ಆ್ಯಪ್ನಗರ

ಸರ್ಕಾರಿ ಬಸ್‌ನಲ್ಲಿ ರೇಣುಕಾಚಾರ್ಯ ಜಾಲಿ ಡ್ರೈವ್..! ಡಿಪೋ ಮ್ಯಾನೇಜರ್‌ಗೆ ನೊಟೀಸ್..?

ಬಸ್ ಸೇವೆ ಉದ್ಘಾಟಿಸಿದ ಸಂಭ್ರಮದಲ್ಲಿದ್ದ ರೇಣುಕಾಚಾರ್ಯ, ಅದೇ ಉತ್ಸಾಹದಲ್ಲಿ ಬಸ್ ಹತ್ತಿದರು, ನೇರವಾಗಿ ಡ್ರೈವಿಂಗ್ ಸೀಟ್‌ನಲ್ಲೇ ಕುಂತರು..! ಒಂದಲ್ಲ ಎರಡಲ್ಲ ಬರೋಬ್ಬರಿ 58 ಕಿ.ಮೀ ಬಸ್ ಓಡಿಸಿಯೂ ಬಿಟ್ಟರು..! ಈಗ ಅದೇ ಎಡವಟ್ಟಾಗಿದೆ..!

Vijaya Karnataka Web 6 Jan 2020, 9:05 pm
ಶಿವಮೊಗ್ಗ: ಸಾರಿಗೆ ಸಂಸ್ಥೆಯ ಬಸ್‌ ಓಡಿಸುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಿಂದ ಬೆನಕನಹಳ್ಳಿ ಮಾರ್ಗವಾಗಿ ಸಾಸ್ವೆಹಳ್ಳಿ ಗ್ರಾಮದವರೆಗೆ 58 ಕಿ.ಮೀ. ಕೆಎಸ್‌ಆರ್‌ಟಿಸಿ ಚಾಲನೆ ಮಾಡಿದ್ದ ರೇಣುಕಾಚಾರ್ಯ, ಬಸ್‌ ಓಡಿಸುವ ಮೂಲಕವೇ ಬಸ್‌ ಸೇವೆಯನ್ನು ಉದ್ಘಾಟಿಸಿದ್ದರು. ಆದರೆ, ಇದು ಹೊನ್ನಾಳಿ ಡಿಪೋ ವ್ಯವಸ್ಥಾಪಕರ ಪಾಲಿಗೆ ಮುಳುವಾಗುವ ಸಾಧ್ಯತೆ ಇದೆ.
Vijaya Karnataka Web renukacharya bus 2
ಸರ್ಕಾರಿ ಬಸ್‌ನಲ್ಲಿ ರೇಣುಕಾಚಾರ್ಯ ಜಾಲಿ ಡ್ರೈವ್..! ಡಿಪೋ ಮ್ಯಾನೇಜರ್‌ಗೆ ನೊಟೀಸ್..?


ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನಿಪುರ, ಉಜ್ಜನಿಪುರ ತಾಂಡ, ಹುಡ್ಕಾಪುರ, ಬೀರಗೊಂಡನಹಳ್ಳಿ, ರಾಂಪುರ, ಸಾಸ್ವೇಹಳ್ಳಿ ಗ್ರಾಮಗಳಿಗೆ ತೆರಳಿ ನಂತರ ಇದೇ ಗ್ರಾಮಗಳ ಮೂಲಕ ಹೊನ್ನಾಳಿ ತಲುಪಿದ್ದ ಶಾಸಕರು, ಸಂಜೆ ಹೊನ್ನಾಳಿ ಖಾಸಗಿ ಬಸ್‌ ನಿಲ್ದಾಣದಿಂದ ರಾಮೇಶ್ವರ, ನ್ಯಾಮತಿ ಮಾರ್ಗವಾಗಿ ಶಿವಮೊಗ್ಗ ತಲುಪಿದ್ದರು. ರೇಣುಕಾಚಾರ್ಯ ತಮ್ಮ ಫೇಸ್‌ಬುಕ್‌ ಖಾತೆಯಲ್ಲೂ ಬಸ್‌ ಓಡಿಸಿದ್ದ ಬಗ್ಗೆ ಫೋಟೋ ಶೇರ್‌ ಮಾಡಿದ್ದರು.

ಸರ್ಕಾರಿ ಬಸ್‌ನಲ್ಲಿ ರೇಣುಕಾಚಾರ್ಯ ಜಾಲಿ ಡ್ರೈವ್..! ಡಿಪೋ ಮ್ಯಾನೇಜರ್‌ಗೆ ನೊಟೀಸ್..?


ರೇಣುಕಾಚಾರ್ಯ ಅವರು ಯಾರ ಪರವಾನಗಿ ಪಡೆದು ಸಾರಿಗೆ ಸಂಸ್ಥೆಯ ಬಸ್‌ ಚಲಾವಣೆ ಮಾಡಿದ್ದಾರೆಂಬ ವಿಷಯ ವೈರಲ್‌ ಆಗುತ್ತಿದ್ದಂತೆಯೇ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಡಿಪೋ ವ್ಯವಸ್ಥಾಪಕರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆಂಬ ವಿಷಯ ಕೇಳಿಬರುತ್ತಿದೆ. ಈ ಕುರಿತು ಮಾಹಿತಿ ಕೇಳಲು ವಿಜಯ ಕರ್ನಾಟಕ ಅವರ ಫೋನ್‌ಗೆ ಸಂಪರ್ಕಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಸಿಬ್ಬಂದಿ ವಲಯದಲ್ಲಿಯೇ ಈ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬರುತ್ತಿವೆ.

ನೋಟಿಸ್‌ ಪಡೆದಿದ್ದಾರೆನ್ನಲಾದ ಹೊನ್ನಾಳಿ ಘಟಕ ವ್ಯವಸ್ಥಾಪಕ ಮಹೇಶ್ವರಪ್ಪ ಅವರಿಗೂ ಕರೆ ಮಾಡಲಾಗಿದೆ. ಆದರೆ, ಅವರು ಈ ಬಗ್ಗೆ ನನಗೆ ಯಾವುದೇ ರೀತಿಯ ನೋಟಿಸ್‌ ಬಂದಿಲ್ಲವೆಂದು ತಳ್ಳಿ ಹಾಕಿದ್ದಾರೆ. ಒಟ್ಟಾರೆ, ಎಂಎಲ್‌ಎ ಅವರ ಬಸ್‌ ಡ್ರೈವ್‌ ಅಧಿಕಾರಿಗಳ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಇದು ಬರುವ ದಿನಗಳಲ್ಲಿಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದುನೋಡಬೇಕಿದೆ.

ಸರ್ಕಾರಿ ಬಸ್ ಡ್ರೈವರ್ ಆದ ರೇಣುಕಾಚಾರ್ಯ..! ಪ್ರಯಾಣಿಕರನ್ನು ನಗಿಸುತ್ತಾ ಬರೋಬ್ಬರಿ 58 ಕಿ.ಮೀ ಡ್ರೈವಿಂಗ್..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ