ಆ್ಯಪ್ನಗರ

ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಪುನಾರಂಭಿಸಿ

ಇಲ್ಲಿನ ಕೆಎಸ್‌ಆರ್‌ಟಿಸಿ ಘಟಕದಿಂದ ಉಡುಪಿ, ಮಂಗಳೂರು, ಧರ್ಮಸ್ಥಳ, ಶೃಂಗೇರಿ ಹಾಗೂ 43 ರೂ. ಪ್ರಯಾಣದರದ ಶಿವಮೊಗ್ಗ ಬಸ್‌ ಸೌಲಭ್ಯ ಪುನಾ ಪ್ರಾರಂಭಿಸುವಂತೆ ಬುಧವಾರ ವಿಶ್ವಹಿಂದೂ ಪರಿಷತ್‌ ಮತ್ತು ಭಜರಂಗ ದಳದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾಗರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 18 Jul 2019, 5:00 am
ಸಾಗರ : ಇಲ್ಲಿನ ಕೆಎಸ್‌ಆರ್‌ಟಿಸಿ ಘಟಕದಿಂದ ಉಡುಪಿ, ಮಂಗಳೂರು, ಧರ್ಮಸ್ಥಳ, ಶೃಂಗೇರಿ ಹಾಗೂ 43 ರೂ. ಪ್ರಯಾಣದರದ ಶಿವಮೊಗ್ಗ ಬಸ್‌ ಸೌಲಭ್ಯ ಪುನಾ ಪ್ರಾರಂಭಿಸುವಂತೆ ಬುಧವಾರ ವಿಶ್ವಹಿಂದೂ ಪರಿಷತ್‌ ಮತ್ತು ಭಜರಂಗ ದಳದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾಗರ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web SMR-17SGR1


ಈ ಸಂದರ್ಭ ವಿಶ್ವಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ಐ.ವಿ.ಹೆಗಡೆ ಮಾತನಾಡಿ, ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪನೆಯಾಗಿ 10ವರ್ಷ ಕಳೆದಿದ್ದರೂ ಸಾಗರದ ಮೂಲಕ ಅಗತ್ಯ ಮಾರ್ಗಗಳಿಗೆ ಬಸ್‌ ಸೌಲಭ್ಯ ಒದಗಿಸಿಲ್ಲ. ಬಸ್‌ ಡಿಪೋ ಇದ್ದೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಪ್ರಮುಖವಾಗಿ ಸಾಗರದಿಂದ ಬೆಳಗ್ಗೆ 8ಕ್ಕೆ ಮಂಗಳೂರಿಗೆ ಹೋಗುತ್ತಿದ್ದ, ಗೋಕರ್ಣಕ್ಕೆ ಬೆಳಗ್ಗೆ 9-45ಕ್ಕೆ ಸಂಚರಿಸುತ್ತಿದ್ದ, ಮಣಿಪಾಲ, ಧರ್ಮಸ್ಥಳಕ್ಕೆ ಸಂಚರಿಸುತ್ತಿದ್ದ ಬಸ್‌ ಸೌಲಭ್ಯಗಳನ್ನು ಏಕಾಏಕಿ ನಿಲ್ಲಿಸಲಾಗಿದೆ. ಅಲ್ಲದೇ ಸಾಗರದಿಂದ ಶಿವಮೊಗ್ಗಕ್ಕೆ ರೂ. 43 ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್‌ ಸೌಲಭ್ಯ ಸಹ ಸ್ಥಗಿತಗೊಳಿಸಲಾಗಿದೆ. ಬಡವರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಶಿವಮೊಗ್ಗಕ್ಕೆ ಹೋಗಿ ಬರಲು ಹೆಚ್ಚು ಅನುಕೂಲವಾಗಿತ್ತು. ಆದರೆ ನಿಗಮವು ಏಕಾಏಕಿ ಬಸ್‌ ನಿಲ್ಲಿಸಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ. ಬಸ್‌ ಸೇವೆಗಳನ್ನು ಪುನಾರಂಭ ಮಾಡಬೇಕು. ಧರ್ಮಸ್ಥಳ, ಶೃಂಗೇರಿ, ಹೊರನಾಡು, ತೀರ್ಥಹಳ್ಳಿ ಸೇರಿದಂತೆ ಸಾಗರದ ಗ್ರಾಮಾಂತರ ಪ್ರದೇಶಕ್ಕೂ ಸರಕಾರಿ ಬಸ್‌ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.

ವಕೀಲ ಕೆ.ಎಚ್‌.ಸುದರ್ಶನ್‌, ವಿಶ್ವಹಿಂದೂ ಪರಿಷತ್‌ ಮತ್ತು ಭಜರಂಗ ದಳ ಪ್ರಮುಖರಾದ ಕೋಮಲ್‌ ರಾಘವೇಂದ್ರ, ಸಂತೋಷ್‌, ಕುಮಾರ್‌, ರಾಮು ಚವ್ಹಾನ್‌, ಸುದರ್ಶನ ಭಂಡಾರಿ, ಗಣೇಶ್‌, ನಾಗರಾಜ, ರಾಘವೇಂದ್ರ, ಮಂಜುನಾಥ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ