ಆ್ಯಪ್ನಗರ

ಸಂಸ್ಕಾರವೇ ಸಮಾಜದ ಆಸ್ತಿ

ಜಾತಿ, ಮತ, ಪಂಥ ಮೀರಿ ಎಲ್ಲರ ಮನದಲ್ಲಿ ಬಾಳಿನ ಭರವಸೆ ಮೂಡಿಸುವ ಜತೆಗೆ ಸಮಾಜದಲ್ಲಿ ಸಮನ್ವಯತೆ ಸಾಧಿಸಿದ ಕೀರ್ತಿ ಶ್ರೀ ಜಗದ್ಗುರು ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದು ತಾವರೆಕೆರೆ ರಂಭಾಪುರಿ ಖಾಸಾ ಶ್ರೀಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 12 Aug 2019, 11:36 pm
ಶಿವಮೊಗ್ಗ: ಜಾತಿ, ಮತ, ಪಂಥ ಮೀರಿ ಎಲ್ಲರ ಮನದಲ್ಲಿ ಬಾಳಿನ ಭರವಸೆ ಮೂಡಿಸುವ ಜತೆಗೆ ಸಮಾಜದಲ್ಲಿ ಸಮನ್ವಯತೆ ಸಾಧಿಸಿದ ಕೀರ್ತಿ ಶ್ರೀ ಜಗದ್ಗುರು ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದು ತಾವರೆಕೆರೆ ರಂಭಾಪುರಿ ಖಾಸಾ ಶ್ರೀಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web SMR-11GANESH8


ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಐಟಿಐ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ವೀರಶೈವ ವಧೂ ವರರ ಸಮಾವೇಶ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದು ಯುವಕರು ಕೈಗಾರಿಕಾ ತರಬೇತಿ ಪಡೆಯುವಲ್ಲಿ ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಯುವ ಜನತೆ ಧಾರ್ಮಿಕತೆಯತ್ತ ಹೆಚ್ಚಿನ ಒಲವು ತೋರಿಸುವುದರೊಂದಿಗೆ ಸಂಸ್ಕಾರ, ಸದ್ಗುಣ ಬೆಳೆಸಿಕೊಂಡು ಬಾಳಿದ್ದಾದರೆ ಸಮಾಜದ ಆಸ್ತಿಯಾಗಬಲ್ಲರು ಎಂದರು.

ಸಮಾರಂಭವನ್ನು ಪಂಚಶ್ರೀ ಚಾರಿಟೇಬಲ್‌ ಟ್ರಸ್ಟಿ ಬಿ.ಆರ್‌.ಇಂದಿರಾ ಉದ್ಘಾಟಿಸಿದರು. ಡಾ.ಚನ್ನು ಹಿರೇಮಠ ಹಾಗೂ ವೀರಶೈವ ಜಂಗಮ ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಇ. ಸುಜಯ ರೇಣುಕಪ್ರಸಾದ್‌ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಿ.ಎನ್‌. ಪರಮೇಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು. ವಿN್ನೕಶ್ವರಯ್ಯ ಸೊಲ್ಲಾಪುರ, ಮಲ್ಲಿಕಾರ್ಜುನಸ್ವಾಮಿ, ಯಶೋಧಾ, ಮಹಂತೇಶ ಮತ್ತಿತರರು ಹಾಜರಿದ್ದರು.

ರಕ್ತದಾನ ಶಿಬಿರ : ಇದೇ ಸಂದರ್ಭ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್‌ ಕಾಲೇಜಿನಿಂದ ರಕ್ತದಾನ ಶಿಬಿರ ನಡೆಯಿತು. ಶ್ರೀ ಜಗದ್ಗುರು ಪಂಚಾಚಾರ್ಯ ಚಿತ್ರಕಲಾ ಕಾಲೇಜ್‌ ಶಿಕ್ಷಣಾರ್ಥಿಗಳು ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ