ಆ್ಯಪ್ನಗರ

ಮೋದಿ ವಿರೋಧಿಗಳಿಗೆ ತಕ್ಕ ಉತ್ತರ

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬ ನಾಗರಿಕರನ್ನು ಒಂದೇ ಎಂಬ ಭಾವನೆಯಿಂದ ಕಂಡ ಪರಿಣಾಮವಾಗಿ ಈ ಜಯ ಲಭಿಸಿದೆ ಎಂದು ತಾಲೂಕು ಬಿಜೆಪಿ ಯುವ ಮುಖಂಡ ಮೂಡಬಾಗಿಲು ನಾಗೇಶ್‌ ಹೇಳಿದರು.

Vijaya Karnataka 24 May 2019, 5:00 am
ನರಸಿಂಹರಾಜಪುರ : ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬ ನಾಗರಿಕರನ್ನು ಒಂದೇ ಎಂಬ ಭಾವನೆಯಿಂದ ಕಂಡ ಪರಿಣಾಮವಾಗಿ ಈ ಜಯ ಲಭಿಸಿದೆ ಎಂದು ತಾಲೂಕು ಬಿಜೆಪಿ ಯುವ ಮುಖಂಡ ಮೂಡಬಾಗಿಲು ನಾಗೇಶ್‌ ಹೇಳಿದರು.
Vijaya Karnataka Web CKM-23NRP2


ತಾಲೂಕಿನ ಕೈಮರದಲ್ಲಿ ಗುರುವಾರ ಬಿಜೆಪಿ ವಿಜಯೋತ್ಸವದಲ್ಲಿ ಅವರು ಮಾತನಾಡಿ, ಪ್ರತಿಪಕ್ಷದವರು ಅನಾವಶ್ಯಕವಾಗಿ ಮೋದಿಯವರು ಅಲ್ಪಸಂಖ್ಯಾತರ, ಎಸ್‌ಸಿ, ಎಸ್‌ಟಿಗಳ ವಿರೋಧಿ ಎಂದು ಬಿಂಬಿಸಿಕೊಂಡು ಬಂದಿದ್ದರು. ಆದರೆ, ದೇಶದ ಜನತೆ ಅದಕ್ಕೆ ಉತ್ತರ ನೀಡಿದ ಪರಿಣಾಮ ಈ ಫಲಿತಾಂಶ ಬಂದಿದೆ. ದೇಶದ್ಯಾಂತ ಮೋದಿ ಪರ ಅಲೆ ಹಾಗೂ ಸ್ಥಳೀಯ ಮಾಜಿ ಶಾಸಕರ ಪ್ರಭಾವದಿಂದ ಈ ಫಲಿತಾಂಶ ಕ್ಷೇತ್ರದಲ್ಲಿ ಲಭಿಸಿದೆ ಎಂದರು.

ಬಿಜೆಪಿ ಮುಖಂಡರಾದ ಎಲಿಯಾಸ್‌,ಸನ್ನಿ, ಅಂಬಡಿ,ವಿಜಯ್‌,ವಿಜು,ಜೇಮ್ಸ,ಲೋಕೇಶ್‌,ವಸಂತ್‌ಕುಮಾರ್‌, ಅಶ್ವಿನ್‌, ಶ್ರೀನಾಥ, ಜೇಮ್ಸ್‌, ವಿಜಯಕುಮಾರ್‌ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ