ಆ್ಯಪ್ನಗರ

ಸೇವಾ ಮನೋಭಾವಕ್ಕೆ ರೋಟರಿ ಪ್ರೇರಣೆ

ಸೇವೆ ಎಂಬುದು ಯಾವುದೇ ಅಪೇಕ್ಷೆ ಇಲ್ಲದೆ ಅಗತ್ಯ ಇರುವ ವ್ಯಕ್ತಿಗಳಿಗೆ ಸಹಕಾರ ನೀಡುವುದಾಗಿದೆ ಎಂದು ರೋಟರಿ ಕ್ಲಬ್‌ ಶಿವಮೊಗ್ಗ ಮಿಡ್‌ ಟೌನ್‌ ಸಂಸ್ಥೆ ಅಧ್ಯಕ್ಷ ಎಚ್‌.ಎನ್‌.ಎಸ್‌.ರಾವ್‌ ಹೇಳಿದರು.

Vijaya Karnataka 5 Aug 2019, 5:00 am
ಹೊಳೆಹೊನ್ನೂರು: ಸೇವೆ ಎಂಬುದು ಯಾವುದೇ ಅಪೇಕ್ಷೆ ಇಲ್ಲದೆ ಅಗತ್ಯ ಇರುವ ವ್ಯಕ್ತಿಗಳಿಗೆ ಸಹಕಾರ ನೀಡುವುದಾಗಿದೆ ಎಂದು ರೋಟರಿ ಕ್ಲಬ್‌ ಶಿವಮೊಗ್ಗ ಮಿಡ್‌ ಟೌನ್‌ ಸಂಸ್ಥೆ ಅಧ್ಯಕ್ಷ ಎಚ್‌.ಎನ್‌.ಎಸ್‌.ರಾವ್‌ ಹೇಳಿದರು.
Vijaya Karnataka Web SMR-4HHR1


ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಇಂಟರಾಕ್ಟ್ ಕ್ಲಬ್‌ ಪದಾಧಿಕಾರಿಗಳ ಪದಗ್ರಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸೇವೆ ಮಾಡುವ ಹಾಗೂ ಪಡೆದುಕೊಳ್ಳುವ ಅನೇಕರು ಇದ್ದಾರೆ. ಆದರೆ ಇದು ಸಾಕಾರ ಆಗಬೇಕಾದರೆ ಒಂದು ಸಂಸ್ಥೆ ಅಗತ್ಯ ಇರುತ್ತದೆ. ಇಂತಹ ಅನೇಕ ಸೇವಾ ಸಂಸ್ಥೆಗಳಲ್ಲಿ ರೋಟರಿ ಸಂಸ್ಥೆ ವಿಶ್ವದಲ್ಲೇ ಅತ್ಯಂತ ದೊಡ್ಡದು. ಈ ಸಂಸ್ಥೆಯಲ್ಲಿರುವ ಸೇವಾ ಮನೋಭಾವದ ವ್ಯಕ್ತಿಗಳು ಸಮಾಜಕ್ಕೆ ಬೇಕಾದ ಸೇವೆ ನೀಡುವ ಜತೆಗೆ ಪ್ರಗತಿಗೆ ಕೈಜೋಡಿಸುತ್ತಾರೆ ಎಂದರು.

ರೋಟರಿ ಕ್ಲಬ್‌ ಯೂತ್‌ ಸವೀರ್‍ಸ್‌ ನ್ಯೂ ಜನರೇಷನ್‌ ನಿರ್ದೇಶಕಿ ವೀಣಾ ಸುರೇಶ್‌ ಮಾತನಾಡಿ, ರೋಟರಿ ಸೇವಾ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸೇವಾ ಮನೋಭಾವ, ನಾಯಕತ್ವ ಗುಣ ಬೆಳೆದು ವ್ಯಕ್ತಿತ್ವ ವಿಕಸನ ಆಗುತ್ತದೆ. ಸಮಾಜದಲ್ಲಿ ಅನೇಕ ಬದಲಾವಣೆ ಆಗಲು ಜನರಿಗೆ ಸೇವೆ ಹಾಗೂ ಅರಿವು ಮೂಡಿಸಬೇಕು. ಈ ದಿಸೆಯಲ್ಲಿ ಶಾಲೆಗಳಲ್ಲಿ ಇಂಟರಾಕ್ಟ್ ಕ್ಲಬ್‌ ಸ್ಥಾಪನೆ ಮಾಡಲಾಗುತ್ತದೆ ಎಂದರು. ಹಿರಿಯ ವಿದ್ಯಾರ್ಥಿ ಎಚ್‌.ಜಿ.ವಿಜಯರಾಜ್‌ ಮಾತನಾಡಿದರು. ಮಂಜಪ್ಪ ಅರಕೆರೆ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಾಗೂ ಜವಾಬ್ದಾರಿ ನೀಡಿದರು. ಹಿರಿಯ ಶಿಕ್ಷ ಕ ಕೆ.ಎಲ್‌.ಗಜೇಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಆರ್‌.ಸುರೇಶ್‌, ಸದಸ್ಯೆ ವೀಣಾ ನಾಡಿಗ್‌, ಪಿ.ಅಮಿತಾ, ಸುಧಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್‌ನಿಂದ ಪುರಸ್ಕರಿಸಲಾಯಿತು. ಸಹಶಿಕ್ಷ ಕಿ ಭಾರತಿ ಕೇಶವಭಟ್‌ ಪ್ರಾರ್ಥಿಸಿ, ಇಂಟರಾಕ್ಟ್ ಕ್ಲಬ್‌ ಸಂಯೋಜಕ ಬಿ.ಪಿ.ನಾಗರಾಜಪ್ಪ ಸ್ವಾಗತಿಸಿದರು. ವಿದ್ಯಾರ್ಥಿನಿ ಜಿ.ಮಮತಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ