ಆ್ಯಪ್ನಗರ

ಐತಿಹಾಸಿಕ ದೇವಾಲಯ ಉಳಿಸಿ

ಐತಿಹಾಸಿಕ ಶಾಸನಗಳು ಹಾಗೂ ದೇವಸ್ಥಾನಗಳನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಾಗಿದೆ ಎಂದು ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶೇಜೇಶ್ವರ ಹೇಳಿದರು.

Vijaya Karnataka 4 Dec 2019, 5:00 am
ಶಿರಾಳಕೊಪ್ಪ: ಐತಿಹಾಸಿಕ ಶಾಸನಗಳು ಹಾಗೂ ದೇವಸ್ಥಾನಗಳನ್ನು ಉಳಿಸುವ ಕಾರ್ಯವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಾಗಿದೆ ಎಂದು ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶೇಜೇಶ್ವರ ಹೇಳಿದರು.
Vijaya Karnataka Web 03SLKP01 PHOTO 01_46


ಪಟ್ಟಣ ಸಮೀಪದ ತಡಗಣಿಯಲ್ಲಿಕೇದಾರೇಶ್ವರ ಕನ್ನಡ ಯುವಕರ ಸಂಘದ ನೇತೃತ್ವದಲ್ಲಿನಡೆದ 3 ನೇ ವರ್ಷದ ತಡಗಣಿ ಉತ್ಸವ ಸಮಾರೋಪ ಸಮಾರಂಭದಲ್ಲಿಅವರು ಮಾತನಾಡಿದರು.

ವಚನಕಾರ ಡಾಕೇಶ್‌ ತಾಳಗುಂದ ಮಾತನಾಡಿ, ಪ್ರಾಚೀನ ಕಲ್ಲುಗಳು ಇತಿಹಾಸದ ಶಕ್ತಿ ವರ್ಧಕಗಳಾಗಿದ್ದು,ಅಂತಹ ಕಲ್ಲುಗಳು ನಾಡಿನ ಪೂರ್ಜರ ಇತಿಹಾಸವನ್ನು ತಿಳಿಸುವ ಕಾರ್ಯ ಮಾಡುತ್ತವೆ. ಅಂತಹ ಕಥೆಗಳನ್ನು ಜನ ಸಾಮಾನ್ಯರಿಗೆ ತಿಳಿಸಲು ಉತ್ಸವಗಳು ಸಹಕಾರಿಯಾಗಿದೆ. ಈ ಕೆಲಸವನ್ನು ಪ್ರೀತಿಯಿಂದ ಮಾಡುತ್ತಿರುವ ಗ್ರಾಮೀಣ ಯುವಕರ ಸೇವೆ ಶ್ಲಾಘನೀಯ ಎಂದರು.

ಉತ್ಸವದ ಪ್ರಯುಕ್ತ ನೂರಾರು ಸಂಖ್ಯೆಯ ಯುವಕರು ದ್ವಿಚಕ್ರ ವಾಹನಗಳ ರಾರ‍ಯಲಿ ಮೂಲಕ ಕದಂಬ ಜ್ಯೋತಿಯನ್ನು ತಾಳಗುಂದದಿಂದ ತಡಗಣಿಗೆ ತಂದರು.

ನಿವೃತ್ತ ಸೈನಿಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯ ತಡಗಣಿ ಮಂಜುನಾಥ, ಕೇದಾರೇಶ್ವರ ಸಮಿತಿ ಅಧ್ಯಕ್ಷ ತೇಜಪ್ಪ, ಉದ್ಯಮಿ ಎಂ.ಆರ್‌.ಸತೀಶ್‌, ಬಂಕ್‌ ಶಂಕರಣ್ಣ ಮತ್ತಿತರರು ಮಾತನಾಡಿದರು.

ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಪಾತೀಮಾ ಬೀ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು. ಕರಿಬಸಪ್ಪ ನಿರೂಪಿಸಿ, ಸಂತೋಷ ಸ್ವಾಗತಿಸಿ, ಕಾರ್ತಿಕ ವಂದಿಸಿದರು.
-------
ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡದ ಮೂಲ ನೆಲೆ ತಾಳಗುಂದದ ಮಗ್ಗಲಿನಲ್ಲಿರುವ ತಡಗಣಿ ಗ್ರಾಮದಲ್ಲಿಕೂಡ ಕದಂಬರ ಕಾಲದ ಅವಶೇಷಗಳು ತೊರತಿವೆ. ಇಂತಹ ಪುಣ್ಯ ನೆಲದಲ್ಲಿಇಲಾಖೆಯಿಂದ ಆಗಬಹುದಾದ ಕಾರ್ಯಗಳಿಗೆ ಸಂಪೂರ್ಣ ನೆರವು ನೀಡಲಾಗುವುದು.
-ಶೇಜೇಶ್ವರ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ