ಆ್ಯಪ್ನಗರ

ಯುವಜನತೆಗೆ ಸಂಸ್ಕೃತಿ ಉಳಿಸುವ ಹೊಣೆ

ಶಿಕ್ಷಣದ ಜತೆಗೆ ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಾಗ ಸಂಸ್ಕಾರಯುತ ಜೀವನ ಕಟ್ಟಿಕೊಳ್ಳಲು ಹಾಗೂ ಸರ್ವತೋಮುಖ ಅಭಿವೃದ್ಧಿಹೊಂದಲು ಸಾಧ್ಯ ಎಂದು ಜಿ.ಪಂ. ಸದಸ್ಯೆ ರಾಜೇಶ್ವರಿ ಗಣಪತಿ ಹೇಳಿದರು.

Vijaya Karnataka 15 Dec 2019, 5:00 am
ಸೊರಬ: ಶಿಕ್ಷಣದ ಜತೆಗೆ ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಾಗ ಸಂಸ್ಕಾರಯುತ ಜೀವನ ಕಟ್ಟಿಕೊಳ್ಳಲು ಹಾಗೂ ಸರ್ವತೋಮುಖ ಅಭಿವೃದ್ಧಿಹೊಂದಲು ಸಾಧ್ಯ ಎಂದು ಜಿ.ಪಂ. ಸದಸ್ಯೆ ರಾಜೇಶ್ವರಿ ಗಣಪತಿ ಹೇಳಿದರು.
Vijaya Karnataka Web 121113SRBP1_46


ತಾಲೂಕಿನ ಹಳೇಸೊರಬ ಸರಕಾರಿ ಪ್ರೌಢಶಾಲೆಯಲ್ಲಿಶುಕ್ರವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ ಮುಖ್ಯ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸರಕಾರದ ಸವಲತ್ತು ಬಳಸಿಕೊಂಡು ಪ್ರಗತಿ ಹೊಂದಬೇಕೆಂದರು.

ಶಿವಮೊಗ್ಗದ ಸಮಾಜ ಕಾರ್ಯಕರ್ತೆ ಪ್ರತಿಭಾ ಅರುಣ್‌ ಮಾತನಾಡಿ, ಈ ಶಾಲೆಯ ಉತ್ತಮ ಫಲಿತಾಂಶ ಹಾಗೂ ಹೆಚ್ಚಿನ ಮಕ್ಕಳ ಸಂಖ್ಯೆ ಅಚ್ಚರಿ ಮೂಡಿಸುತ್ತದೆ. ಶಿಕ್ಷಕರ ಶ್ರಮ ಸಾರ್ಥಕವಾಗಿದೆ ಎಂದರು. ತಾ.ಪಂ. ಸದಸ್ಯೆ ಇಂದಿರಾ ಕೃಷ್ಣಪ್ಪ ಅವರು ವಿದ್ಯಾರ್ಥಿಗಳು ಕೈತೊಳೆಯುವ ನೀರಿನ ಕಟ್ಟೆ ಉದ್ಘಾಟಿಸಿ ಮಾತನಾಡಿದರು.

ಎಸ್‌.ಎಂ.ನೀಲೇಶ್‌ ಉಪನ್ಯಾಸ ನೀಡಿದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮನೋಹರ್‌, ಎಪಿಎಂಸಿ ಸದಸ್ಯ ಜೆ.ಪ್ರಕಾಶ್‌, ಗ್ರಾ.ಪಂ. ಸದಸ್ಯ ಪ್ರಭಾಕರ್‌ ಮಾತನಾಡಿದರು. ಶಿಕ್ಷಕಿ ಸುಜಾತ ವರದಿ ವಾಚಿಸಿದರು.

ಶಿಕ್ಷಕಿಯರಾದ ಕಲಾವತಿ ಮತ್ತು ಲಕ್ಷಿತ್ರ್ಮೕ ಸನ್ಮಾನ ಕಾರ್ಯಕ್ರಮ ನಡೆಸಿದರು. ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಓಟೂರು ಅಧ್ಯಕ್ಷತೆ ವಹಿಸಿದ್ದರು. ಭುವನ್‌ ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಓಂಕಾರಪ್ಪ ಸ್ವಾಗತಿಸಿ, ಶಿಕ್ಷಕರಾದ ಸುರೇಶ್‌ ವಂದಿಸಿ, ಜಯಶ್ರೀ ನಿರೂಪಿಸಿದರು. ಗ್ರಾ.ಪಂ. ಸದಸ್ಯರಾದ ಅರುಣ್‌, ಸರೋಜಾ, ಶಿಕ್ಷಕರಾದ ಶೋಭ, ಶಿಲ್ಪ, ಸುಜಾತ ಭಂಡಾರಿ, ಗೋಪಾಲ್‌, ಪುಟ್ಟಪ್ಪ, ಸತ್ಯನಾರಾಯಣ್‌, ಶಾಂತಪ್ಪ, ಅರುಣ್‌ ಸೇರಿದಂತೆ ಶಾಲಾ ಸಮಿತಿ ಸದಸ್ಯರು ಇತರರು ಇದ್ದರು.

ಸನ್ಮಾನ, ಬಹುಮಾನ: ಕಳೆದ ವರುಷ ಎಸ್ಸೆಸ್ಸೆಲ್ಸಿಯಲ್ಲಿಅತಿ ಹೆಚ್ಚು ಅಂಕ ಪಡೆದ ಮತ್ತು ಅತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭೂಮಣ್ಣಿ ಬುಟ್ಟಿ ಬರೆದ ವಿದ್ಯಾರ್ಥಿಗಳು, ಹಸೆ ಚಿತ್ತಾರ ಬರೆದ ವಿದ್ಯಾರ್ಥಿಗಳು, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳ ಸಂತೆಯಲ್ಲಿಗುರುತಿಸಿಕೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

------
ಕಲೆ, ಸಂಸ್ಕೃತಿ ಉಳಿಸುವ ಹೊಣೆಗಾರಿಕೆ ಇಂದಿನ ಯುವ ಜನತೆ ಮೇಲಿದೆ. ತಮ್ಮಲ್ಲಿರುವ ಜ್ಞಾನ, ಕೌಶಲ ಬಳಸಿಕೊಂಡು ಕುಲ ಕಸುಬುಗಳನ್ನು ಅಭಿವೃದ್ಧಿ ಪಡಿಸಿದರೆ ಪ್ರಗತಿ ಸಾಧ್ಯ.
-ಪ್ರತಿಭಾ ಅರುಣ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ