ಆ್ಯಪ್ನಗರ

ವಿಪತ್ತು ನಿರ್ವಹಣೆಯಲ್ಲಿ ರೆಡ್‌ಕ್ರಾಸ್‌ ಕಾರ್ಯ ಶ್ಲಾಘನೀಯ

ರೆಡ್‌ಕ್ರಾಸ್‌ ಸಂಸ್ಥೆಯು ಪ್ರಾಕೃತಿಕ ಸವಾಲುಗಳಿಂದ ಪೀಡಿತರಾದವರನ್ನು ಸಂರಕ್ಷಿಸುವಲ್ಲಿ ಆಪಾರ ಶ್ರಮ ವಹಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.

Vijaya Karnataka 22 Aug 2019, 5:00 am
ಶಂಕರಘಟ್ಟ : ರೆಡ್‌ಕ್ರಾಸ್‌ ಸಂಸ್ಥೆಯು ಪ್ರಾಕೃತಿಕ ಸವಾಲುಗಳಿಂದ ಪೀಡಿತರಾದವರನ್ನು ಸಂರಕ್ಷಿಸುವಲ್ಲಿ ಆಪಾರ ಶ್ರಮ ವಹಿಸುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.
Vijaya Karnataka Web 21ganesh6


ಶಂಕರಘಟ್ಟದ ಕುವೆಂಪು ವಿವಿಯ ಪ್ರೊ.ವೆಂಕಟರಾಮಯ್ಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಕಾಲೇಜುಗಳ ಯುವ ರೆಡ್‌ಕ್ರಾಸ್‌ ಘಟಕ ಕಾರ್ಯಕ್ರಮಾಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್‌ಕ್ರಾಸ್‌ನಂತ ಘಟಕಗಳು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಸಹಕಾರ ಮಾತ್ರವಲ್ಲದೇ ಇಂದಿನ ಯುವಜನಾಂಗಕ್ಕೆ ಮೌಲ್ಯಗಳ ಮಾರ್ಗದರ್ಶನ ನೀಡಿ, ರಕ್ತದಾನದಂತಹ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತಿದೆ ಎಂದರು.

ಭಾರತೀಯ ಯುವ ರೆಡ್‌ಕ್ರಾಸ್‌ ಘಟಕದ ಉಪಾಧ್ಯಕ್ಷ ಡಾ.ವಿ.ಎಲ್‌.ಎಸ್‌. ಕುಮಾರ್‌ ಮಾತನಾಡಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ 30 ವರ್ಷಗಳಲ್ಲಿಯೇ ಅತಿಹೆಚ್ಚು ಮಳೆ ಸುರಿದಿದ್ದು ಭಾರೀ ಹಾನಿಯಾಗಿದೆ. ಭಾರತೀಯ ಹವಾಮಾನಶಾಸ್ತ್ರ ಸಂಸ್ಥೆಯು ಮತ್ತೊಮ್ಮೆ ಇಂತಹುದೇ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಈ ಸಂದರ್ಭದಲ್ಲಿ ರೆಡ್‌ಕ್ರಾಸ್‌ ಮುಂದೆ ನೆರೆ, ಬರ, ಪ್ರಕೃತಿಯ ಆಗುಹೋಗುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸವಾಲು ಇದೆ ಎಂದರು.

ಭಾರತದಲ್ಲಿ ರಸ್ತೆ ಅಪಘಾತಗಳು ಪ್ರಮುಖ ಸಮಸ್ಯೆಯಾಗಿರುವಂತೆಯೇ, ಕರ್ನಾಟಕದಲ್ಲಿ ಶಿವಮೊಗ್ಗ ಅತಿಹೆಚ್ಚು ಅಪಘಾತಗಳು ನಡೆಯುತ್ತಿರುವ ಜಿಲ್ಲೆಗಳಲ್ಲಿ 7ನೇ ಸ್ಥಾನದಲ್ಲಿದೆ. ಅಷ್ಟಲ್ಲದೇ ಅಪರಾಧ ಚಟುವಟಿಕೆಗಳಿಗೆ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನಗಳಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯುವಜನರು ಕೇವಲ ಮೊಬೈಲ್‌ ವ್ಯಸನಕ್ಕೆ ಬಲಿಯಾಗುವುದು ಮಾತ್ರವಲ್ಲದೇ ಮಾದಕ ದ್ರವ್ಯಗಳನ್ನು ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೇರಳವಾಗಿ ಗಾಂಜಾ ದೊರೆಯುತ್ತಿರುವ ಕುರಿತು ವರದಿಗಳಿವೆ. ಗಂಧದ ನಾಡು ಎಂದೇ ಹೆಸರಾಗಿದ್ದ ಶಿವಮೊಗ್ಗ ಇಂದು ಗಾಂಜಾ ನಾಡಾಗಿ ಪರಿವರ್ತನೆಗೊಳ್ಳುತ್ತಿದೆ. ರೆಡ್‌ಕ್ರಾಸ್‌ ಕಾರ್ಯಕರ್ತರು ಈ ಎಲ್ಲ ವಿಷಯಗಳನ್ನು ಅಧ್ಯಯಿನಿಸಿ ಸಾಮಾಜಿಕ ಜಾಗೃತಿ ಮೂಡಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕುವೆಂಪು ವಿವಿ ಕುಲಸಚಿವ ಪ್ರೊ.ಭೋಜ್ಯಾನಾಯ್ಕ, ಪ್ರೊ.ಹಿರೇಮಣಿ ನಾಯ್ಕ, ದೈಹಿಕ ಶಿಕ್ಷ ಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗಜಾನನ ಪ್ರಭು, ಸಚೇತ್‌ ಸುವರ್ಣ, ವಿವಿ ಪ್ರಥಮದರ್ಜೆ ಕಾಲೇಜುಗಳ ಯುವರೆಡ್‌ಕ್ರಾಸ್‌ ಘಟಕಗಳ ಕಾರ್ಯಕ್ರಮಾಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ