ಆ್ಯಪ್ನಗರ

ಜಿಪಂ ಅಧಿಕಾರಕ್ಕೆ ಫಲಿತಾಂಶ ನಿರ್ಣಾಯಕ

ಜಿಲ್ಲಾ ಪಂಚಾಯಿತಿ ಸದಸ್ಯ ಕಾಗೋಡು ಅಣ್ಣಪ್ಪ ಅವರ ನಿಧನದಿಂದ ತೆರವಾದ ಆವಿನಹಳ್ಳಿ ಕ್ಷೇತ್ರಕ್ಕೆ ಉಪ ಚುನಾವಣೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು ಅ.28ರಂದು ಮತದಾನ ನಡೆಯಲಿದೆ.

Vijaya Karnataka 4 Oct 2018, 5:00 am
ಶಿವಮೊಗ್ಗ : ಜಿಲ್ಲಾ ಪಂಚಾಯಿತಿ ಸದಸ್ಯ ಕಾಗೋಡು ಅಣ್ಣಪ್ಪ ಅವರ ನಿಧನದಿಂದ ತೆರವಾದ ಆವಿನಹಳ್ಳಿ ಕ್ಷೇತ್ರಕ್ಕೆ ಉಪ ಚುನಾವಣೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು ಅ.28ರಂದು ಮತದಾನ ನಡೆಯಲಿದೆ.
Vijaya Karnataka Web result final for zillapanchayath power
ಜಿಪಂ ಅಧಿಕಾರಕ್ಕೆ ಫಲಿತಾಂಶ ನಿರ್ಣಾಯಕ


ಕಾಗೋಡು ಅಣ್ಣಪ್ಪ ಅವರು ಅನಾರೋಗ್ಯದಿಂದಾಗಿ ಸೆಪ್ಟೆಂಬರ್‌ 5ರಂದು ನಿಧನ ಹೊಂದಿದ್ದರು. ಅದಾಗಿ ಒಂದು ತಿಂಗಳೊಳಗೆ ಚುನಾವಣೆ ಆಯೋಗವು ಉಪ ಚುನಾವಣೆ ಘೋಷಿಸಿದ್ದು ಅ.28ರಂದು ಮತದಾನ, 31ರಂದು ಮತ ಎಣಿಕೆ ನಡೆಯಲಿದೆ. ಬುಧವಾರದಿಂದಲೆ ನೀತಿ ಸಂಹಿತೆ ಜಾರಿಯಾಗಿದೆ.

ಅವಿನಹಳ್ಳಿ ಫಲಿತಾಂಶವು ಜಿಲ್ಲಾ ಪಂಚಾಯಿತಿ ಅಧಿಕಾರದ ಮೇಲೆ ಪ್ರಭಾವ ಬೀರಲಿದೆ. ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಕ್ಷೇತ್ರವು ಅಕಸ್ಮಾತ್‌ ಬಿಜೆಪಿಗೆ ತೆಕ್ಕೆಗೆ ಜಾರಿದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರ ಸಹ ಬಿಜೆಪಿ ಪಾಲಾಗಲಿದೆ. 31ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ 15, ಕಾಂಗ್ರೆಸ್‌ 8, ಜೆಡಿಎಸ್‌ 7 ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ಇದ್ದಾರೆ. ಸರಳ ಬಹುಮತಕ್ಕೆ 16 ಸದಸ್ಯ ಬಲ ಬೇಕಾಗಿದ್ದ ಬಿಜೆಪಿಗೆ 1 ಸ್ಥಾನ ಕೊರತೆಯಾಗಿದೆ. ಈ ಅವಕಾಶ ಬಳಸಿಕೊಂಡು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಿವೆ.

ಕಾಗೋಡು ಅಣ್ಣಪ್ಪ ಅವರ ನಿಧನದಿಂದ ಅಧಿಕಾರದಲ್ಲಿರುವ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟದ ಸದಸ್ಯ ಬಲ 15ಕ್ಕೆ ಕುಸಿದಿದ್ದು ಆಡಳಿತ ಮತ್ತು ಪ್ರತಿಪಕ್ಷಗಳು ಸಮಬಲ ಹೊಂದಿವೆ. ಆವಿನಹಳ್ಳಿ ಉಪ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದಲ್ಲಿ 16 ಸದಸ್ಯ ಬಲದೊಂದಿಗೆ ಅಧಿಕಾರಕ್ಕೆ ಏರುವ ಅವಕಾಶ ಲಭ್ಯವಾಗಲಿದೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ಗೆಲುವು ಸಾಧಿಸಿದರೆ ಅಧಿಕಾರ ಮುಂದುವರಿಯಲಿದೆ.

ಆವಿನಹಳ್ಳಿ ಉಪ ಚುನಾವಣೆಯು ಮೈತ್ರಿಕೂಟಕ್ಕೆ ಅಳಿವು ಉಳಿವನ್ನು ನಿರ್ಧರಿಸಿದರೆ, ಬಿಜೆಪಿ ಪಾಲಿಗೆ ಅಧಿಕಾರವನ್ನು ಮರಳಿ ಗಿಟ್ಟಿಸಿಕೊಳ್ಳುವ ಹಾದಿಯಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಕ್ಕೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿಕೂಟದ ಪರವಾಗಿ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

-------------
ವೇಳಾಪಟ್ಟಿ

ಅಧಿಸೂಚನೆ- ಅ.13

ನಾಮಪತ್ರ ಸಲ್ಲಿಕೆಗೆ ಕಡೇ ದಿನ- ಅ.16

ಪರಿಶೀಲನೆ- ಅ.17

ಹಿಂತೆಗೆದುಕೊಳ್ಳಲು ಕಡೇ ದಿನ- ಅ.20

ಮತದಾನ- ಅ.28

ಮತ ಎಣಿಕೆ- ಅ.31

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ