿಸುತ್ತಿದೆ. ಜ್ವರ ನಿಯಂತ್ರಣಕ್ಕೆ ತುರ್ತು ಕ್ರಮಗಳ ಕುರಿತು ಇನ್ನೂ ಮೀನಾ ಮೇಷ ಎಣಿಸುತ್ತಿದ್ದೀರಾ. ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ. ಔಷಧ, ಡಿಎಂಪಿ ತೈಲ ಇಲ್ಲ ಅಂತೀರಾ, ವಿತರಣೆ ಮಾಡ್ತೀವಿ ಅಂತೀರಾ ಇವೆಲ್ಲಾ ಯಾವಾಗ ಆರಂಭವಾಗುವುದು. ಸತ್ತ ಮೇಲೆ ಔಷಧ ಕೊಡ್ತೀರಾ ಎಂದು ಖಾರವಾಗಿ ಕಾಂತೇಶ್ ಪ್ರಶ್ನಿಸಿದರು.
ಡಿಎಚ್ಓ ಡಾ.ರಾಜೇಶ್ ಸುರಗಿಹಳ್ಳಿ ಅವರು ಉತ್ತರಿಸಿ, ಈ ವರ್ಷ ಜಿಲ್ಲೆಯ ಹಲವು ಭಾಗದಲ್ಲಿ ಜ್ವರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಚುಚ್ಚುಮದ್ದು ಲಸಿಕೆ, ಡಿಎಂಪಿ ತೈಲ ಕೊರತೆ ಉಂಟಾಗಿದೆ. ಲಸಿಕೆ, ತೈಲ ವಿತರಣೆಗೆ ಆದ್ಯತೆ ನೀಡಲಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಇಡಲು ತೀರ್ಮಾನಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಕೊರತೆ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಜ್ವರ ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಜ್ವರ ಪೀಡಿತರಿಂದ ಹಣ ಪಡೆಯಬಾರದು. ಮಣಿಪಾಲ್ ಆಸ್ಪತ್ರೆಯಲ್ಲಿ ಜ್ವರ ಪೀಡಿತರಿಂದ ಹಣ ಪಡೆಯುತ್ತಿರುವ ಕುರಿತು ದೂರು ಇದೆ ಎಂದು ಕಾಂತೇಶ್ ಹೇಳಿದರು. ಜ್ವರ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಈ ವಿಷಯದ ಕುರಿತು ಲಿಖಿತ ಸೂಚನೆ ನೀಡಲಾಗಿದೆ ಎಂದು ಡಾ. ರಾಜೇಶ್ ಸುರುಗಿಹಳ್ಳಿ ಉತ್ತರಿಸಿದರು.
ಸಿಂಗನಬಿದರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಜ್ವರ ಪತ್ತೆ ಆಗಿದೆ. ಈ ಭಾಗದಲ್ಲಿ ಹಕ್ಕಿಗಳು ಮೃತಪಟ್ಟಿವೆ. ಹಕ್ಕಿಗಳ ಸಾವಿಗೆ ಕಾರಣವಾದ ಅಂಶಗಳ ಕುರಿತು ಸಂಶೋಧನೆ ಆಗಿಲ್ಲ ಎಂದು ತಾ.ಪಂ.ಸದಸ್ಯ ಬೇಗುವಳ್ಳಿ ಕವಿರಾಜ್ ದೂರಿದರು. 20 ದಿನದ ಹಿಂದೆ 2 ಮೈನಾಹಕ್ಕಿಗಳು ಮೃತಪಟ್ಟಿದ್ದು ರಕ್ತ ಪರೀಕ್ಷೆ ವರದಿಗೆ ಬೆಂಗಳೂರು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ. ವರದಿ ಕುರಿತು ಇನ್ನೂ ಮಾಹಿತಿ ತಿಳಿದಿಲ್ಲ ಎಂದು ಪಶು ಸಂಗೋಪಾನ ಇಲಾಖೆ ಸಹಾಯಕ ನಿರ್ದೇಶಕ ಡಾ. ಅರುಣ್ ಸಭೆಗೆ ಮಾಹಿತಿ ನೀಡಿದರು.
ಏನ್ರೀ, 20 ದಿನವಾದರೂ ರಕ್ತ ಪರೀಕ್ಷೆ ವರದಿ ಪಡೆಯಲು ಸಾಧ್ಯವಾಗಿಲ್ಲ ಎಂದಾದರೆ ನಿಮ್ಮ ಬೇಜವಾಬ್ದಾರಿ ಏನು ಹೇಳಬೇಕು. ಈ ಕ್ಷಣವೇ ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಿ ವರದಿ ವಿಷಯವನ್ನು ಸಭೆ ಮಂಡಿಸಿ ಎಂದು ಕಾಂತೇಶ್ ಸೂಚಿಸಿದರು. ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆದ ಸಹಾಯಕ ನಿರ್ದೇಶಕರು ಹಕ್ಕಿಗಳ ಸಾವು ಸಹಜವಾಗಿದೆ ಎಂದು ವರದಿ ಮಂಡಿಸಿದರು.
ಸಭೆಯಲ್ಲಿ ಜಿ.ಪಂ.ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್, ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಂದವಳ್ಳಿ ಸೋಮಶೇಖರ್, ತಾ.ಪಂ.ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಗೀತಾಶೆಟ್ಟಿ ಮಾತನಾಡಿದರು.
ಸಭೆಯಲ್ಲಿ ಜಿ.ಪಂ.ಸದಸ್ಯೆ ಅಪೂರ್ವಶರಧಿ, ತಾ.ಪಂ.ಅಧ್ಯಕ್ಷ ನವಮಣಿ, ಇ.ಓ.ಧನರಾಜ್ ಮತ್ತಿತರರು ಇದ್ದರು. ಸಭೆ ಮುನ್ನ ಕಾಂತೇಶ್ ಅವರು ಪಟ್ಟಣದ ಜೆಸಿ ಆಸ್ಪತ್ರೆಗೆ ಬೇಟಿ ಜ್ವರ ಪೀಡಿತ ಆರೋಗ್ಯ ವಿಚಾರಿಸಿದರು.
----
ಜ್ವರ ನಿಯಂತ್ರಣಕ್ಕೆ ಕನಿಷ್ಟ 3 ತಿಂಗಳು ವಿಶೇಷ ತಂಡ ರಚಿಸಿ ಶೂಶ್ರೂಷೆ ವ್ಯವಸ್ಥೆ ಕಲ್ಪಿಸಬೇಕು. ಕಾಡಿನ ಸಂಪರ್ಕದ ಜನರಲ್ಲಿ ಜ್ವರ ಕಂಡು ಬರುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸಬೇಕಿದೆ. ಬೇಜವಾಬ್ದಾರಿ ತೋರಿದರೆ ಜನರ ಜೀವ ತೆಗೆದ ಶಾಪಕ್ಕೆ ಗುರಿ ಆಗಬೇಕಾಗುತ್ತದೆ.
- ಕಾಸರವಳ್ಳಿ ಶ್ರೀನಿವಾಸ್
ಹೀಗೆಂದು ಮಂಗಳವಾರ ತಾ.ಪಂ.ಸಭಾಂಗಣದಲ್ಲಿ ಮಂಗನ ಕಾಯಿಲೆ ಜ್ವರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತಂತೆ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಅವರು ಆರೋಗ್ಯ, ಅರಣ್ಯ, ಪಶು ಸಂಗೋಪಾನ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ಜ್ವರ ಎಲ್ಲಾ ತಾಲೂಕುಗಳಿಗೆ ವ್ಯಾಪಿಸುತ್ತಿದೆ. ಜ್ವರ ನಿಯಂತ್ರಣಕ್ಕೆ ತುರ್ತು ಕ್ರಮಗಳ ಕುರಿತು ಇನ್ನೂ ಮೀನಾ ಮೇಷ ಎಣಿಸುತ್ತಿದ್ದೀರಾ. ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ. ಔಷಧ, ಡಿಎಂಪಿ ತೈಲ ಇಲ್ಲ ಅಂತೀರಾ, ವಿತರಣೆ ಮಾಡ್ತೀವಿ ಅಂತೀರಾ ಇವೆಲ್ಲಾ ಯಾವಾಗ ಆರಂಭವಾಗುವುದು. ಸತ್ತ ಮೇಲೆ ಔಷಧ ಕೊಡ್ತೀರಾ ಎಂದು ಖಾರವಾಗಿ ಕಾಂತೇಶ್ ಪ್ರಶ್ನಿಸಿದರು.
ಡಿಎಚ್ಓ ಡಾ.ರಾಜೇಶ್ ಸುರಗಿಹಳ್ಳಿ ಅವರು ಉತ್ತರಿಸಿ, ಈ ವರ್ಷ ಜಿಲ್ಲೆಯ ಹಲವು ಭಾಗದಲ್ಲಿ ಜ್ವರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಚುಚ್ಚುಮದ್ದು ಲಸಿಕೆ, ಡಿಎಂಪಿ ತೈಲ ಕೊರತೆ ಉಂಟಾಗಿದೆ. ಲಸಿಕೆ, ತೈಲ ವಿತರಣೆಗೆ ಆದ್ಯತೆ ನೀಡಲಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಇಡಲು ತೀರ್ಮಾನಿಸಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಕೊರತೆ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಜ್ವರ ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಜ್ವರ ಪೀಡಿತರಿಂದ ಹಣ ಪಡೆಯಬಾರದು. ಮಣಿಪಾಲ್ ಆಸ್ಪತ್ರೆಯಲ್ಲಿ ಜ್ವರ ಪೀಡಿತರಿಂದ ಹಣ ಪಡೆಯುತ್ತಿರುವ ಕುರಿತು ದೂರು ಇದೆ ಎಂದು ಕಾಂತೇಶ್ ಹೇಳಿದರು. ಜ್ವರ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಈ ವಿಷಯದ ಕುರಿತು ಲಿಖಿತ ಸೂಚನೆ ನೀಡಲಾಗಿದೆ ಎಂದು ಡಾ. ರಾಜೇಶ್ ಸುರುಗಿಹಳ್ಳಿ ಉತ್ತರಿಸಿದರು.
ಸಿಂಗನಬಿದರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಜ್ವರ ಪತ್ತೆ ಆಗಿದೆ. ಈ ಭಾಗದಲ್ಲಿ ಹಕ್ಕಿಗಳು ಮೃತಪಟ್ಟಿವೆ. ಹಕ್ಕಿಗಳ ಸಾವಿಗೆ ಕಾರಣವಾದ ಅಂಶಗಳ ಕುರಿತು ಸಂಶೋಧನೆ ಆಗಿಲ್ಲ ಎಂದು ತಾ.ಪಂ.ಸದಸ್ಯ ಬೇಗುವಳ್ಳಿ ಕವಿರಾಜ್ ದೂರಿದರು. 20 ದಿನದ ಹಿಂದೆ 2 ಮೈನಾಹಕ್ಕಿಗಳು ಮೃತಪಟ್ಟಿದ್ದು ರಕ್ತ ಪರೀಕ್ಷೆ ವರದಿಗೆ ಬೆಂಗಳೂರು ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿದೆ. ವರದಿ ಕುರಿತು ಇನ್ನೂ ಮಾಹಿತಿ ತಿಳಿದಿಲ್ಲ ಎಂದು ಪಶು ಸಂಗೋಪಾನ ಇಲಾಖೆ ಸಹಾಯಕ ನಿರ್ದೇಶಕ ಡಾ. ಅರುಣ್ ಸಭೆಗೆ ಮಾಹಿತಿ ನೀಡಿದರು.
ಏನ್ರೀ, 20 ದಿನವಾದರೂ ರಕ್ತ ಪರೀಕ್ಷೆ ವರದಿ ಪಡೆಯಲು ಸಾಧ್ಯವಾಗಿಲ್ಲ ಎಂದಾದರೆ ನಿಮ್ಮ ಬೇಜವಾಬ್ದಾರಿ ಏನು ಹೇಳಬೇಕು. ಈ ಕ್ಷಣವೇ ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಿ ವರದಿ ವಿಷಯವನ್ನು ಸಭೆ ಮಂಡಿಸಿ ಎಂದು ಕಾಂತೇಶ್ ಸೂಚಿಸಿದರು. ಸಂಶೋಧನಾ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆದ ಸಹಾಯಕ ನಿರ್ದೇಶಕರು ಹಕ್ಕಿಗಳ ಸಾವು ಸಹಜವಾಗಿದೆ ಎಂದು ವರದಿ ಮಂಡಿಸಿದರು.
ಸಭೆಯಲ್ಲಿ ಜಿ.ಪಂ.ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್, ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಂದವಳ್ಳಿ ಸೋಮಶೇಖರ್, ತಾ.ಪಂ.ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಗೀತಾಶೆಟ್ಟಿ ಮಾತನಾಡಿದರು.
ಸಭೆಯಲ್ಲಿ ಜಿ.ಪಂ.ಸದಸ್ಯೆ ಅಪೂರ್ವಶರಧಿ, ತಾ.ಪಂ.ಅಧ್ಯಕ್ಷ ನವಮಣಿ, ಇ.ಓ.ಧನರಾಜ್ ಮತ್ತಿತರರು ಇದ್ದರು. ಸಭೆ ಮುನ್ನ ಕಾಂತೇಶ್ ಅವರು ಪಟ್ಟಣದ ಜೆಸಿ ಆಸ್ಪತ್ರೆಗೆ ಬೇಟಿ ಜ್ವರ ಪೀಡಿತ ಆರೋಗ್ಯ ವಿಚಾರಿಸಿದರು.
----
ಜ್ವರ ನಿಯಂತ್ರಣಕ್ಕೆ ಕನಿಷ್ಟ 3 ತಿಂಗಳು ವಿಶೇಷ ತಂಡ ರಚಿಸಿ ಶೂಶ್ರೂಷೆ ವ್ಯವಸ್ಥೆ ಕಲ್ಪಿಸಬೇಕು. ಕಾಡಿನ ಸಂಪರ್ಕದ ಜನರಲ್ಲಿ ಜ್ವರ ಕಂಡು ಬರುತ್ತಿರುವುದರಿಂದ ಗಂಭೀರವಾಗಿ ಪರಿಗಣಿಸಬೇಕಿದೆ. ಬೇಜವಾಬ್ದಾರಿ ತೋರಿದರೆ ಜನರ ಜೀವ ತೆಗೆದ ಶಾಪಕ್ಕೆ ಗುರಿ ಆಗಬೇಕಾಗುತ್ತದೆ.
- ಕಾಸರವಳ್ಳಿ ಶ್ರೀನಿವಾಸ್