ಆ್ಯಪ್ನಗರ

ವಿದೇಶೀ ನೀರೆಯರ ಸೆಳೆದ ಸೀರೆ

ತಾಲೂಕಿನ ಜೋಗ ಜಲಪಾತ ಸೇರಿದಂತೆ ಭಾರತದ ಪ್ರಾಕೃತಿಕ ಸೌಂದರ‍್ರ್ಯಕ್ಕೆ ವಿದೇಶೀಯರು ಮಾರುಹೋಗುವುದು ಮಾಮೂಲು. ಜತೆಗೆ ಭಾರತೀಯ ಪದ್ಧತಿ, ಸಂಪ್ರದಾಯ, ಆಚರಣೆಗಳ ಬಗ್ಗೆ ಸಹ ವಿದೇಶೀಯರಿಗೆ ಬೆರಗುಗಣ್ಣು, ವಿಚಿತ್ರ ಸೆಳೆತ. ಕಣ್ಣರಳಿಸಿ, ಉದ್ಘಾರವಾಚಕಗಳ ಮೂಲಕ ''ಓ.., ಇಸ್‌ ಇಟ್‌ ಸೋ ನೈಸ್‌!'' ಎಂದು ಮನಸಾರೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ.

Vijaya Karnataka 9 Jan 2020, 5:00 am
ಸಾಗರ : ತಾಲೂಕಿನ ಜೋಗ ಜಲಪಾತ ಸೇರಿದಂತೆ ಭಾರತದ ಪ್ರಾಕೃತಿಕ ಸೌಂದರ‍್ರ್ಯಕ್ಕೆ ವಿದೇಶೀಯರು ಮಾರುಹೋಗುವುದು ಮಾಮೂಲು. ಜತೆಗೆ ಭಾರತೀಯ ಪದ್ಧತಿ, ಸಂಪ್ರದಾಯ, ಆಚರಣೆಗಳ ಬಗ್ಗೆ ಸಹ ವಿದೇಶೀಯರಿಗೆ ಬೆರಗುಗಣ್ಣು, ವಿಚಿತ್ರ ಸೆಳೆತ. ಕಣ್ಣರಳಿಸಿ, ಉದ್ಘಾರವಾಚಕಗಳ ಮೂಲಕ ''ಓ.., ಇಸ್‌ ಇಟ್‌ ಸೋ ನೈಸ್‌!'' ಎಂದು ಮನಸಾರೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ.
Vijaya Karnataka Web 08SGR12_46
ಸಾಗರ ತಾಲೂಕು ಕಾರ್ಗಲ್‌ನ ಮಳಿಗೆಯೊಂದರಲ್ಲಿಮಂಗಳವಾರ ರಾತ್ರಿ ರಷ್ಯಾದ ಆ್ಯಂಡ್ರ್ಯೂ, ಅವರ ಸಂಗಾತಿ ಇಲಿಯನ್‌ ಮತ್ತು ಇವಾನ್‌, ಅವರ ಸಂಗಾತಿ ಕಸೋಲ್‌ ಸಂಭ್ರಮಿಸಿದ್ದು ಹೀಗೆ.


ಭಾರತೀಯ ಪದ್ಧತಿಯ ಸೆಳೆತಕ್ಕೆ ಒಳಗಾದ ಅಂತಹದ್ದೊಂದು ಘಟನೆ ತಾಲೂಕಿನ ವಿಶ್ವ ವಿಖ್ಯಾತ ಜೋಗದ ಬಳಿ ಮಂಗಳವಾರ ನಡದಿದೆ. ಜೋಗ ವೀಕ್ಷಣೆಗೆ ಬಂದಿದ್ದ ಆ್ಯಂಡ್ರ್ಯೂ ಹಾಗೂ ಆತರ ಜತೆಗಾರ್ತಿ ಇಲಿಯನ್‌, ಇವಾನ್‌ ಹಾಗೂ ಅವರ ಜತೆಗಾರ್ತಿ ಕಸೋಲ್‌ ರಾತ್ರಿ ಕಾರ್ಗಲ್‌ ಪಟ್ಟಣ ಸುತ್ತಾಡಿದ್ದಾರೆ. ಈ ಸಂದರ್ಭ ಇಲ್ಲಿನ ಖಾಸಗಿ ಬ್ಯೂಟಿ ಪಾರ್ಲರ್‌ ಹಾಗೂ ಲೇಡಿಸ್‌ ಪ್ಯಾಶನ್‌ ಕಲೆಕ್ಷನ್‌ ಮಳಿಗೆ ಭೇಟಿ ನೀಡಿದ್ದಾರೆ. ಮಳಿಗೆಯಲ್ಲಿದ್ದ ಮಹಿಳೆಯರ ಅಲಂಕಾರಿಕ ವಸ್ತುಗಳಿಗೆ ಮಾರುಹೋದ ಕಸೋಲ್‌ ಮತ್ತು ಇಲಿಯನ್‌ ಭಾರತದ ಸಾಂಪ್ರದಾಯಿಕ ಸೀರೆಯನ್ನು ಉಟ್ಟು, ಹಣೆಗೆ ಕುಂಕುಮ, ಕಿವಿ ಓಲೆ ಮತ್ತು ಕೈ ಬಳೆ ತೊಟ್ಟು ಅಪ್ಪಟ್ಟ ಭಾರತೀಯ ನಾರಿಯರ ಗೆಟ್‌ಅಪ್‌ ಪಡೆದುಕೊಂಡಿದ್ದಾರೆ. ತಮ್ಮ ಸಂಗಾತಿಗಳ ಜತೆ ಸಂಭ್ರಮಿಸಿದ್ದಾರೆ.

ಕಸೋಲ್‌ ಮತ್ತು ಇಲಿಯನ್‌ ಇಂಡಿಯಾದ ಸೀರೆ, ಆಭರಣಗಳನ್ನು ಖರೀದಿಸಿದ್ದಾರೆ. ಪಾರ್ಲರ್‌ನ ಬ್ಯೂಟಿಷಿಯನ್‌ ಶ್ರೀದೇವಿ ರಾಧಾಕೃಷ್ಣ ಅವರ ಬಳಿ ಅಲಂಕಾರ ಮಾಡಿಸಿಕೊಂಡಿದ್ದಾರೆ. ಮಳಿಗೆಯವರ ಕುಟುಂಬದವರ ಜತೆ ಸ್ವಲ್ಪ ಹೊತ್ತು ಮಾತುಕತೆಯಲ್ಲಿಕಾಲಕಳೆದಿದ್ದಾರೆ. ನಂತರ ಕಾರ್ಗಲ್‌ ಪಟ್ಟಣದ ರಸ್ತೆಗಳಲ್ಲಿಸಹ ಸಂಚರಿಸುವಾಗ ಅನೇಕರು ಇವರ ಜತೆಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

----------
ರಷ್ಯಾದಲ್ಲಿಈ ದಿನಮಾನಗಳಲ್ಲಿಸಾಮಾನ್ಯವಾಗಿ 5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುತ್ತದೆ. ಭಾರತದಲ್ಲಿತುಂಬಾ ಬಿಸಿಲು ಇದೆ. ಇಲ್ಲಿನ ಪ್ರಕೃತಿ, ಸಂಸ್ಕೃತಿ ವಿಶೇಷವಾಗಿದೆ. ಸೀರೆಯಂತಹ ಧಿರಿಸು, ತೊಟ್ಟವರ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸುತ್ತದೆ. ಕೈ ಬಳೆ, ಕುಂಕುಮ ಇವೆಲ್ಲವೂ ಟಿಪಿಕಲ್‌ ಭಾರತೀಯತೆಯನ್ನು ಎತ್ತಿಹಿಡಿಯುತ್ತವೆ. ಧರಿಸಿದಾಗ ಸಂಭ್ರಮ ಸಂತೋಷ ಅನುಭವಿಸಿದ್ದೇವೆ.
- ಕಸೋಲ್‌ ಮತ್ತು ಇಲಿಯನ್‌, ರಷ್ಯಾ ಮಹಿಳೆಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ