ಆ್ಯಪ್ನಗರ

ರೌಡಿಶೀಟರ್‌ ಮಾರ್ಕೆಟ್‌ ಗೋವಿಂದ್‌ ಹತ್ಯೆ

ಮೂರು ಕೊಲೆ ಪ್ರಕರಣ ಸಂಬಂಧ ಕೋಕಾ ಕಾಯಿದೆಯಡಿ ಆರೋಪಿಯಾಗಿದ್ದ ರೌಡಿಶೀಟರ್‌ನನ್ನು ಭೀಕರವಾಗಿ ಹತ್ಯೆಗೈದು ನಗರದ ಸಾವರ್‌ಲೇನ್‌ ರಸ್ತೆಯಲ್ಲಿರುವ ಗೌರವ್‌ ಲಾಡ್ಜ್‌ ಸಮೀಪದ ಮನೆಯ ಬಾಗಿಲಲ್ಲಿ ಶವ ತಂದು ಬಿಸಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಮೂಲಕ, ಕೆಲ ತಿಂಗಳ ಹಿಂದಷ್ಟೇ ನಡೆದಿದ್ದ ಮಾರ್ಕೆಟ್‌ ಗಿರಿ ಹತ್ಯೆಯ ಸೇಡಿನ ಕಿಚ್ಚು ಮತ್ತೆ ಹತ್ತಿಕೊಂಡಂತಾಗಿದೆ.

Vijaya Karnataka 31 Jan 2019, 5:00 am
ಶಿವಮೊಗ್ಗ : ಮೂರು ಕೊಲೆ ಪ್ರಕರಣ ಸಂಬಂಧ ಕೋಕಾ ಕಾಯಿದೆಯಡಿ ಆರೋಪಿಯಾಗಿದ್ದ ರೌಡಿಶೀಟರ್‌ನನ್ನು ಭೀಕರವಾಗಿ ಹತ್ಯೆಗೈದು ನಗರದ ಸಾವರ್‌ಲೇನ್‌ ರಸ್ತೆಯಲ್ಲಿರುವ ಗೌರವ್‌ ಲಾಡ್ಜ್‌ ಸಮೀಪದ ಮನೆಯ ಬಾಗಿಲಲ್ಲಿ ಶವ ತಂದು ಬಿಸಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಮೂಲಕ, ಕೆಲ ತಿಂಗಳ ಹಿಂದಷ್ಟೇ ನಡೆದಿದ್ದ ಮಾರ್ಕೆಟ್‌ ಗಿರಿ ಹತ್ಯೆಯ ಸೇಡಿನ ಕಿಚ್ಚು ಮತ್ತೆ ಹತ್ತಿಕೊಂಡಂತಾಗಿದೆ.
Vijaya Karnataka Web rowdyshitter market govinds murder
ರೌಡಿಶೀಟರ್‌ ಮಾರ್ಕೆಟ್‌ ಗೋವಿಂದ್‌ ಹತ್ಯೆ


ರೌಡಿಶೀಟರ್‌ ಮಾರ್ಕೆಟ್‌ ಲೋಕಿ ಅಣ್ಣ ಮಾರ್ಕೆಟ್‌ ಗೋವಿಂದ್‌(45) ಎಂಬಾತನೇ ಹತ್ಯೆಯಾದವ. ಶವದ ಸ್ಥಿತಿ ನೋಡಿದರೆ ಬೇರೆಲ್ಲೋ ಮಾರಕಾಸ್ತ್ರಗಳಿಂದ ಕೊಚ್ಚಿ ಸತ್ತ ಬಳಿಕ ಸಾವರ್‌ ಲೇನ್‌ ರಸ್ತೆಯ ಆತನ ಮನೆಯ ಬಳಿ ದೇಹ ತಂದಿಡಲಾಗಿದೆ ಎನ್ನುತ್ತವೆ ಪೊಲೀಸ್‌ ಮೂಲಗಳು. ಹತ್ಯೆಯ ಹಿಂದೆ ಯಾರ ಕೈವಾಡ ಇದೆ ಎಂದು ಇದೂವರೆಗೆ ತಿಳಿದುಬಂದಿಲ್ಲ. ಆದರೆ, ಖರಾಬ್‌ ಶಿವು ಗ್ಯಾಂಗ್‌ ಕೊಲೆ ಮಾಡಿರುವುದಾಗಿ ಗೋವಿಂದನ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೇ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಪ್ರಯತ್ನಿಸಿದರು. ಕಳೆದ ಸೆಪ್ಟೆಂಬರ್‌ 11ರಂದು ಮಾರ್ಕೆಟ್‌ ಗಿರಿ ಹತ್ಯೆ ನಂತರ ಮಾರ್ಕೆಟ್‌ ಲೋಕಿ ಹಾಗೂ ಗೋವಿಂದ್‌ ತಲೆಮರೆಸಿಕೊಂಡಿದ್ದರು. ಕೊಲೆ ಪ್ರಕರಣ ಸಂಬಂಧ ಈತ ಪೊಲೀಸರ ಹಿಟ್‌ಲಿಸ್ಟ್‌ನಲ್ಲಿದ್ದ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ