ಆ್ಯಪ್ನಗರ

ಮಲೆನಾಡಿನ ಕೃಷಿ ಉಳಿಸಲು ಆಗ್ರಹ

ಮಲೆನಾಡಿನಲ್ಲಿ ಕೃಷಿ ಸೊರಗುತ್ತಿದ್ದು, ಯುವ ಜನತೆ ದೂರವಾಗುತ್ತಿದೆ. ಕೃಷಿ ಬೆಲೆ ಆಯೋಗ ಮಲೆನಾಡಿನ ಕೃಷಿ ಉಳಿಸಲು ವಿಶೇಷ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಸಬೇಕು ಎಂದು ಶನಿವಾರ ಎಪಿಎಂಸಿಯಲ್ಲಿ ನಡೆದ ಮಾರುಕಟ್ಟೆ ಸಪ್ತಾಹ-2017 ಸಭೆಯಲ್ಲಿ ರೈತ ಮುಖಂಡರು ಆಗ್ರಹಿಸಿದರು

Vijaya Karnataka 31 Dec 2017, 5:00 am

ತೀರ್ಥಹಳ್ಳಿ: ಮಲೆನಾಡಿನಲ್ಲಿ ಕೃಷಿ ಸೊರಗುತ್ತಿದ್ದು, ಯುವ ಜನತೆ ದೂರವಾಗುತ್ತಿದೆ. ಕೃಷಿ ಬೆಲೆ ಆಯೋಗ ಮಲೆನಾಡಿನ ಕೃಷಿ ಉಳಿಸಲು ವಿಶೇಷ ಅಧ್ಯಯನ ವರದಿ ಸರಕಾರಕ್ಕೆ ಸಲ್ಲಿಸಬೇಕು ಎಂದು ಶನಿವಾರ ಎಪಿಎಂಸಿಯಲ್ಲಿ ನಡೆದ ಮಾರುಕಟ್ಟೆ ಸಪ್ತಾಹ-2017 ಸಭೆಯಲ್ಲಿ ರೈತ ಮುಖಂಡರು ಆಗ್ರಹಿಸಿದರು.

ರಾಜ್ಯ ಕೃಷಿ ಬೆಲೆ ಆಯೋಗ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೃಷಿ ಬೆಲೆ ಆಯೋಗ ಸಲ್ಲಿಸುವ ವರದಿ ಶಿಫಾರಸುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಬೇಕು. ವರದಿ ಅಂಶಗಳ ಕುರಿತು ನಿರ್ಲಕ್ಷ್ಯ ತೋರಿದರೆ ಬೆಲೆ ಆಯೋಗದ ಶ್ರಮಕ್ಕೆ ಬೆಲೆ ಸಿಗಲು ಸಾಧ್ಯವಿಲ್ಲ ಎಂದರು.

ಬೆಳೆ, ಬೆಳೆ ಉತ್ಪನ್ನಗಳ ಮೇಲೆ ರಪ್ತು, ಆಮದು ನೀತಿಗಳು ತುಂಬಾ ಪರಿಣಾಮ ಬೀರುತ್ತಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿದರೆ ಸಾಕಷ್ಟು ಸುಧಾರಣೆ ಸಾಧ್ಯವಾಗಲಿದೆ. ಕೃಷಿ ಮೇಲಾಗುತ್ತಿರುವ ದುಷ್ಪರಿಣಾಮಗಳ ಅರಿವು ಸರಕಾರಕ್ಕಿರಬೇಕು ಎಂದು ಹೇಳಿದರು.

ಭೌಗೋಳಿಕ ಸನ್ನಿವೇಶದ ಅನ್ವಯ ಮಲೆನಾಡು ಪ್ರದೇಶದಲ್ಲಿನ ಭತ್ತ ಬೆಳೆಗೆ ವಿಶೇಷವಾಗಿ ಕನಿಷ್ಠ 2500 ಸಾವಿರ ರೂ. ಬೆಂಬಲ ಬೆಲೆ ಕೊಡಬೇಕು. ಕೃಷಿ ಉತ್ಪನ್ನಗಳಿಗೆ ಕಡಿಮೆ ಬೆಲೆ, ಕೃಷಿಯಿಂದ ವಿಮುಖರಾಗಲು ಪ್ರಮುಖ ಕಾರಣ ಎಂದು ಎಪಿಎಂಸಿ ನಿರ್ದೇಶಕರಾದ ನಾಗರಾಜಶೆಟ್ಟಿ, ಹಸಿರುಮನೆ ಮಹಾಬಲೇಶ್‌ ಹೇಳಿದರು.

ಎಪಿಎಂಸಿ ಅಧ್ಯಕ್ಷ ಕೇಳೂರು ಮಿತ್ರಾ, ಉಪಾಧ್ಯಕ್ಷೆ ಮೈತಿಲಿ ಸತೀಶ್‌, ನಿರ್ದೇಶಕ ಪ್ರಕಾಶ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬೀರಣ್ಣ ಮತ್ತಿತರರು ಇದ್ದರು.

-

ಹೊರ ರಾಜ್ಯಗಳಿಂದ ಅಕ್ಕಿ ಖರೀದಿ ಸ್ಥಗಿತಗೊಂಡರೆ ರಾಜ್ಯದಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಗಲು ಸಾಧ್ಯವಿದೆ. ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಅಕ್ಕಿ ಹಂಚಿಕೆಗೆ ಬೆಂಬಲ ಬೆಲೆಯಡಿ ರಾಜ್ಯದ ಭತ್ತ ಖರೀದಿಯ ಅವಶ್ಯಕತೆ ಇದೆ. ಶಿವಮೊಗ್ಗದಲ್ಲಿ ಅಡಕೆ ಮಂಡಳಿ ಕೇಂದ್ರ ಕಚೇರಿ ಸ್ಥಾಪನೆ ಅಗತ್ಯವಿದ್ದು 500 ಕೋಟಿ ರೂ. ಬಂಡವಾಳ ಬೇಕಿದೆ.

- ಡಾ.ಟಿ.ಎನ್‌. ಪ್ರಕಾಶ್‌ ಕಮ್ಮರಡಿ, ಅಧ್ಯಕ್ಷರು, ರಾಜ್ಯ ಕೃಷಿ ಬೆಲೆ ಆಯೋಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ