ಆ್ಯಪ್ನಗರ

ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರ ಆಕ್ರೋಶ

ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದಲ್ಲಿ ರಸ್ತೆ ಕಾಮಗಾರಿ ವಿಳಂಬ ಹಾಗೂ ಗುತ್ತಿಗೆದಾರನ ನಿರ್ಲಕ್ಷ ್ಯದಿಂದ ವಾಹನಗಳ ಓಡಾಟ ಹಾಗು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿ ಪರಿತಪಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 4 Jul 2019, 5:00 am
ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದಲ್ಲಿ ರಸ್ತೆ ಕಾಮಗಾರಿ ವಿಳಂಬ ಹಾಗೂ ಗುತ್ತಿಗೆದಾರನ ನಿರ್ಲಕ್ಷ ್ಯದಿಂದ ವಾಹನಗಳ ಓಡಾಟ ಹಾಗು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿ ಪರಿತಪಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web SMR-3BDVT4


ಸಿದ್ದಾಪುರ ಗ್ರಾಮದ ಮೂಲಕ ಹೊಸೂರು, ತಾಂಡಾಕ್ಕೆ ಕುಡಿಯುವ ನೀರಿನ ಹೊಸ ಸಂಪರ್ಕ ಪೈಪುಗಳನ್ನು ಹಾಕಲಾಗಿದೆ. ಕಾಮಗಾರಿಗೆಂದು ಮುಖ್ಯರಸ್ತೆಯನ್ನು ಅಗೆದಿದ್ದು, ಇದುವರೆಗೂ ಮುಚ್ಚಿಲ್ಲ. ಕಾಮಗಾರಿ ಆರಂಭಿಸಿ ಮೂರು ತಿಂಗಳಾಗಿದ್ದು, ಪೈಪ್‌ ಅಳವಡಿಸುವ ಕೆಲಸ ಮುಗಿದಿದೆ. ಆದರೆ, ಅಗೆದಿರುವ ಗುಂಡಿಯನ್ನು ಬೇಕಾಬಿಟ್ಟಿಯಾಗಿ ಮುಚ್ಚಿದ್ದು ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಅಲ್ಲದೆ, ಕಾಮಗಾರಿ ವೇಳೆ ಡಾಂಬಾರು ರಸ್ತೆಗೆ ಬಳಸಿದ್ದ ಜಲ್ಲಿಗಳು ಮೇಲೆದಿರುವುದರಿಂದ ಓಡಾಡುವುದು ಅಸಾಧ್ಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮಳೆಯಿಂದಾಗಿ ರಸ್ತೆಯೆಲ್ಲ ಕೆಸರಿನಂತಾಗಿದೆ. ಬೈಪಾಸ್‌ ರಸ್ತೆ ಬಳಿ 30 ಅಡಿ ಪೈಪ್‌ ಅಳವಡಿಕೆ ಕಾರ್ಯ ಬಾಕಿ ಇದ್ದು, ಗುಂಡಿ ತೆಗೆದು ವಾರ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಪೈಪ್‌ ಅಳವಡಿಸುವ ಕಾಮಗಾರಿ ಮುಗಿದಿದ್ದರೂ ಗುಂಡಿಯನ್ನು ಸಮತಟ್ಟು ಮಾಡಿ ಡಾಂಬಾರ್‌ ಹಾಕುವ ಕೆಲಸ ವಿಳಂಬಗೊಂಡಿದೆ. ತಕ್ಷಣ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

----
ಹೊಸಸಿದ್ದಾಪುರದಲ್ಲಿ ಉತ್ತಮವಾದ ಡಾಂಬಾರ್‌ ರಸ್ತೆಯನ್ನು ಅಗೆದು ಪೈಪ್‌ಲೈನ್‌ ಹಾಕಲಾಗಿದೆ. ಕಾಮಗಾರಿ ಶುರುವಾಗಿ ಮೂರು ತಿಂಗಳಾದರೂ ಪೂರ್ಣಗೊಳಿಸಿಲ್ಲ. ಗುಂಡಿಯನ್ನು ಸಹ ಮುಚ್ಚಿಲ್ಲ. ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.

-ರವಿ, ಗ್ರಾಮಸ್ಥ.
-----
ಕಾಮಗಾರಿ ವಿಳಂಬಕ್ಕೆ ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲಾಗುವುದು.

-ಮನೋಹರ್‌, ಪೌರಾಯುಕ್ತ, ಭದ್ರಾವತಿ ನಗರಸಭೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ