ಆ್ಯಪ್ನಗರ

ನಿತ್ಯ ಯೋಗದಿಂದ ಉಲ್ಲಾಸ

ಯೋಗ ಎಂದರೆ ವಿವಿಧ ಕೋನಗಳಲ್ಲಿ ದೇಹವನ್ನು ತಿರುಚುವುದಲ್ಲ, ಎಲ್ಲಾ ಭಿನ್ನತೆಗಳನ್ನು ಮೀರಿ ಉಳಿದುದರಲ್ಲಿ ಐಕ್ಯವಾಗುವುದು ಯೋಗ ಎಂದು ಜನ್ನಾಪುರ ಹ್ಯಾಪಿ ಲೀವಿಂಗ್‌ ಲೈಪ್‌ನ ಯೋಗ ಗುರು ಮಹೇಶ್‌ ತಿಳಿಸಿದರು.

Vijaya Karnataka 23 Jun 2019, 5:00 am
ಭದ್ರಾವತಿ: ಯೋಗ ಎಂದರೆ ವಿವಿಧ ಕೋನಗಳಲ್ಲಿ ದೇಹವನ್ನು ತಿರುಚುವುದಲ್ಲ, ಎಲ್ಲಾ ಭಿನ್ನತೆಗಳನ್ನು ಮೀರಿ ಉಳಿದುದರಲ್ಲಿ ಐಕ್ಯವಾಗುವುದು ಯೋಗ ಎಂದು ಜನ್ನಾಪುರ ಹ್ಯಾಪಿ ಲೀವಿಂಗ್‌ ಲೈಪ್‌ನ ಯೋಗ ಗುರು ಮಹೇಶ್‌ ತಿಳಿಸಿದರು.
Vijaya Karnataka Web refreshment by yoga
ನಿತ್ಯ ಯೋಗದಿಂದ ಉಲ್ಲಾಸ


ಅವರು ಶುಕ್ರವಾರ ಹ್ಯಾಪಿ ಲೀವಿಂಗ್‌ ಲೈಪ್‌ ಹಾಗೂ ಭಾರತರತ್ನ ಸರ್‌.ಎಂ ವಿಶ್ವೇಶ್ವರಯ್ಯ ಚಾರಿಟಬಲ್‌ ಟ್ರಸ್ಟ್‌ ಏರ್ಪಡಿಸಿದ್ದ 5ನೇ ವರ್ಷದ ವಿಶ್ವ ಯೋಗ ದಿನಾಚರಣೆ ಯಲ್ಲಿ ಅವರು ಮಾತನಾಡಿದರು.

ಯೋಗದಲ್ಲಿ ಐಕ್ಯವಾಗುವುದು ಎಂದರೆ ಶಾಂತಿ, ನೆಮ್ಮದಿ, ಸುಖ, ಸಂತೋಷ ಸಿಗುವುದು ಎಂದರ್ಥ. ಅದು ಯೋಗದ ಒಂದು ಭಾಗ ಎಂದರು.

ಭಾರತರತ್ನ ಸರ್‌.ಎಂ ವಿಶ್ವೇಶ್ವರಯ್ಯ ಚಾರಿಟಬಲ್‌ ಟ್ರಸ್ಟ್‌ ಛೇರ್ಮನ್‌ ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್‌. ವೇಣುಗೋಪಾಲ್‌ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷ ಕಿ ದಾಕ್ಷಾಯಿಣಿ, ಪ್ರಮುಖರಾದ ಕಲ್ಪನಾ ಲೋಕೇಶ್‌, ರಮಾ ವೆಂಕಟೇಶ್‌, ಶೈಲಜಾರಾಮಕೃಷ್ಣ, ಜೆವಿಆರ್‌, ಭವಾನಿ ಶಂಕರ್‌, ಜಯದೇವ, ತಿಲಕ್‌, ನಾಗವೇಣಿ, ಗಗನ, ಚಂದ್ರಕಲಾ, ರಾಮು ಮತ್ತಿತರರಿದ್ದರು. ಲೋಕೇಶ್‌ ಸ್ವಾಗತಿಸಿ. ಆರ್‌. ಮುಕುಂದಯ್ಯ ವಂದಿಸಿದರು. ಇದೇ ಸಂದರ್ಭ ಡಾ.ರಾಜಕುಮಾರ್‌ ಸ್ಮರಣೀಯ ಪ್ರಶಸ್ತಿ ವಿಜೇತರಾದ ಋುತ್ವಿಕ್‌ ಹಾಗೂ ಎಂ.ನಿಶ್ಚಿತಾ ಅವರನ್ನು ಸನ್ಮಾನಿಸಲಾಯಿತು. ನಂತರ ಯೋಗ ಪಟುಗಳಿಂದ ವಿವಿಧ ಆಸನ ಪ್ರದರ್ಶಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ