ಆ್ಯಪ್ನಗರ

ಶಿಕಾರಿಪುರ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಕ್ಷಿ

ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಾನಪದ ಪರಿಷತ್‌ ಜ.11ರಂದು ಪುಷ್ಪಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಸಾಕ್ಷಿ ಸಂತೋಷ್‌ ಸಕ್ರಿ ಆಯ್ಕೆಯಾಗಿದ್ದಾರೆ.

Vijaya Karnataka 10 Jan 2019, 5:00 am
ಶಿಕಾರಿಪುರ: ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಾನಪದ ಪರಿಷತ್‌ ಜ.11ರಂದು ಪುಷ್ಪಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಸಾಕ್ಷಿ ಸಂತೋಷ್‌ ಸಕ್ರಿ ಆಯ್ಕೆಯಾಗಿದ್ದಾರೆ.
Vijaya Karnataka Web SMR-8SKP3


ಪಟ್ಟಣದ ದೊಡ್ಡಪೇಟೆಯ ಪ್ರಗತಿಪರ ಕೃಷಿಕ ಸಂತೋಷ ಸಕ್ರಿ, ಶಿಲ್ಪ ದಂಪತಿ ಪುತ್ರಿ ಸಾಕ್ಷಿ, ಸರಕಾರಿ ಬಾಲಿಕಾ ಪ್ರೌಢ ಶಾಲೆ ವಿದ್ಯಾರ್ಥಿನಿ, ಬಾಲ್ಯದಿಂದಲೇ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿರುವ ಈಕೆ 2017-18ರಲ್ಲಿ ಪ್ರತಿಷ್ಠಿತ ಜಿಲ್ಲಾ ಮಟ್ಟದ ಇನ್ಸ್‌ ಫೈರ್‌ ಆವಾರ್ಡ್‌ ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ 5 ದಿನದ ಕ್ರಿಯೇಟಿವ್‌ ಡಿಸೈನ್‌ ಥಿಂಕಿಂಗ್‌ ವರ್ಕ್‌ಶಾಪ್‌ನಲ್ಲಿ ಪಾಲ್ಗೊಂಡಿದ್ದಳು.

ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವರಚಿತ ಕಥಾವಾಚನ, ಭಾಷಣಗೋಷ್ಠಿ ಅಧ್ಯಕ್ಷ ತೆ, ಜಿಲ್ಲಾ 9ನೇ ಮಕ್ಕಳ ಸಮ್ಮೇಳನದಲ್ಲಿ ಸ್ವರಚಿತ ಕಥೆ ಹನಿಗವನ ವಾಚನ, 10ನೇ ಸಮ್ಮೇಳನದಲ್ಲಿ ಸ್ವರಚಿತ ಕಥಾವಾಚನ, ಆದಿಚುಂಚನಗಿರಿ ಮಹಾಸಂಸ್ಥಾನದಲ್ಲಿ ನಡೆದ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸ್ವರಚಿತ ಕಥಾವಾಚನ ಹೀಗೆ ಸಾಹಿತ್ಯ ಆಸಕ್ತಿ ಹೊಂದಿದ್ದಾಳೆ. ಕರ್ನಾಟಕ ಸಂಗೀತ ಜ್ಯೂನಿಯರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಈಕೆ ಬಹುಮುಖ ಪ್ರತಿಭೆ.

ಅಧಿಕೃತ ಆಹ್ವಾನ :
ಮಕ್ಕಳ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಸಾಕ್ಷಿಗೆ ತಾಲೂಕು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್‌.ಹುಚ್ರಾಯಪ್ಪ, ಜನಪದ ಪರಿಷತ್‌ ವೇದಿಕೆ ಅಧ್ಯಕ್ಷ ಪಾಪಯ್ಯ, ಕಾರ‍್ಯದರ್ಶಿ ನಾಗರಾಜಾಚಾರ್‌ ಸ್ವಾಗತಿಸಿದರು. ಮುಖಂಡರಾದ ಮಲ್ಲಿಕಾರ್ಜುನ್‌, ತಿಪ್ಪೇಶ್‌, ಮಹಮದ್‌ ಹನೀಫ್‌, ಸಿದ್ಧಾರೂಢ, ಕಾಳಿಂಗರಾವ್‌, ಪಾರುಸ್ವಾಮಿ, ಸಂತೋಷ, ಶಿಲ್ಪ ಸಕ್ರಿ, ವಿಜಯಣ್ಣ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ