ಆ್ಯಪ್ನಗರ

ಜ್ಞಾನಕ್ಕೆ ಸಮಾಜದಲ್ಲಿ ಗೌರವ: ಆರಗ

ಛಲ ಬೆಳೆಸಿಕೊಂಡರೆ ಓದು ಸುಲಭ. ಕಠಿಣ ಪರಿಶ್ರಮದಿಂದ ಸಾಧನೆ ತೋರಬೇಕು. ಓದಿನ ಫಲಿತಾಂಶ ಭವಿಷ್ಯವನ್ನು ವೃದ್ಧಿಸುತ್ತದೆ. ಶಾಲಾ ಹಂತದಲ್ಲಿ ಗುರಿ ಇಟ್ಟುಕೊಂಡಾಗ ಸಾಧನೆ ಸಾಧ್ಯವಿದೆ. ಬಡತನ ಮಾತ್ರ ಓದಿಗೆ ಅಡ್ಡಿ ಆಗದು ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.

Vijaya Karnataka 22 Jun 2019, 5:00 am
ತೀರ್ಥಹಳ್ಳಿ : ಛಲ ಬೆಳೆಸಿಕೊಂಡರೆ ಓದು ಸುಲಭ. ಕಠಿಣ ಪರಿಶ್ರಮದಿಂದ ಸಾಧನೆ ತೋರಬೇಕು. ಓದಿನ ಫಲಿತಾಂಶ ಭವಿಷ್ಯವನ್ನು ವೃದ್ಧಿಸುತ್ತದೆ. ಶಾಲಾ ಹಂತದಲ್ಲಿ ಗುರಿ ಇಟ್ಟುಕೊಂಡಾಗ ಸಾಧನೆ ಸಾಧ್ಯವಿದೆ. ಬಡತನ ಮಾತ್ರ ಓದಿಗೆ ಅಡ್ಡಿ ಆಗದು ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.
Vijaya Karnataka Web SMR-21TTH9


ಶುಕ್ರವಾರ ತಾಲೂಕಿನ ಬಿಳಾಲುಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ 2018-19ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.100 ಸಾಧನೆ ತೋರಿದ ಮಕ್ಕಳನ್ನು ಪುರಸ್ಕರಿಸುವ, ಶಾಲಾ ಕಟ್ಟಡದ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭೆಗೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವಂತಹ ಸಮಾಜ ಇಂದು ನಮ್ಮ ನಡುವೆ ಇದೆ. ಸಾಧಕರ ಜೀವನದ ಕುರಿತು ಮಕ್ಕಳು ಮಾಹಿತಿ ಪಡೆದಾಗ ಸಾಧನೆ ಮಹತ್ವ ಅರಿವಾಗುತ್ತದೆ. ಜ್ಞಾನಕ್ಕೆ ಸಮಾಜದಲ್ಲಿ ಅಗಾಧ ಗೌರವ ಇದೆ. ಜ್ಞಾನ ಸಂಪಾದನೆ ಓದಿನಿಂದ ಮಾತ್ರ ಸಾಧ್ಯ ಎಂದರು.

ಬಡತನ ಕುಟುಂಬದ ನನಗೆ ಅಧ್ಯಯನ ಮಾಡಲು ತಾರಗೊಳ್ಳಿ ನಾಗರಾಜರಾಯರು ಸದಾ ಸ್ಮರಿಸುವಂತಹ ಸಹಕಾರ ನೀಡಿ ಬೆಳೆಸಿದರು. ಇಂದು ಕ್ಷೇತ್ರದ ಪ್ರತಿನಿಧಿ ಆಗಿ ಕಾರ‍್ಯನಿರ್ವಹಿಸುವಂತಹ ಸೌಭಾಗ್ಯವನ್ನು ಜನರು ನೀಡಿದ್ದಾರೆ. ದೃಢ ಆತ್ಮವಿಶ್ವಾಸ ಬೆಳೆಸಿಕೊಂಡು ನಾಯಕತ್ವ ಗುಣ ಬೆಳೆಸಿಕೊಳ್ಳುವ ಸಾಮರ್ಥ್ಯ‌ವನ್ನು ಮಕ್ಕಳು ರೂಢಿಸಿಕೊಳ್ಳಬೇಕೆಂದು ಆರಗಜ್ಞಾನೇಂದ್ರ ಹೇಳಿದರು.

ಈ ಸಂದರ್ಭ ಜಿ.ಪಂ.ಸದಸ್ಯೆ ಭಾರತೀಪ್ರಭಾಕರ್‌, ತಾ.ಪಂ.ಸದಸ್ಯೆ ಗೀತಾಶೆಟ್ಟಿ, ಬಿಇಓ ಆನಂದಕುಮಾರ್‌, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್‌, ಶಾಲೆ ಮುಖ್ಯ ಶಿಕ್ಷಕ ಏಕಾಂತಪ್ಪ, ಮುಳುಬಾಗಿಲು ಗ್ರಾ.ಪಂ.ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಸಹ ಶಿಕ್ಷಕರು, ಗ್ರಾಮಸ್ಥರು ಇದ್ದರು.

---------
ಶಾಲಾ ಮಕ್ಕಳಿಗೆ ವಿಶೇಷ ಪ್ರೋತ್ಸಾಹಧನ
ಶೇ 100 ಫಲಿತಾಂಶದ ಸಾಧನೆ ಮೂಲಕ ಶಾಲೆಗೆ ಕೀರ್ತಿ ತಂದ 31 ಮಕ್ಕಳಿಗೆ ಶಾಸಕ ಆರಗಜ್ಞಾನೇಂದ್ರ ಅವರು ವೈಯುಕ್ತಿಕವಾಗಿ ತಲಾ 1 ಸಾವಿರ ರೂ.ವಿಶೇಷ ಪ್ರೋತ್ಸಾಹಧನ ನೀಡಿ ಗೌರವಿಸಿದರು. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮಕ್ಕಳಿಗೆ ವೈಯುಕ್ತಿಕ ಪ್ರೋತ್ಸಾಹಧನ ನೀಡಿ ಪುರಸ್ಕರಿಸಿದರು. ಗಂಟೆಹಕ್ಕಲು ರತ್ನಾಕರ್‌ ಗೌಡ ಅವರು ಉಚಿತವಾಗಿ ಲೇಖನಿ ಸಾಮಗ್ರಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ