ಆ್ಯಪ್ನಗರ

ಜನಪದ ಆಚರಣೆ ಉಳಿಸಿ, ಬೆಳೆಸಿ

ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಜರುಗುತ್ತಿದ್ದ ಕೋಲಾಟದಂಥ ಜನಪದ ಆಚರಣೆಗಳನ್ನು ಯುವ ಜನತೆ ಆಸಕ್ತಿಯಿಂದ ಕಲಿತು, ಬೆಳೆಸುವಂತಹ ಕಾರ್ಯ ಆಗಬೇಕು ಎಂದು ಜಿ ಪಂ ಸದಸ್ಯ ರಾಜಶೇಖರ ಗಾಳಿಪುರ ಹೇಳಿದರು.

Vijaya Karnataka 27 Feb 2019, 5:00 am
ಸಾಗರ : ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಜರುಗುತ್ತಿದ್ದ ಕೋಲಾಟದಂಥ ಜನಪದ ಆಚರಣೆಗಳನ್ನು ಯುವ ಜನತೆ ಆಸಕ್ತಿಯಿಂದ ಕಲಿತು, ಬೆಳೆಸುವಂತಹ ಕಾರ್ಯ ಆಗಬೇಕು ಎಂದು ಜಿ ಪಂ ಸದಸ್ಯ ರಾಜಶೇಖರ ಗಾಳಿಪುರ ಹೇಳಿದರು.
Vijaya Karnataka Web save and grow folk celebration
ಜನಪದ ಆಚರಣೆ ಉಳಿಸಿ, ಬೆಳೆಸಿ


ತಾಲೂಕಿನ ಮರತ್ತೂರು ಗ್ರಾಪಂ ವ್ಯಾಪ್ತಿಯ ಜಡಗದ್ದೆ ಹರಿಜನ ಕಾಲೋನಿಯಲ್ಲಿ ನಾಗದೇವರ ಪ್ರತಿಷ್ಠಾನ ಕಾರ್ಯಕ್ರಮದ ಅಂಗವಾಗಿ ಸೋಮವಾರ ಬಳೆ ಕೋಲಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ರಾತ್ರಿ ನಡೆಯುವ ಕೋಲಾಟ ನೃತ್ಯ ಹಾಗು ಹಾಡುಗಾರಿಕೆ ವಿಶಿಷ್ಟ ಲಯದಿಂದ ಆಕರ್ಷಣೀಯವಾಗಿರುತ್ತದೆ. ಗ್ರಾಮೀಣ ಕೃಷಿ ಕೂಲಿಕಾರ್ಮಿಕರ ಜಾನಪದ ಕಲಾಪ್ರಕಾರವನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಧಾರ್ಮಿಕ ಕಾರ‍್ಯಕ್ರಮಗಳ ಸಂದರ್ಭ ಜಾನಪದ, ಸಾಂಸ್ಕೃತಿಕ ಕಲಾಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದರು.

ಗೊರಗದ್ದೆ ಕೃಷ್ಣಮೂರ್ತಿ, ನಿರಂಜನ, ವಿದ್ಯಾ ಪ್ರಕಾಶ್‌, ಹುಣಸೂರು ಕನ್ನಪ್ಪ, ಅಣ್ಣೋಜಿ, ಮುಂತಾದವರು ಇದ್ದರು. ನಾಗರಾಜ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ