ಆ್ಯಪ್ನಗರ

ಶರಾವತಿ ಉಳಿಸಿ ಬೀದಿನಾಟಕ ಪ್ರದರ್ಶನ

ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿಗಳು ನಗರದ ಗೋಪಿವೃತ್ತ, ಬಸ್‌ ನಿಲ್ದಾಣ, ಶಿವಪ್ಪ ನಾಯಕನ ವೃತ್ತ, ಡಿ.ವಿ.ಎಸ್‌. ಸರ್ಕಲ್‌, ಮಹಾವೀರ ವೃತ್ತ ಹಾಗೂ ಡಿ.ಸಿ. ಕಚೇರಿ ಆವರಣದಲ್ಲಿ ಶರಾವತಿ ಬೀದಿ ನಾಟಕ ಪ್ರದರ್ಶಿಸಿದರು.

Vijaya Karnataka 10 Jul 2019, 5:00 am
ಶಿವಮೊಗ್ಗ: ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿಗಳು ನಗರದ ಗೋಪಿವೃತ್ತ, ಬಸ್‌ ನಿಲ್ದಾಣ, ಶಿವಪ್ಪ ನಾಯಕನ ವೃತ್ತ, ಡಿ.ವಿ.ಎಸ್‌. ಸರ್ಕಲ್‌, ಮಹಾವೀರ ವೃತ್ತ ಹಾಗೂ ಡಿ.ಸಿ. ಕಚೇರಿ ಆವರಣದಲ್ಲಿ ಶರಾವತಿ ಬೀದಿ ನಾಟಕ ಪ್ರದರ್ಶಿಸಿದರು.
Vijaya Karnataka Web SMG-0907-2-15-9SMG3


ಬೀದಿ ನಾಟಕ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾಕಾವೇರಿ, ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಮಲೆನಾಡಿನ ಜನರ ಬದುಕು ಹಾಗೂ ಜೀವವೈವಿಧ್ಯದ ಮೇಲೆ ಗದಾಪ್ರಹಾರ ಮಾಡಿದಂತಿದೆ. ಶರಾವತಿಯನ್ನು ಉಳಿಸದಿದ್ದರೆ ಜನ, ಜೀವಸಂಕುಲಕ್ಕೆ ಅಪಾಯವಿದೆ ಎಂದು ಹೇಳಿದರು.

ನಗರದ ಗೋಪಿ ವೃತ್ತದಲ್ಲಿ ಮಂಜುನಾಥ ಸ್ವಾಮಿ ಅವರ ರಚನೆ ಮತ್ತು ನಿರ್ದೇಶನದ 'ಶರಾವತಿ' ಬೀದಿನಾಟಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾಲೇಜಿನ ರಾಜ್ಯಶಾಸ್ತ್ರ ಅಧ್ಯಾಪಕ ಪ್ರೊ.ಹುಚ್ಚಯ್ಯ, ಐಚ್ಛಿಕ ಇಂಗ್ಲಿಷ್‌ ವಿಭಾಗದ ಪ್ರೊ.ಮಂಜುನಾಥ್‌, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಮಂಜುನಾಥ ಸ್ವಾಮಿ, ಉಪನ್ಯಾಸಕರಾದ ಡಾ.ಸುಕೀರ್ತಿ, ಪೂಜಾ, ದೀಪ,ಗಣೇಶ್‌, ನವೀನ್‌, ವಿಭಾ, ಸುನೀಲ್‌, ಕವಿತ, ನೇತ್ರ, ಶಂಕರ್‌, ಮಾರಿ ಇವ್ವಲೀನ್‌ ಸೇರಿದಂತೆ ಎಲ್ಲ ಉಪನ್ಯಾಸಕ ವರ್ಗ ಮತ್ತು 100ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ