ಆ್ಯಪ್ನಗರ

ಕುಡಿತ ಬಿಟ್ಟರೆ ಕುಟುಂಬಕ್ಕೆ ಗೌರವ

ಮದ್ಯ ವ್ಯಸನವು ಕುಟುಂಬದವರಿಂದ ಬಂಧುತ್ವ ದೂರಮಾಡುತ್ತದೆ. ಜತೆಗೆ ಸಮಾಜದಲ್ಲಿರುವ ಗೌರವವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಕುಟುಂಬದ ನೆಮ್ಮದಿ, ಶಾಂತಿ ಹಾಳಾಗುತ್ತದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌.ಶ್ರೀಹರ್ಷ ಹೇಳಿದರು.

Vijaya Karnataka 25 Nov 2019, 5:00 am
ಭದ್ರಾವತಿ: ಮದ್ಯ ವ್ಯಸನವು ಕುಟುಂಬದವರಿಂದ ಬಂಧುತ್ವ ದೂರಮಾಡುತ್ತದೆ. ಜತೆಗೆ ಸಮಾಜದಲ್ಲಿರುವ ಗೌರವವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಕುಟುಂಬದ ನೆಮ್ಮದಿ, ಶಾಂತಿ ಹಾಳಾಗುತ್ತದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್‌.ಶ್ರೀಹರ್ಷ ಹೇಳಿದರು.
Vijaya Karnataka Web respect for the family if left drunk
ಕುಡಿತ ಬಿಟ್ಟರೆ ಕುಟುಂಬಕ್ಕೆ ಗೌರವ


ಅವರು ಭಾನುವಾರ ಗಾಂಧಿನಗರದ ಅಗಮುಡಿ ಮೊದಲಿಯಾರ್‌ ಸಮುದಾಯ ಭವನದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿರುವ 1436 ಮದ್ಯವರ್ಜನಶಿಬಿರದ 5ನೇ ದಿನದ ಕಾರ್ಯಕ್ರಮದಲ್ಲಿಮಾತನಾಡಿದರು.

ಮದ್ಯವರ್ಜನಾ ಶಿಬಿರದಲ್ಲಿಭಾಗಿಗಳಾದವರು ವ್ಯಸನ ಮುಕ್ತರಾಗಿ ಸಮಾಜದಲ್ಲಿಗೌರವಯುತ ಜೀವನಸಾಗಿಸುವ ಮನಸ್ಥಿತಿ ಬೆಳೆಸಿಕೊಳ್ಳಿ ಎಂದರು.

ಮದ್ಯವರ್ಜನೆ ಶಿಬಿರ ವ್ಯವಸ್ಥಾಪನಾ ಸಂಸ್ಥೆ ಅಧ್ಯಕ್ಷ ಆರ್‌.ಕರುಣಾಮೂರ್ತಿ, ಪತ್ರಕರ್ತ ಆರ್‌.ವಿ.ಕೃಷ್ಣ ಮಾತನಾಡಿದರು. ವೇದಿಕೆಯಲ್ಲಿಯೋಜನಾಧಿಕಾರಿ ಕೆ.ಪ್ರಸಾದ್‌, ಕೃಷ್ಣಮೂರ್ತಿ, ರಬಿಯಾ ಇತರರು ಇದ್ದರು.


ಶಿಬಿರಾರ್ಥಿಗಳು ಕುಡಿತದ ಚಟ ಬಿಟ್ಟು ಗೌರವಯುತ ಜೀವನ ನಡೆಸುವ ಸಂಕಲ್ಪಮಾಡಬೇಕು.

-ಅಮುದ,
ಬಿಜಿಎಸ್‌ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ