ಆ್ಯಪ್ನಗರ

‘ಗ್ರಾಮೀಣ ಮಕ್ಕಳು ಕೀಳರಿಮೆ ಬಿಡಲಿ’

ಗ್ರಾಮೀಣ ಮಕ್ಕಳು ಮನಸ್ಸಿನಲ್ಲಿರುವ ಹಲವು ತಪ್ಪು ಕಲ್ಪನೆಗಳಿಂದ ಹೊರಬರಬೇಕೆಂದು ಬೆಂಗಳೂರಿನ ಪ್ರತಿಷ್ಠಿತ ಕಾರ್ಮೆಲ್‌ ಶಾಲೆ ಪ್ರಾಚಾರ್ಯ ಜಿ.ವಿ.ಗಣಪತಿರಾವ್‌ ಹೇಳಿದರು.

Vijaya Karnataka 18 Jun 2019, 5:00 am
ಸಾಗರ: ಗ್ರಾಮೀಣ ಮಕ್ಕಳು ಮನಸ್ಸಿನಲ್ಲಿರುವ ಹಲವು ತಪ್ಪು ಕಲ್ಪನೆಗಳಿಂದ ಹೊರಬರಬೇಕೆಂದು ಬೆಂಗಳೂರಿನ ಪ್ರತಿಷ್ಠಿತ ಕಾರ್ಮೆಲ್‌ ಶಾಲೆ ಪ್ರಾಚಾರ್ಯ ಜಿ.ವಿ.ಗಣಪತಿರಾವ್‌ ಹೇಳಿದರು.
Vijaya Karnataka Web SMR-16sgr10


ತಾಲೂಕಿನ ಎಡಜಿಗಳೇಮನೆ ಶಾರದಾಪುರದ ಇಕ್ಕೇರಿ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಪುರಸ್ಕೃತ ವಿದ್ಯಾರ್ಥಿಗಳಿಗೆ ವಿವಿಧ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.

ಕನ್ನಡ ಮಾಧ್ಯಮ, ಹಳ್ಳಿ ಶಾಲೆ, ಇಂಗ್ಲೀಷ್‌ನಲ್ಲಿ ಮಾತನಾಡಲು ಬರುವುದಿಲ್ಲ ಇತ್ಯಾದಿ ಮಿತಿಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಹಾಕಿಕೊಳ್ಳಬಾರದು. ಓದುವ ವಿದ್ಯಾರ್ಥಿಗೆ ಈ ಯಾವ ಸಂಗತಿಗಳೂ ದೊಡ್ಡ ಪ್ರಮಾಣದಲ್ಲಿ ತೊಡಕಾಗುವುದಿಲ್ಲ. ಆದರೆ ಅಂತಹ ಭ್ರಮೆ ತುಂಬುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಕೀಳರಿಮೆ ತರುವ ಪ್ರಯತ್ನ ನಡೆಯುತ್ತಿರುತ್ತದೆ. ಗ್ರಾಮಾಂತರ ಶಿಕ್ಷ ಣ ಸಂಸ್ಥೆಗಳು ಅಂಥ ತಪ್ಪು ಕಲ್ಪನೆ ದೂರಮಾಡಬೇಕೆಂದರು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಿವಮೊಗ್ಗದ ವಿಶೇಷ ಭೂ ಸ್ವಾಧೀನ ಅಧಿಕಾರಿ ಗಣಪತಿ ಕಟ್ಟಿನಕೆರೆ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಇತರ ತರಗತಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು. ಇಕ್ಕೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಜಿ.ವಿ.ಅನಂತ ಅಧ್ಯಕ್ಷ ತೆ ವಹಿಸಿದ್ದರು. ಇಕ್ಕೇರಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಶ್ರೀನಿವಾಸ್‌ ಶೇರಿಗಾರ್‌, ಎಡಜಿಗಳೇಮನೆ ಗ್ರಾಪಂ ಅಧ್ಯಕ್ಷ ಎಂ.ಡಿ. ರಾಮಚಂದ್ರ, ಉಪಾಧ್ಯಕ್ಷೆ ಸುಭದ್ರಾ ಗಣಪತಿ, ಮುಖ್ಯ ಶಿಕ್ಷ ಕ ಸಿ.ರಜನೀಶ್‌, ಜಿ.ಡಿ.ರಾಮಚಂದ್ರ, ಜಿ.ಎಸ್‌.ವೆಂಕಟೇಶ್‌ ಇತರರು ಇದ್ದರು. ಮಾನಸ ಪ್ರಾರ್ಥಿಸಿ, ಇಕ್ಕೇರಿ ವಿದ್ಯಾಸಂಸ್ಥೆ ಪ್ರಧಾನ ಕಾರ‍್ಯದರ್ಶಿ ಎಸ್‌.ಟಿ. ರತ್ನಾಕರ್‌ ಸ್ವಾಗತಿಸಿದರು. ರಾಮಚಂದ್ರ ಹೆಗಡೆ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಉಮೇಶ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ