ಆ್ಯಪ್ನಗರ

ಭದ್ರಾ ನೀರನ್ನು ಬೇಸಿಗೆ ಬೆಳೆಗೆ ಕಾಯ್ದಿರಿಸಲು ಮನವಿ

ಭದ್ರಾ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ಮಳೆಗಾಲದಲ್ಲಿ ಬೆಳೆಗಳಿಗೆ ಹರಿಸದೆ, ಮುಂದಿನ ಬೇಸಿಗೆ ಬೆಳೆಗಳಿಗೆ ಕಾಯ್ದಿರಿಸಬೇಕೆಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಹಾಗೂ ಜಿಲ್ಲಾಧ್ಯಕ್ಷ ಎಸ್‌.ಶಿವಮೂರ್ತಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

Vijaya Karnataka 7 Aug 2019, 5:00 am
ಹೊಳೆಹೊನ್ನೂರು: ಭದ್ರಾ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ಮಳೆಗಾಲದಲ್ಲಿ ಬೆಳೆಗಳಿಗೆ ಹರಿಸದೆ, ಮುಂದಿನ ಬೇಸಿಗೆ ಬೆಳೆಗಳಿಗೆ ಕಾಯ್ದಿರಿಸಬೇಕೆಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ ಹಾಗೂ ಜಿಲ್ಲಾಧ್ಯಕ್ಷ ಎಸ್‌.ಶಿವಮೂರ್ತಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
Vijaya Karnataka Web request to reserve bhadra water for summer crop
ಭದ್ರಾ ನೀರನ್ನು ಬೇಸಿಗೆ ಬೆಳೆಗೆ ಕಾಯ್ದಿರಿಸಲು ಮನವಿ


ಭದ್ರಾ ಅಣೆಕಟ್ಟೆಯಲ್ಲಿ 32.337 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 14 ಟಿಎಂಸಿ ಡೆಡ್‌ ಸ್ಟೋರೆಜ್‌ ಆಗಿದ್ದು, ಕುಡಿಯುವ ನೀರಿಗೆ 7 ಟಿಎಂಸಿ ನೀರು ಕಾಯ್ದಿರಿಸಬೇಕಾಗಿದೆ. ಉಳಿದ 11ಟಿಎಂಸಿ ನೀರನ್ನು ಉಪಯೋಗಿಸಬಹುದು. ಈ ನೀರನ್ನು ಭದ್ರಾ ಬಲ ಹಾಗೂ ಎಡ ನಾಲೆಗಳಿಗೆ ಹರಿಸಿದರೆ ಕೇವಲ 35 ದಿನಗಳಿಗೆ ಸಾಕಾಗುತ್ತದೆ. ಆದರೆ, ಭತ್ತ ಬೆಳೆಯಲು ಕನಿಷ್ಠ 120 ದಿನ ನೀರು ಹರಿಸುವ ಅವಶ್ಯಕತೆ ಇದೆ. ಆದರೆ, ಈ ನೀರನ್ನು ಮಳೆಗಾಲದ ಬೆಳೆಗೆ ನೀರು ಹರಿಸಲು ತೀರ್ಮಾನಿಸಿದರೆ ಪ್ರಯೋಜನ ಆಗುವುದಿಲ್ಲ ಎಂದಿದ್ದಾರೆ.

ಈಗಾಗಲೆ ಭತ್ತದ ನಾಟಿಗೆ ಸಾಕಷ್ಟು ತಡವಾಗಿದೆ. ಹೀಗಿರುವಾಗ ಈಗ ಭತ್ತದ ಸಸಿ ಮಡಿ ನಾಟಿ ಮಾಡಲು ತೀರಾ ತಡವಾಗುತ್ತದೆ. ಇದನ್ನು ಮನಗಂಡು ನೀರು ಹರಿಸಬಾರದು ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 1ಲಕ್ಷ ಎಕರೆ ಅಡಕೆ, ತೆಂಗು, ಕಬ್ಬು, ಬಾಳೆ ದೀರ್ಘಾವಧಿ ಬೆಳೆಗಳಿವೆ. ಬೇಸಿಗೆಯಲ್ಲಿ ನೀರು ಕೊಡದೇ ಹೋದರೆ ಕೋಟ್ಯಂತರ ರೂ. ನಷ್ಟವಾಗುತ್ತದೆ. ತೋಟದ ಬೆಳೆಗಳಿಗೆ ಮಳೆಗಾಲದಲ್ಲಿ ಯಾರು ನೀರು ಹರಿಸುವುದಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಬೆಳೆಗೆ ನೀರನ್ನು ಹರಿಸದೇ ಮುಂದಿನ ಬೇಸಿಗೆಯಲ್ಲಿ ನೀರನ್ನು ಹರಿಸಿ ತೋಟದ ಬೆಳೆಗಳನ್ನು ಉಳಿಸಿಕೊಂಡು, ಭತ್ತದ ಬೆಳೆ ಬೆಳೆಯಬಹುದು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ