ಆ್ಯಪ್ನಗರ

ಆಗುಂಬೆ ಗೇಟ್‌ನಿಂದ ಹೆಬ್ರಿವರೆಗೆ ಡಾಂಬರೀಕರಣ: 10 ದಿನ ಆಗುಂಬೆ ಘಾಟಿ ರಸ್ತೆ ಬಂದ್‌..?

ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಡಳಿತಗಳು ಇನ್ನೂ ನಿರ್ಧರಿಸಿಲ್ಲ. ಆಗುಂಬೆ ಗೇಟ್‌ನಿಂದ ಹೆಬ್ರಿವರೆಗೆ ಸುಮಾರು 20 ಕಿ. ಮೀ. ದೂರ ಅನುಷ್ಠಾನವಾಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ 5.25 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಗುತ್ತಿಗೆ ಅಂತಿಮಗೊಂಡಿದ್ದು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಅಧಿಸೂಚನೆ ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ. ಮಾರ್ಚ್ 4 ರಿಂದ 10 ದಿನ ವಾಹನ ಸಂಚಾರ ನಿಲುಗಡೆ ಸಾಧ್ಯತೆ ಇದೆ.

Edited byದಿಲೀಪ್ ಡಿ. ಆರ್. | Vijaya Karnataka 27 Feb 2022, 12:53 pm

ಹೈಲೈಟ್ಸ್‌:

  • ಬಹಳಷ್ಟು ವರ್ಷಗಳಿಂದ ಶಿಥಿಲಾವಸ್ಥೆ ತಲುಪಿರುವ ಆಗುಂಬೆ ಘಾಟಿ
  • ಮಾರ್ಗದ ದುರಸ್ತಿಗೆ ಸರಕಾರ ಕೋಟ್ಯಂತರ ರೂ. ವೆಚ್ಚ ಮಾಡಿದೆ
  • ಸುಮಾರು ಎರಡು ದಶಕಗಳಿಂದ ಘಾಟಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web agumbe ghat
ಆಗುಂಬೆ ಗೇಟ್‌ನಿಂದ ಹೆಬ್ರಿವರೆಗೆ ಡಾಂಬರೀಕರಣ: 10 ದಿನ ಆಗುಂಬೆ ಘಾಟಿ ರಸ್ತೆ ಬಂದ್‌..?
ತೀರ್ಥಹಳ್ಳಿ (ಶಿವಮೊಗ್ಗ): ಕರಾವಳಿ, ಮಲೆನಾಡು ಜಿಲ್ಲೆಗಳನ್ನು ಅತಿ ಹತ್ತಿರದಲ್ಲಿ ಸಂಪರ್ಕಿಸುವ ಆಗುಂಬೆ ಘಾಟಿ ಮಾರ್ಗದಲ್ಲಿ ಮಾರ್ಚ್ 4 ರಿಂದ 10 ದಿನ ವಾಹನ ಸಂಚಾರ ನಿಲುಗಡೆ ಸಾಧ್ಯತೆ ಇದೆ.
ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಡಳಿತಗಳು ಇನ್ನೂ ನಿರ್ಧರಿಸಿಲ್ಲ. ಆಗುಂಬೆ ಗೇಟ್‌ನಿಂದ ಹೆಬ್ರಿವರೆಗೆ ಸುಮಾರು 20 ಕಿ. ಮೀ. ದೂರ ಅನುಷ್ಠಾನವಾಗುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ 5.25 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಗುತ್ತಿಗೆ ಅಂತಿಮಗೊಂಡಿದ್ದು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಅಧಿಸೂಚನೆ ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ.

ಆಗುಂಬೆ ಘಾಟಿ ವಾಹನ ಸಂಚಾರ ನಿಷೇಧ ಸದ್ಯಕ್ಕಿಲ್ಲ
ಆಗುಂಬೆ ಘಾಟಿಯ ತಪಾಸಣಾ ಕೇಂದ್ರದಿಂದ (ಗೇಟ್‌) ಹೆಬ್ರಿವರೆಗೆ ಡಾಂಬರೀಕರಣ ಕಾಮಗಾರಿ ಅನುಷ್ಠಾನದ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ಉಪ ವಿಭಾಗ ಶಿವಮೊಗ್ಗ, ಉಡುಪಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದೆ. ಕಾಮಗಾರಿ ಅನುಷ್ಠಾನ 10 ದಿನದಲ್ಲಿ ಮುಕ್ತಾಯವಾಗದಿದ್ದರೆ ವಾಹನ ಸಂಚಾರ ನಿರ್ಬಂಧ ಅವಧಿ ಮುಂದುವರಿಯುವ ಸಾಧ್ಯತೆ ಇದೆ. ಬೇಸಿಗೆ ಅವಧಿಯಲ್ಲೇ ಡಾಂಬರೀಕರಣ ಕಾಮಗಾರಿ ಆರಂಭಿಸುವ ಉದ್ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ತ್ವರಿತಗತಿಯಲ್ಲಿ ಆಡಳಿತಾತ್ಮಕ ಕ್ರಮಕ್ಕೆ ಮುಂದಾಗಿದೆ.

ಮಾ. 1ರಿಂದ 31ರವರೆಗೆ ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ
ಪದೇ ಪದೇ ನಿರ್ಬಂಧ

ಬಹಳಷ್ಟು ವರ್ಷಗಳಿಂದ ಶಿಥಿಲಾವಸ್ಥೆ ತಲುಪಿರುವ ಆಗುಂಬೆ ಘಾಟಿ ಮಾರ್ಗದ ದುರಸ್ತಿಗೆ ಸರಕಾರ ಕೋಟ್ಯಂತರ ರೂ. ವೆಚ್ಚ ಮಾಡಿದೆ. ಸುಮಾರು ಎರಡು ದಶಕಗಳಿಂದ ಘಾಟಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಈವರೆಗೂ ಪೂರ್ಣ ಕಾಮಗಾರಿ ಅನುಷ್ಠಾನವಾಗಿಲ್ಲ. 2012ರಿಂದ ಆಗುಂಬೆಯಿಂದ ಹೆಬ್ರಿವರೆಗಿನ ರಸ್ತೆ ಪ್ರದೇಶ ಸೋಮೇಶ್ವರ ವನ್ಯ ಜೀವಿ ಅಭಯಾರಣ್ಯ ವ್ಯಾಪ್ತಿಗೆ ಸೇರಿಕೊಂಡಿದೆ.

ಈ ರಸ್ತೆ ಮಾರ್ಗದಲ್ಲಿ ಆಧುನಿಕ ಯಂತ್ರ ಬಳಸಿ ವಿಸ್ತರಣೆ ಕಾಮಗಾರಿಗೆ ಅವಕಾಶ ದೊರೆಯುತ್ತಿಲ್ಲ. ವನ್ಯ ಜೀವಿ ಅಭಯಾರಣ್ಯ ಕಾಯಿದೆ ನಿಯಮಗಳು ಬಹಳ ಕಠಿಣವಾದ ಹಿನ್ನೆಲೆಯಲ್ಲಿ ರಸ್ತೆ ಮಾತ್ರ ಅಭಿವೃದ್ಧಿಪಡಿಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಮೂರು ವರ್ಷದಿಂದ ಆಗುಂಬೆ ಘಾಟಿ ರಸ್ತೆ ದುರಸ್ತಿ ಕಾಮಗಾರಿ ಅನುಷ್ಠಾನವಾಗುತ್ತಿದ್ದು, ಪದೇ ಪದೇ ವಾಹನ ಸಂಚಾರ ನಿರ್ಬಂಧಿಸಲಾಗುತ್ತಿದೆ. ಆಗುಂಬೆ ಘಾಟಿ ಮಾರ್ಗದಲ್ಲಿ ಶಿಥಿಲಗೊಂಡ ಪ್ರಮುಖ ಸ್ಥಳಗಳ ದುರಸ್ತಿಗೆ 2019ರಲ್ಲಿ ಸುಮಾರು 1 ತಿಂಗಳು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

'ಘಾಟಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧದಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗಲಿದೆ. ಸ್ಥಳೀಯ ಪ್ರಯಾಣಿಕರ, ರೋಗಿಗಳ ಅನುಕೂಲಕ್ಕಾಗಿ ತೀರ್ಥಹಳ್ಳಿ - ಆಗುಂಬೆ ಸಂಪರ್ಕಕ್ಕೆ ಜಿಲ್ಲಾಡಳಿತ ವಿಶೇಷ ಬಸ್‌ ಸೌಕರ‍್ಯ ಒದಗಿಸಬೇಕು' ಎಂದು ಆಗುಂಬೆ ಗ್ರಾ. ಪಂ. ಮಾಜಿ ಅಧ್ಯಕ್ಷೆ ವೀಣಾ ಗಿರೀಶ್‌ ಆಗ್ರಹಿಸಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ