ಆ್ಯಪ್ನಗರ

ಪಡಿತರ ಪಡೆಯಲು ಗ್ರಾಮೀಣರು ತತ್ತರ

ಸರಕಾರದ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಅಂತರ್‌ಜಾಲದ ಅವಲಂಬನೆ ಕಾರಣದಿಂದ ಗ್ರಾಮೀಣರ ಪರದಾಟ 'ಅಯ್ಯೋ' ಎನ್ನುವಂತಾಗಿದೆ. ಯಾರಿಗೆ

Vijaya Karnataka 3 Jun 2019, 5:00 am
ಸಾಗರ: ಸರಕಾರದ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಅಂತರ್‌ಜಾಲದ ಅವಲಂಬನೆ ಕಾರಣದಿಂದ ಗ್ರಾಮೀಣರ ಪರದಾಟ 'ಅಯ್ಯೋ' ಎನ್ನುವಂತಾಗಿದೆ. ಯಾರಿಗೆ
Vijaya Karnataka Web SMR-01SGR1


ಹೇಳೋದು ನಮ್ಮ ಪ್ರಾಬ್ಲಮ್‌ ಎಂದು ಅಲವತ್ತುಕೊಳ್ಳುತ್ತಿದ್ದು, ನಿಟ್ಟುಸಿರು ಬಿಡುತ್ತಿದ್ದಾರೆ.

ತಾಲೂಕಿನ ನಾಗವಳ್ಳಿ ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಸರ್ವರ್‌ ಅಡ್ಡಿಬರುತ್ತಿದೆ. ನಾಗವಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್‌ ಇಲ್ಲದೇ 3ದಿನಗಳಿಂದ ಜನರು ಕಾಯುತ್ತಿದ್ದಾರೆ.

ಚೆನಗೊಂಡ ಗ್ರಾಪಂ ವ್ಯಾಪ್ತಿ ಅರ್ಕಳ, ಮೇಘಾನೆ, ದೇವಗಾರ್‌, ಬಚ್ಚೋಡಿ, ನಾಗವಳ್ಳಿ ಭಾಗದ ಜನರು ಪಡಿತರ ಸಿಗದೇ ಶಾಪ ಹಾಕುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್‌ ಸಮಸ್ಯೆಯಿಂದಾಗಿ ಬೆರಳಚ್ಚು ನೀಡಿದರೂ ಅದು ತೆಗೆದುಕೊಳ್ಳುತ್ತಿಲ್ಲ. ಆದ್ದರಿಂದ ಮತ್ತೆ ಮತ್ತೆ ಅಲೆಯಬೇಕಾಗಿದೆ.

ಬ್ಯಾಕೋಡು ಭಾಗದಲ್ಲೂ ಸರ್ವರ್‌ ಸಮಸ್ಯೆ ಬಾಧಿಸುತ್ತಿದ್ದು, ಗ್ರಾಮೀಣರು ಪಡಿತರಕ್ಕಾಗಿ ಒದ್ದಾಡುವಂತಾಗಿದೆ. ತಹಸೀಲ್ದಾರ್‌ಗೆ ದೂರು ಸಲ್ಲಿಸಿದ ನಂತರ ಹೆಬ್ಬೆಟ್ಟು ನೀಡುವುದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆದರೆ ಪದೇ ಪದೇ ಸರ್ವರ್‌ ಸಮಸ್ಯೆ ಬಾಧಿಸುತ್ತಿದ್ದು ಕಪ್ಪದೂರು, ಸಿಗ್ಲು, ಮಣಕಂದೂರು , ಬ್ಯಾಕೋಡು ಭಾಗದ ಜನ ಪರದಾಡುತ್ತಿದ್ದಾರೆ. ಸರಕಾರ ಪಡಿತರ ನೀಡಿದರೂ ಸರ್ವರ್‌ ಸದರಿ ಸೌಲಭ್ಯ ಕೊಡುತ್ತಿಲ್ಲ ಎಂಬಂತಾಗಿದೆ.

ಗ್ರಾಮೀಣರು ಪಡಿತರ ಪಡೆಯಲು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಸರ್ವರ್‌ ಸಮಸ್ಯೆಯಿಂದಾಗಿ ಪ್ರತಿದಿನ ನ್ಯಾಯಬೆಲೆ ಅಂಗಡಿಗೆ ಓಡಾಡುವ ದುಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳು ಶೀಘ್ರ ಸ್ಪಂದಿಸಬೇಕಾಗಿದೆ.


ಈ ಭಾಗದಲ್ಲಿ ಬಹುತೇಕರು ಕೂಲಿಕಾರ್ಮಿಕರಾಗಿದ್ದು, ಪಡಿತರ ಪಡೆಯಲು ತಮ್ಮ ನಾಲ್ಕೈದು ದಿನದ ಕೂಲಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಪಂ, ತಾಪಂ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಸಲ ಅಹವಾಲು ಸಲ್ಲಿಸಿದ್ದಾರೆ. ಗ್ರಾಮೀಣರ ಸರ್ವರ್‌ ಸಂಕಟವನ್ನು ಶೀಘ್ರ ಪರಿಹರಿಸಬೇಕೆಂದು ಮಂಜು, ರಾಜೇಶ್‌, ವೆಂಕಟೇಶ, ಜಗದೀಶ ಮುಂತಾದವರು ಆಗ್ರಹಿಸಿದ್ದಾರೆ.

ಮಲೆನಾಡು ಭಾಗ ಬೆಟ್ಟಗುಡ್ಡಗಳಿಂದ ಕೂಡಿದೆ. ಕೆಲವು ಭಾಗಗಳಲ್ಲಿ ದೂರವಾಣಿ ಸಂಪರ್ಕ ಸಹ ತಲುಪಿಲ್ಲ. ಇಂತಹ ಕಡೆ ಕಂಪ್ಯೂಟರ್‌ ಇರಿಸಿಕೊಂಡು ಬೆರಳಚ್ಚು ನೀಡಿ ಪಡಿತರ ನೀಡುತ್ತೇವೆ ಎನ್ನುವ ಕಾಯ್ದೆಯೆ ಅವೈಜ್ಞಾನಿಕವಾಗಿದೆ. ಇಂತಹ ಪ್ರದೇಶಗಳಲ್ಲಿ ಅಧಿಕಾರಿಗಳು ಜನರಿಗೆ ಪೂರಕವಾದ ಮತ್ತು ಸುಲಭವಾಗಿ ಅವರು ಪಡಿತರ ಪಡೆಯುವ ನಿಯಮಾವಳಿಗಳನ್ನು ಜಾರಿಗೆ ತರಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆಸುವ ಜತೆಗೆ ರಾಜ್ಯದ ಆಹಾರ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ-
-ರಾಜಶೇಖರ ಗಾಳಿಪುರ, ಜಿಪಂ ಸದಸ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ