ಆ್ಯಪ್ನಗರ

ಮಂಕಿ ಪಾರ್ಕ್‌ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

ರೈತರಿಗೆ ಉಪಟಳ ನೀಡುತ್ತಿರುವ ಮಂಗಗಳ ಹಾವಳಿ ತಡೆಗೆ ಮಂಕಿ ಪಾರ್ಕ್‌ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ಅಗತ್ಯ ನೆರವು ದೊರಕಿಸಿಕೊಡುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರಿಗೆ ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ನಗರ ಹೋಬಳಿ ವ್ಯಾಪ್ತಿ ಗ್ರಾಮಗಳ ರೈತರು ಮನವಿ ನೀಡಿದರು.

Vijaya Karnataka 7 Feb 2019, 5:00 am
ತೀರ್ಥಹಳ್ಳಿ: ರೈತರಿಗೆ ಉಪಟಳ ನೀಡುತ್ತಿರುವ ಮಂಗಗಳ ಹಾವಳಿ ತಡೆಗೆ ಮಂಕಿ ಪಾರ್ಕ್‌ ನಿರ್ಮಾಣಕ್ಕಾಗಿ ರಾಜ್ಯ ಸರಕಾರದಿಂದ ಅಗತ್ಯ ನೆರವು ದೊರಕಿಸಿಕೊಡುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ಅವರಿಗೆ ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ನಗರ ಹೋಬಳಿ ವ್ಯಾಪ್ತಿ ಗ್ರಾಮಗಳ ರೈತರು ಮನವಿ ನೀಡಿದರು.
Vijaya Karnataka Web SMR-6TTH4


ಮಂಗಗಳ ಹಾವಳಿ ಹೆಚ್ಚಾಗಿರುವುದರಿಂದ ರೈತರಿಗೆ ಕೃಷಿ ಅಸಾಧ್ಯ ಎನ್ನುವಂತಾಗಿದೆ. ಪ್ರತಿ ವರ್ಷ ರೈತರು ಲಕ್ಷಾಂತರ ರೂ. ಆದಾಯ ಕಳೆದುಕೊಳ್ಳುತ್ತಿದ್ದಾರೆ. ಮಂಗನ ಕಾಯಿಲೆ ಜ್ವರ ಗ್ರಾಮಾಂತರ ಪ್ರದೇಶದಲ್ಲಿ ಬಾಧಿಸುತ್ತಿದೆ. ಜ್ವರ ನಿಯಂತ್ರಣಕ್ಕೆ ಸರಕಾರ ಕೋಟ್ಯಂತರ ರೂ. ವೆಚ್ಚ ಮಾಡಬೇಕಾಗಿದೆ. ಜಿಲ್ಲೆ ವ್ಯಾಪ್ತಿ ಮಂಗಗಳಿಂದ ಪ್ರತಿ ವರ್ಷ 1 ಸಾವಿರ ಕೋಟಿ ರೂ.ಗೂ ಹೆಚ್ಚು ಆದಾಯ ನಷ್ಟವಾಗುತ್ತಿದೆ ಎಂಬ ಅಂಶವನ್ನು ಸಮೀಕ್ಷೆ ಮೂಲಕ ಸಂಪೆಕಟ್ಟೆ ಶೋಧ ಸ್ವಯಂ ಸೇವಾ ಸಂಸ್ಥೆ ಗುರುತಿಸಿದೆ ಎಂದು ರೈತರು ಮಂಜುನಾಥಗೌಡ ಅವರ ಗಮನಕ್ಕೆ ತಂದರು.

ಮಂಕಿಪಾರ್ಕ್‌ ನಿರ್ಮಾಣಕ್ಕೆ ಸುಮಾರು 800 ಎಕರೆ ಭೂ ಪ್ರದೇಶ ಬೇಕಿದೆ. ವೈಜ್ಞಾನಿಕ ಮಾದರಿಯಲ್ಲಿ ಪಾರ್ಕ್‌ ನಿರ್ಮಾಣ ಮಾಡಬಹುದಾಗಿದೆ. ಪ್ರತಿ ಮನೆಗಳಿಂದ ವರ್ಷಕ್ಕೆ 10 ರೂ. ತೆರಿಗೆ ಹಣವನ್ನು ಗ್ರಾಮ ಪಂಚಾಯಿತಿ ಮೂಲಕ ಸಂಗ್ರಹಿಸಿದರೆ ಪಾರ್ಕ್‌ ನಿರ್ವಹಣೆ ಸುಲಭವಾಗಲಿದೆ. ಮಂಗಗಳನ್ನು ನಿಯಂತ್ರಣಗೊಳಿಸಿದರೆ ರೈತರಿಗೆ, ಸಾರ್ವಜನಿಕರಿಗೆ, ಸರಕಾರಕ್ಕೆ ಉಪಯುಕ್ತವಾಗಲಿದೆ. ಸರಕಾರಕ್ಕೆ ಪೂರಕವಾದ ಅಂಶಗಳನ್ನು ವಿವರಿಸಿ ಪಾರ್ಕ್‌ ನಿರ್ಮಾಣಕ್ಕೆ ಸಹಕರಿಸುವಂತೆ ಮಂಜುನಾಥಗೌಡ ಅವರನ್ನು ರೈತರು ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ