ಆ್ಯಪ್ನಗರ

ಕಲಿಸಿದ ಗುರು ಮರೆಯದಿರಿ

ಶಿಕ್ಷಕ ವೃತ್ತಿಗೆ ಅನೇಕ ಸವಾಲು ಎದುರಾಗಿದ್ದರೂ ಅವೆಲ್ಲವನ್ನು ಮೀರಿ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ನೀಡುತ್ತಿರುವ ಕೊಡುಗೆ ಅಪಾರ ಎಂದು ರೋಟರಿ ರಕ್ತ ನಿಧಿಯ ಅಧ್ಯಕ್ಷ ಎಚ್‌.ಎಂ. ಶಿವಕುಮಾರ್‌ ಹೇಳಿದರು.

Vijaya Karnataka 8 Sep 2019, 5:00 am
ಸಾಗರ: ಶಿಕ್ಷಕ ವೃತ್ತಿಗೆ ಅನೇಕ ಸವಾಲು ಎದುರಾಗಿದ್ದರೂ ಅವೆಲ್ಲವನ್ನು ಮೀರಿ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ನೀಡುತ್ತಿರುವ ಕೊಡುಗೆ ಅಪಾರ ಎಂದು ರೋಟರಿ ರಕ್ತ ನಿಧಿಯ ಅಧ್ಯಕ್ಷ ಎಚ್‌.ಎಂ. ಶಿವಕುಮಾರ್‌ ಹೇಳಿದರು.
Vijaya Karnataka Web remember the teacher who taught
ಕಲಿಸಿದ ಗುರು ಮರೆಯದಿರಿ


ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಹಾಗೂ ಹೊಂಗಿರಣ ಪದವಿಪೂರ್ವ ಕಾಲೇಜಿನ ಆವರಣದಲ್ಲಿಗುರುವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಕರು ಸಮಾಜದ ನಿಜವಾದ ನಾಯಕರು. ನಾವು ಯಾವುದೇ ಹುದ್ದೆಗೇರಿದರೂ ನಮ್ಮ ಶಿಕ್ಷಕರ ಕೊಡುಗೆ ಸದಾ ಸ್ಮರಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಪ್ರಭಾಕರರಾವ್‌ ಮಾತನಾಡಿ, ಕಲಿಸಿದ ಗುರುಗಳಿಗೆ ಗೌರವ ನೀಡುವವರು ಅತ್ಯುತ್ತಮ ಸ್ಥಾನ ಪಡೆಯುತ್ತಾರೆ ಎಂದರು. ಪ್ರಾಚಾರ್ಯೆ ಕೆ. ಶೋಭಾ, ಉಪ ಪ್ರಾಂಶುಪಾಲ ಅರವಿಂದ ಗುರ್ಜರ್‌, ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಮಧುಶ್ರೀ ಪ್ರಾಸ್ತಾವಿಕ ಮಾತನಾಡಿದರು. ಸಾನಿಧ್ಯ ಶಿಕ್ಷಕರ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು. ಪ್ರಜ್ಞಾ ಸ್ವಾಗತಿಸಿ, ಸಾಕ್ಷಿ ಭಾಗವತ್‌ ವಂದಿಸಿದರು. ನಮ್ರತಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ