ಆ್ಯಪ್ನಗರ

ಸೊರಬ ತಾಲೂಕಲ್ಲಿ 7 ಸಾವಿರ ಪೇಜ್‌ ಪ್ರಮುಖರ ನೇಮಕ

ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ತಾಲೂಕಿನಲ್ಲಿ 7 ಸಾವಿರ ಪೇಜ್‌ ಪ್ರಮುಖರನ್ನು ನೇಮಕ ಮಾಡಲಾಗಿದ್ದು, ಇದರಿಂದ ಅಧಿಕ ಮತಗಳಿಂದ ಬಿಜೆಪಿ ಗೆಲುವು ನಿಶ್ಚಿತ ಎಂದು ತಾಲೂಕು ಅಧ್ಯಕ್ಷ ಎ.ಎಲ್‌.ಅರವಿಂದ್‌ ಹೇಳಿದರು.

Vijaya Karnataka 10 Apr 2019, 5:00 am
ಸೊರಬ: ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ತಾಲೂಕಿನಲ್ಲಿ 7 ಸಾವಿರ ಪೇಜ್‌ ಪ್ರಮುಖರನ್ನು ನೇಮಕ ಮಾಡಲಾಗಿದ್ದು, ಇದರಿಂದ ಅಧಿಕ ಮತಗಳಿಂದ ಬಿಜೆಪಿ ಗೆಲುವು ನಿಶ್ಚಿತ ಎಂದು ತಾಲೂಕು ಅಧ್ಯಕ್ಷ ಎ.ಎಲ್‌.ಅರವಿಂದ್‌ ಹೇಳಿದರು.
Vijaya Karnataka Web SMR-09srbp1


ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘಟನೆ ಸಲುವಾಗಿ ತಾಲೂಕಿನಲ್ಲಿ ಪ್ರಮುಖ 40 ಜನರ ನೇತೃತ್ವದಲ್ಲಿ ಸಮಿತಿಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ತಳಹಂತದ ಸಂಘಟನೆಗೆ ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತ್‌ ಮಟ್ಟ ಹಾಗೂ 7 ಸಾವಿರ ಪೇಜ್‌ ಪ್ರಮುಖರನ್ನು ನೇಮಿಸಲಾಗಿದೆ ಎಂದರು.

ಕುಮಾರ್‌ ಬಂಗಾರಪ್ಪ ಶಾಸಕರಾದ ಮೇಲೆ ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಕುಡಿಯುವ ನೀರು ಹಾಗೂ ಇತರೆ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅಲ್ಲದೆ ಅಭ್ಯರ್ಥಿ ರಾಘವೇಂದ್ರ ಕೂಡ ಕಳೆದ ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಇಎಸ್‌ಐ ಆಸ್ಪತ್ರೆ, ರೈಲು ಹಾಗೂ ಸಿಆರ್‌ಎಫ್‌ ಅನುದಾನದಿಂದ ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೆನ್ನಬಸಪ್ಪ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ರಕ್ಷ ಣೆ ದೃಷ್ಟಿಯಿಂದ ಬಿಜೆಪಿ ಪಕ್ಷ ವನ್ನು ಮತ್ತೊಮ್ಮೆ ಕೇಂದ್ರದಲ್ಲಿ ತರಬೇಕಿದೆ. ಜಿಲ್ಲೆಯಲ್ಲಿ 82 ಸಾವಿರ ಪೇಜ್‌ ಪ್ರಮುಖರನ್ನು ನೇಮಿಸಲಾಗಿದೆ. ಜಾತಿ, ಮತ, ಭೇದವಿಲ್ಲದೆ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜನರು ಮುಂದಾಗಿದ್ದಾರೆ ಎಂದರು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಎಸ್‌.ಎಲ್‌.ಗಂಗಾಧರಪ್ಪ ಸುತ್ತುಕೋಟೆ, ಪಾಣಿ ರಾಜಪ್ಪ, ತಬಲಿ ಬಂಗಾರಪ್ಪ, ನಾಗರಾಜ್‌ ಚಿಕ್ಕಸವಿ, ಗಜಾನನರಾವ್‌, ಗುರುಕುಮಾರ್‌ ಪಾಟೀಲ್‌, ಎಂ.ಡಿ.ಉಮೇಶ್‌, ದೇವೇಂದ್ರಪ್ಪ ಚೆನ್ನಾಪುರ, ನಿರಂಜನ ಕುಪ್ಪಗಡ್ಡೆ, ಗುರುಪ್ರಸನ್ನಗೌಡ, ವಿನಾಯಕ ಹೆಚ್ಚೆ, ಶಿವಯೋಗಿ, ವಕೀಲರಾದ ಯೋಗೀಶ್‌, ನಾಗಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ