ಆನಂದಪುರಂ: ಈ ರಸ್ತೇಲಿ ಸಲೀಸಾಗಿ ವಾಹನ ಚಲಾಯಿಸಲು ಸಾಧ್ಯವಿಲ್ಲ. ಹತ್ತಾರು ವರ್ಷಗಳಿಂದ ದುರಸ್ತಿಯನ್ನೇ ಕಂಡಿಲ್ಲ. ಅಲ್ಲದೇ ಸರಕು ಸಾಗಣೆ ಇತ್ಯಾದಿ ಸಾಗಿಸಲು ರೈತರು ಗೋಳಾಡುವಂತಾಗಿದೆ. ಒಂಥರಾ ಗೋಳಾಟ ಮಾಡಿಕೊಂಡು ಹೆಜ್ಜೆ ಇಡಬೇಕಾದ ರಸ್ತೆ ಇದು. ಯಡೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಅಡೂರು-ಇರುವಕ್ಕಿ ಗ್ರಾಮ ಸಂಪರ್ಕ ರಸ್ತೆಯೇ ಅಂತಹ ಸ್ಥಿತಿಯಲ್ಲಿರುವುದು.
ಜನ ಈಗಲೂ 'ಅಡೂರು-ಇರುವಕ್ಕಿ ' ಗ್ರಾಮ ಸಂಪರ್ಕ ರಸ್ತೆ ಎಂದರೆ ಕಕ್ಕಾಬಿಕ್ಕಿಯಾಗುತ್ತಾರೆ. ಪ್ರಯಾಣ ಸಾಹಸ ಮತ್ತು ಆಯಾಸ ಎಂದೇ ನಿಟ್ಟುಸಿರುಬಿಡುತ್ತಾರೆ.
ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಈ ರಸ್ತೆ ದುರಸ್ತಿಗೆ ಯಾರೂ ಮುಂದಾಗಿಲ್ಲ. 28-30 ವರ್ಷಗಳ ಹಿಂದೆ ಜಲ್ಲೀಕರಣಗೊಂಡಿತ್ತು. ಈಗ ಸಂಪೂರ್ಣ ಹಾಳಾಗಿದೆ.
ಯಡೇಹಳ್ಳಿ ವೃತ್ತದಿಂದ ಹೊಸನಗರ ಸಂಪರ್ಕ ರಸ್ತೆಯಲ್ಲಿ ಇರುವಕ್ಕಿ ಗ್ರಾಮದಿಂದ ಈ ರಸ್ತೆ ಇದೆ. ಆನಂದಪುರಂ-ಹೆಬ್ಬೈಲು ಸಂಪರ್ಕ ರಸ್ತೆಯಲ್ಲಿ ಅಡೂರು ಗ್ರಾಮದಲ್ಲಿ ಇರುವಕ್ಕಿಯಿಂದ ಈ ರಸ್ತೆ ಸೇರುತ್ತದೆ. ಸುಮಾರು 3ಕಿ.ಮೀ ಉದ್ದದ ರಸ್ತೆ ಇದಾಗಿದ್ದು ಅಭಿವೃದ್ಧಿಗಾಗಿ ಕಾದು ಕುಳಿತಿದೆ.
ಅತಿ ಮಹತ್ವದ ರಸ್ತೆ: ಇರುವಕ್ಕಿಯಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಹೊಸ ಆವರಣ ನಿರ್ಮಾಣವಾಗುತ್ತಿರುವುದು ಭವಿಷ್ಯದ ದಿನಗಳಲ್ಲಿ ಉನ್ನತ ಶಿಕ್ಷ ಣ ಕೇಂದ್ರ ತಲೆಯೆತ್ತಲಿದೆ. ಸಾಗರ-ಹೊಸನಗರ ಮುಖ್ಯ ರಸ್ತೆಯಲ್ಲಿ ಹೆಬ್ಬೈಲಿನಿಂದ ಆನಂದಪುರಂ ಸಂಪರ್ಕ ರಸ್ತೆ ಅಡೂರು ಮೂಲಕ ಸಾಗುತ್ತದೆ. ಇದರಿಂದಾಗಿ ಹೆಗ್ಗೋಡು,
ಆವಿನಳ್ಳಿ, ಗೆಣಸಿನಕುಣಿ, ಪುರಪ್ಪೆಮನೆ ಇತ್ಯಾದಿ ಗ್ರಾಮಗಳ ಜನರಿಗೆ ಇರುವಕ್ಕಿ ವಿವಿ ಆವರಣ ಸಂಪರ್ಕಿಸಲು ಈ ರಸ್ತೆ ಅತಿ ಮಹತ್ವದ ರಸ್ತೆಯಾಗಿದೆ.
ಶುಭ ಕಾರ್ಯಕ್ಕೂ ಬಸ್ ಊರಿಗೆ ಬರಲಾಗೋಲ್ಲ: ಇರುವಕ್ಕಿ ಮತ್ತು ಅಡೂರು ಗ್ರಾಮಗಳಲ್ಲಿ ಶರಾವತಿ ಯೋಜನಾ ಪ್ರದೇಶಗಳಿಂದ ನಿರಾಶ್ರಿತರಾಗಿ ಬಂದ ಕುಟುಂಬಗಳೇ ಅಧಿಕವಾಗಿವೆ. ಅಲ್ಲದೇ ಅತ್ಯಂತ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳು ಇಲ್ಲಿ ನೆಲೆಸಿವೆ. ನಿತ್ಯ ತಮ್ಮ ಕೃಷಿ ಸಂಬಂಧಿ ಸರಕು ಸಾಗಣೆ ಇತ್ಯಾದಿ, ವಾಹನ ಸಂಚಾರಕ್ಕೆ ಈ ರಸ್ತೆ ದುರಸ್ತಿಗೊಳ್ಳಬೇಕಾಗಿದೆ.
ರಸ್ತೆ ಜಲ್ಲಿ ಸರಿಪಡಿಸಿ, ಡಾಂಬರೀಕರಣಗೊಳಿಸಿದರೆ ಗ್ರಾಮೀಣರಿಗೆ ಮೂಲ ಸೌಕರ್ಯ ನೀಡಿದಂತಾಗುತ್ತದೆ. ಆನಂದಪುರಂ-ಹೆಬ್ಬೈಲು ಸಂಪರ್ಕ ರಸ್ತೆಯಲ್ಲಿ ಎಪಿಎಂಸಿ ಯಾರ್ಡ್ ಬಳಿ ರೈಲ್ವೆ ಅಂಡರ್ ಬ್ರಿಡ್ಜ್ ಇರುವ ಕಾರಣ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಾಗಲು ಸಾಧ್ಯವಿಲ್ಲ. ಕೊಳವೆಬಾವಿ ತೆಗೆಯುವ ಲಾರಿ, ಹೆಚ್ಚು ಸರಕು ಸಾಗಿಸಬಲ್ಲ ದೊಡ್ಡ ಲಾರಿ, ಮದುವೆ ಇತರ ಶುಭ ಕಾರ್ಯ ಸಂದರ್ಭ ಬಸ್ ಇತ್ಯಾದಿ ವಾಹನವನ್ನು ಊರಿಗೆ ತರಲು ಸಾಧ್ಯವಾಗುತ್ತಿಲ್ಲ. ಇರುವಕ್ಕಿ ಮೂಲಕ ಅಡೂರು ರಸ್ತೆಯಲ್ಲಿ ಇಂತಹ ವಾಹನ ಬರಬೇಕಾಗುತ್ತದೆ. ಆದ್ದರಿಂದ ಈ ರಸ್ತೆ ಅಭಿವೃದ್ಧಿ ಅಗತ್ಯವಿದೆ.
ಜನಪ್ರತಿನಿಧಿಗಳು ಗಮನಹರಿಸಲಿ
ಇರುವಕ್ಕಿ-ಅಡೂರು ಸಂಪರ್ಕ ರಸ್ತೆ ಅತ್ಯಂತ ಶಿಥಿಲವಾಗಿದೆ. ದ್ವಿಚಕ್ರ ವಾಹನ ಚಲಾಯಿಸುವುದೂ ಕಷ್ಟಕರವಾಗಿದೆ. ಚುನಾವಣಾ ಸಂದರ್ಭ ಈ ರಸ್ತೆ ಅಭಿವೃದ್ಧಿ ಬಗ್ಗೆ ಭರವಸೆ ಕೊಡುವ ವ್ಯಕ್ತಿಗಳು ಆ ನಂತರ ಇಲ್ಲಿನ ಸಮಸ್ಯೆ ಮರೆಯುತ್ತಿದ್ದಾರೆ. ಆದ್ಯತೆಯ ಕಾಮಗಾರಿಯಾಗಿ ಈ ಭಾಗದ ಜನಪ್ರತಿನಿಧಿಗಳು ಈ ರಸ್ತೆ ಅಭಿವೃದ್ಧಿ ಪಡಿಸುವ ಅಗತ್ಯವಿದೆ.
-ಎ.ಬಿ.ರಾಜೀವ, ಅಡೂರು
---------------
ವಿಶೇಷ ಅನುದಾನ ಭರವಸೆ :
ಇರುವಕ್ಕಿ-ಅಡೂರು ಸಂಪರ್ಕ ರಸ್ತೆ ಸಮಸ್ಯೆ ಬಗ್ಗೆ ಜಿ.ಪಂ. ಸದಸ್ಯರು ಮತ್ತು ಶಾಸಕರಿಗೆ ವಿಶೇಷ ಮನವಿ ಸಲ್ಲಿಸಲಾಗಿದೆ. ಶೀಘ್ರ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ವಿಶೇಷ ಅನುದಾನ ಕೊಡಿಸುವ ಭರವಸೆ ದೊರೆತಿದೆ.
- ತೌಫಿಕ್ ಅಲಿ, ಯಡೇಹಳ್ಳಿ ಗ್ರಾ.ಪಂ.ಸದಸ್ಯರು
ಜನ ಈಗಲೂ 'ಅಡೂರು-ಇರುವಕ್ಕಿ ' ಗ್ರಾಮ ಸಂಪರ್ಕ ರಸ್ತೆ ಎಂದರೆ ಕಕ್ಕಾಬಿಕ್ಕಿಯಾಗುತ್ತಾರೆ. ಪ್ರಯಾಣ ಸಾಹಸ ಮತ್ತು ಆಯಾಸ ಎಂದೇ ನಿಟ್ಟುಸಿರುಬಿಡುತ್ತಾರೆ.
ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಈ ರಸ್ತೆ ದುರಸ್ತಿಗೆ ಯಾರೂ ಮುಂದಾಗಿಲ್ಲ. 28-30 ವರ್ಷಗಳ ಹಿಂದೆ ಜಲ್ಲೀಕರಣಗೊಂಡಿತ್ತು. ಈಗ ಸಂಪೂರ್ಣ ಹಾಳಾಗಿದೆ.
ಯಡೇಹಳ್ಳಿ ವೃತ್ತದಿಂದ ಹೊಸನಗರ ಸಂಪರ್ಕ ರಸ್ತೆಯಲ್ಲಿ ಇರುವಕ್ಕಿ ಗ್ರಾಮದಿಂದ ಈ ರಸ್ತೆ ಇದೆ. ಆನಂದಪುರಂ-ಹೆಬ್ಬೈಲು ಸಂಪರ್ಕ ರಸ್ತೆಯಲ್ಲಿ ಅಡೂರು ಗ್ರಾಮದಲ್ಲಿ ಇರುವಕ್ಕಿಯಿಂದ ಈ ರಸ್ತೆ ಸೇರುತ್ತದೆ. ಸುಮಾರು 3ಕಿ.ಮೀ ಉದ್ದದ ರಸ್ತೆ ಇದಾಗಿದ್ದು ಅಭಿವೃದ್ಧಿಗಾಗಿ ಕಾದು ಕುಳಿತಿದೆ.
ಅತಿ ಮಹತ್ವದ ರಸ್ತೆ: ಇರುವಕ್ಕಿಯಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಹೊಸ ಆವರಣ ನಿರ್ಮಾಣವಾಗುತ್ತಿರುವುದು ಭವಿಷ್ಯದ ದಿನಗಳಲ್ಲಿ ಉನ್ನತ ಶಿಕ್ಷ ಣ ಕೇಂದ್ರ ತಲೆಯೆತ್ತಲಿದೆ. ಸಾಗರ-ಹೊಸನಗರ ಮುಖ್ಯ ರಸ್ತೆಯಲ್ಲಿ ಹೆಬ್ಬೈಲಿನಿಂದ ಆನಂದಪುರಂ ಸಂಪರ್ಕ ರಸ್ತೆ ಅಡೂರು ಮೂಲಕ ಸಾಗುತ್ತದೆ. ಇದರಿಂದಾಗಿ ಹೆಗ್ಗೋಡು,
ಆವಿನಳ್ಳಿ, ಗೆಣಸಿನಕುಣಿ, ಪುರಪ್ಪೆಮನೆ ಇತ್ಯಾದಿ ಗ್ರಾಮಗಳ ಜನರಿಗೆ ಇರುವಕ್ಕಿ ವಿವಿ ಆವರಣ ಸಂಪರ್ಕಿಸಲು ಈ ರಸ್ತೆ ಅತಿ ಮಹತ್ವದ ರಸ್ತೆಯಾಗಿದೆ.
ಶುಭ ಕಾರ್ಯಕ್ಕೂ ಬಸ್ ಊರಿಗೆ ಬರಲಾಗೋಲ್ಲ: ಇರುವಕ್ಕಿ ಮತ್ತು ಅಡೂರು ಗ್ರಾಮಗಳಲ್ಲಿ ಶರಾವತಿ ಯೋಜನಾ ಪ್ರದೇಶಗಳಿಂದ ನಿರಾಶ್ರಿತರಾಗಿ ಬಂದ ಕುಟುಂಬಗಳೇ ಅಧಿಕವಾಗಿವೆ. ಅಲ್ಲದೇ ಅತ್ಯಂತ ಗ್ರಾಮೀಣ ಪ್ರದೇಶದ ರೈತ ಕುಟುಂಬಗಳು ಇಲ್ಲಿ ನೆಲೆಸಿವೆ. ನಿತ್ಯ ತಮ್ಮ ಕೃಷಿ ಸಂಬಂಧಿ ಸರಕು ಸಾಗಣೆ ಇತ್ಯಾದಿ, ವಾಹನ ಸಂಚಾರಕ್ಕೆ ಈ ರಸ್ತೆ ದುರಸ್ತಿಗೊಳ್ಳಬೇಕಾಗಿದೆ.
ರಸ್ತೆ ಜಲ್ಲಿ ಸರಿಪಡಿಸಿ, ಡಾಂಬರೀಕರಣಗೊಳಿಸಿದರೆ ಗ್ರಾಮೀಣರಿಗೆ ಮೂಲ ಸೌಕರ್ಯ ನೀಡಿದಂತಾಗುತ್ತದೆ. ಆನಂದಪುರಂ-ಹೆಬ್ಬೈಲು ಸಂಪರ್ಕ ರಸ್ತೆಯಲ್ಲಿ ಎಪಿಎಂಸಿ ಯಾರ್ಡ್ ಬಳಿ ರೈಲ್ವೆ ಅಂಡರ್ ಬ್ರಿಡ್ಜ್ ಇರುವ ಕಾರಣ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಾಗಲು ಸಾಧ್ಯವಿಲ್ಲ. ಕೊಳವೆಬಾವಿ ತೆಗೆಯುವ ಲಾರಿ, ಹೆಚ್ಚು ಸರಕು ಸಾಗಿಸಬಲ್ಲ ದೊಡ್ಡ ಲಾರಿ, ಮದುವೆ ಇತರ ಶುಭ ಕಾರ್ಯ ಸಂದರ್ಭ ಬಸ್ ಇತ್ಯಾದಿ ವಾಹನವನ್ನು ಊರಿಗೆ ತರಲು ಸಾಧ್ಯವಾಗುತ್ತಿಲ್ಲ. ಇರುವಕ್ಕಿ ಮೂಲಕ ಅಡೂರು ರಸ್ತೆಯಲ್ಲಿ ಇಂತಹ ವಾಹನ ಬರಬೇಕಾಗುತ್ತದೆ. ಆದ್ದರಿಂದ ಈ ರಸ್ತೆ ಅಭಿವೃದ್ಧಿ ಅಗತ್ಯವಿದೆ.
ಜನಪ್ರತಿನಿಧಿಗಳು ಗಮನಹರಿಸಲಿ
ಇರುವಕ್ಕಿ-ಅಡೂರು ಸಂಪರ್ಕ ರಸ್ತೆ ಅತ್ಯಂತ ಶಿಥಿಲವಾಗಿದೆ. ದ್ವಿಚಕ್ರ ವಾಹನ ಚಲಾಯಿಸುವುದೂ ಕಷ್ಟಕರವಾಗಿದೆ. ಚುನಾವಣಾ ಸಂದರ್ಭ ಈ ರಸ್ತೆ ಅಭಿವೃದ್ಧಿ ಬಗ್ಗೆ ಭರವಸೆ ಕೊಡುವ ವ್ಯಕ್ತಿಗಳು ಆ ನಂತರ ಇಲ್ಲಿನ ಸಮಸ್ಯೆ ಮರೆಯುತ್ತಿದ್ದಾರೆ. ಆದ್ಯತೆಯ ಕಾಮಗಾರಿಯಾಗಿ ಈ ಭಾಗದ ಜನಪ್ರತಿನಿಧಿಗಳು ಈ ರಸ್ತೆ ಅಭಿವೃದ್ಧಿ ಪಡಿಸುವ ಅಗತ್ಯವಿದೆ.
-ಎ.ಬಿ.ರಾಜೀವ, ಅಡೂರು
---------------
ವಿಶೇಷ ಅನುದಾನ ಭರವಸೆ :
ಇರುವಕ್ಕಿ-ಅಡೂರು ಸಂಪರ್ಕ ರಸ್ತೆ ಸಮಸ್ಯೆ ಬಗ್ಗೆ ಜಿ.ಪಂ. ಸದಸ್ಯರು ಮತ್ತು ಶಾಸಕರಿಗೆ ವಿಶೇಷ ಮನವಿ ಸಲ್ಲಿಸಲಾಗಿದೆ. ಶೀಘ್ರ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ವಿಶೇಷ ಅನುದಾನ ಕೊಡಿಸುವ ಭರವಸೆ ದೊರೆತಿದೆ.
- ತೌಫಿಕ್ ಅಲಿ, ಯಡೇಹಳ್ಳಿ ಗ್ರಾ.ಪಂ.ಸದಸ್ಯರು