ಆ್ಯಪ್ನಗರ

ಇಂದಿನಿಂದ ಸಂಸೆ ಶ್ರೀಕಲಾನಾಥೇಶ್ವರ ದೇವರ ಪುನರ್‌ ಪ್ರತಿಷ್ಠಾಪನೆ

ಸಮೀಪದ ವಳಗೆರೆಯ ಇತಿಹಾಸ ಪ್ರಸಿದ್ಧ ಸಂಸೆ ಶ್ರೀಕಲಾನಾಥೇಶ್ವರ, ದುರ್ಗಾಂಬಾ ಹಾಗೂ ಗಣಪತಿ ದೇವರ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ಮಾ. 26ರಿಂದ 28ರ ವರೆಗೆ ನಡೆಯಲಿದೆ.

Vijaya Karnataka 26 Mar 2019, 5:00 am
ತುಮರಿ: ಸಮೀಪದ ವಳಗೆರೆಯ ಇತಿಹಾಸ ಪ್ರಸಿದ್ಧ ಸಂಸೆ ಶ್ರೀಕಲಾನಾಥೇಶ್ವರ, ದುರ್ಗಾಂಬಾ ಹಾಗೂ ಗಣಪತಿ ದೇವರ ಪುನರ್‌ ಪ್ರತಿಷ್ಠಾಪನಾ ಮಹೋತ್ಸವ ಮಾ. 26ರಿಂದ 28ರ ವರೆಗೆ ನಡೆಯಲಿದೆ.
Vijaya Karnataka Web SMR-25TMP


ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ, ಹೊಂಬುಜ ಜೈನ ಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿಗಳ ಮಾರ್ಗದರ್ಶನದಲ್ಲಿ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನಡೆಯಲಿದೆ. ಗೋಕರ್ಣದ ವೇದಮೂರ್ತಿ ಶಿತಿಕಂಠ ಹಿರೇಭಟ್‌ ಹಾಗೂ ಸ್ಥಳೀಯ ಪುರೋಹಿತರು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶ್ರೀಕ್ಷೇತ್ರ ಅಗಡಿಯ ಗುರುದತ್ತ ಚಕ್ರವರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

26ರಂದು ಬೆಳಗ್ಗೆ 7ಕ್ಕೆ ಮಹಾ ಸಂಕಲ್ಪ ಗಣೇಶಪೂಜೆ, ಸಾಮೂಹಿಕ ಪ್ರಾರ್ಥನೆ, ದೇವನಾಂದಿ , ಶ್ರೀದೇವರಿಗೆ ಜಲಾಧಿವಾಸ ಅಥರ್ವ ಶೀರ್ಷಹವನ ನಡೆಯಲಿದೆ. ಸಂಜೆ 4ಗಂಟೆಗೆ ವಿದ್ವಾನ್‌ ಬಿ.ಎಂ.ಕೃಷ್ಣಾನಂದ ಶರ್ಮ ಅವರಿಂದ ದೇವಾಲಯಗಳ ಮಹತ್ವ ಕುರಿತು ಉಪನ್ಯಾಸ, 5ಕ್ಕೆ ರೇಖಾ ಮಹಾಬಲೇಶ್ವರ ಹೊನಗೋಡು ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ, ಸಂಜೆ 6ರಿಂದ ಯಾಗಾಶಾಲಾ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತುರಕ್ಷೋಘ್ನ ಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

27ರಂದು ಬೆಳಗ್ಗೆ 7ರಿಂದ ಗಣಪತಿ ಪೂಜೆ, ನವಗ್ರಹ ಹವನ, ಕಲಾನಾಥೇಶ್ವರ ದೇವರ ಪ್ರತಿಷ್ಠೆ , ರುದ್ರ ಜಪ, ಚಂಡೀಹೋಮ ನಡೆಯಲಿದೆ.

ಸಂಜೆ 4ಕ್ಕೆ ವೇದಮೂರ್ತಿ ಕೀರ್ತಿಭಟ್‌ ಅವರಿಂದ ಧರ್ಮ-ಕರ್ಮಗಳ ಬಗ್ಗೆ ಉಪನ್ಯಾಸ. ಬೇದರಕೊಪ್ಪದ ರಘುಪತಿ ಮತ್ತು ಸಂಗಡಿಗರಿಂದ ಭಜನೆ, ಸಂಜೆ 7ರಿಂದ ಪ್ರಾಣ ಪ್ರತಿಷ್ಠೆ , ಅಷ್ಟಾವಧಾನ. 28ರಂದು ಬೆಳಗ್ಗೆ 7ರಿಂದ ಕಲಾ ತತ್ವ ಪ್ರಾಣಪ್ರತಿಷ್ಠಾ ಹವನ. ಶಕ್ತಿ ಹವನ, ರುದ್ರಹವನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ 5ರಿಂದ ವಳಗೆರೆ ಪಂಚಕೂಟ ಜೈನ ಮಹಿಳಾಸಮಾಜದಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ.

700ವರ್ಷದ ಇತಿಹಾಸ:
ಮುಜರಾಯಿ ಇಲಾಖೆಗೆ ಸೇರಿದ ಸುಮಾರು 700ವರ್ಷಗಳ ಇತಿಹಾಸ ಹೊಂದಿದ ಈ ದೇವಸ್ಥಾನ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಜೈನಧರ್ಮೀಯರು ,ಬ್ರಾಹ್ಮಣರಲ್ಲದೆ ,ಈಡಿಗರು ಮತ್ತು ಎಲ್ಲ ಜಾತಿಯ ಭಕ್ತರು ಈ ದೇವರನ್ನು ಆರಾಧಿಸುತ್ತಾ ಬಂದಿರುವುದು ವಿಶೇಷ.

ಹಿಂದಿನ ಕಾಲದಲ್ಲಿ ದೈವಾನುಗ್ರಹ ಹಾಗೂ ಸಂತಾನ ಪ್ರಾಪ್ತಿಗಾಗಿ ಪ್ರಧಾನ ದೇವರಾಗಿ ಕಲಾನಾಥೇಶ್ವರನ ಪ್ರತಿಷ್ಠಾಪನೆ ನಡೆದಿದೆ. ಎಷ್ಟೋ ವರ್ಷಗಳ ನಂತರ ಜೈನ ಭಕ್ತಾದಿಗಳು ಗೇರುಸೊಪ್ಪದಿಂದ ತಂದು ದುರ್ಗಾದೇವಿಯ ಪ್ರತಿಷ್ಠಾಪನೆ ಕೈಗೊಂಡು ಆರಾಧಿಸುತ್ತಾ ಬಂದರು. ಹಾಗೆಯೇ ಗಣಪತಿ ದೇವರನ್ನೂ ಪ್ರತಿಷ್ಠಾಪಿಸಲಾಯಿತು. ನೂರಾರು ವರ್ಷಗಳು ಕಳೆದ ಮೇಲೆ ದೇವಸ್ಥಾನ ಜೀರ್ಣಗೊಂಡಿದ್ದು ಮುಜರಾಯಿ ಇಲಾಖೆ ಅನುದಾನ ಹಾಗೂ ಭಕ್ತಾದಿಗಳ ದೇಣಿಗೆಯಿಂದ ಸುಮಾರು 25ಲಕ್ಷ ರೂ. ಗಳಿಗೂ ಹೆಚ್ಚಿನ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಗುರುಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರ ಸಹಕಾರದಲ್ಲಿ ಷÜುನರ್‌ ಪ್ರತಿಷ್ಠಾಪನೆ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ