ಆ್ಯಪ್ನಗರ

ಸಮಾಜದ ಬೆಳವಣಿಗೆಗೆ ಸಂಶೋಧನೆ

ಪೂರ್ವಗ್ರಹ ಪೀಡಿತ ಹಿತಾಸಕ್ತಿಯಿಂದ ದೂರ ಉಳಿದ ಸಂಶೋಧನೆಯಿಂದ ಮಾತ್ರ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬಹುದು ಎಂದು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.

Vijaya Karnataka 28 Mar 2019, 5:00 am
ಶಿವಮೊಗ್ಗ: ಪೂರ್ವಗ್ರಹ ಪೀಡಿತ ಹಿತಾಸಕ್ತಿಯಿಂದ ದೂರ ಉಳಿದ ಸಂಶೋಧನೆಯಿಂದ ಮಾತ್ರ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬಹುದು ಎಂದು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಹೇಳಿದರು.
Vijaya Karnataka Web SMR-27GANESH2


ಶಂಕರಘಟ್ಟದ ಕುವೆಂಪು ವಿವಿ ಸಭಾಂಗಣದಲ್ಲಿ ಬುಧವಾರ ರಾಜ್ಯ ಸರಕಾರದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಡಿ ಕುವೆಂಪು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕ ಏರ್ಪಡಿಸಿದ್ದ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ವಿಧಾನ ಕಾರಾರ‍ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದ ಹೊರಬಂದು ಸಮಾಜದ ಬೆಳವಣಿಗೆಗೆ ಪೂರಕವಾದ ಸಂಶೋಧನೆ ಕೈಗೊಳ್ಳುವ ಮೂಲಕ ಪ್ರಸ್ತುತದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು. ಸಂಶೋಧನೆಯು ವರ್ಗ, ಕೋಮುಗಳ ಹಿತಾಸಕ್ತಿಯಿಂದ ಮುಕ್ತವಾಗಿರಬೇಕು. ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿ ಅಥೈರ್‍ಸಿಕೊಂಡು, ಹೊಸ ಸಂಶೋಧನಾ ವಿಧಾನ, ಮಾಹಿತಿ ಸಂಗ್ರಹದ ಪರಿಕರಗಳನ್ನು ಅನ್ವೇಷಿಸಿ ಪರಿಹಾರ ಹುಡುಕಬೇಕಿದೆ ಎಂದರು.

ಇಂದು ಸಂಶೋಧನೆಯು ವಾಣಿಜ್ಯ, ಶಿಕ್ಷ ಣ, ಆಡಳಿತ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳ ಅವಶ್ಯಕತೆಯಾಗಿದೆ. ಹೀಗಾಗಿ ಕೇವಲ ಡಿಗ್ರಿ, ಅರ್ಹತೆ ಅಥವಾ ಗೌರವಗಳಂತಹ ಸಂಕುಚಿತ ಉದ್ದೇಶಗಳಿಗಾಗಿ ಸಂಶೋಧನೆ ಕೈಗೊಳ್ಳಬಾರದು ಎಂದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರಾಧ್ಯಾಪಕ ಡಾ. ಗವಿಸಿದ್ಧಪ್ಪ, ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನ ಅಧ್ಯಾಪಕ ಡಾ.ಎ.ಎಚ್‌. ಮಂಜುನಾಥಸ್ವಾಮಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕದ ಸಂಚಾಲಕ ಡಾ.ತಿಪ್ಪೇಸ್ವಾಮಿ, ಓಬಿಸಿ ಘಟಕದ ಸಂಚಾಲಕ ಡಾ.ವಿಜಯ್‌ಕುಮಾರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ