ಆ್ಯಪ್ನಗರ

ಪರಿಸರ ಉಳಿಸುವುದು ದೇವರ ಕೆಲಸ

ಪ್ರಕೃತಿ ಕೆಲಸವು ಹೌದು, ದೇವರೂ ಹೌದು. ಭವಿಷ್ಯದಲ್ಲಿಉತ್ತಮ ಕೆಲಸ ಪಡೆಯಬೇಕೆಂದರೆ ಈಗಿನಿಂದಲೇ ಪ್ರಕೃತಿ ಎಂಬ ದೇವರನ್ನು ಸಂರಕ್ಷಿಸಬೇಕೆಂದು ಸಾಮಾಜಿಕ ಚಿಂತಕ ಮತ್ತು ರಂಗಕರ್ಮಿ ಪ್ರಸನ್ನ ಅವರು ಹೇಳಿದರು.

Vijaya Karnataka 15 Sep 2019, 5:00 am
ಶಿವಮೊಗ್ಗ: ಪ್ರಕೃತಿ ಕೆಲಸವು ಹೌದು, ದೇವರೂ ಹೌದು. ಭವಿಷ್ಯದಲ್ಲಿಉತ್ತಮ ಕೆಲಸ ಪಡೆಯಬೇಕೆಂದರೆ ಈಗಿನಿಂದಲೇ ಪ್ರಕೃತಿ ಎಂಬ ದೇವರನ್ನು ಸಂರಕ್ಷಿಸಬೇಕೆಂದು ಸಾಮಾಜಿಕ ಚಿಂತಕ ಮತ್ತು ರಂಗಕರ್ಮಿ ಪ್ರಸನ್ನ ಅವರು ಹೇಳಿದರು.
Vijaya Karnataka Web saving the environment is gods job
ಪರಿಸರ ಉಳಿಸುವುದು ದೇವರ ಕೆಲಸ


ಜವಾಹರಲಾಲ್‌ ನೆಹರೂ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿಶನಿವಾರ ಚಿರಂತನ ಹಸಿರು ತಂತ್ರಜ್ಞಾನ ಕೇಂದ್ರವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿಆಯೋಜಿಸಿದ್ದ ಪರಿಸರ ಜಾಗೃತಿ ದಿನಾಚರಣೆ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಪರಿಸರ ಉಳಿಸುವುದು ದೇವರ ಕೆಲಸ. ಇವತ್ತು ನಾವೆಲ್ಲಪರಿಸರವನ್ನು ಹಾಳು ಮಾಡಿಕೊಂಡರೆ ನಾಳೆ ಬದುಕು ನಡೆಸುವುದೇ ಕಷ್ಟ. ಪ್ರಕೃತಿ ಸಂರಕ್ಷಣೆ ಕೇವಲ ಮಾತಿಗೆ ಸೀಮಿತವಾಗಬಾರದು. ಅದನ್ನು ಆಚರಣೆಗೆ ತರಬೇಕು. ನಮ್ಮೆಲ್ಲಕೆಲಸಗಳು ಪರಿಸರಕ್ಕೆ, ನಾಳೆ ಮಾಡುವ ಕೆಲಸಕ್ಕೆ ಪೂರಕವಾಗಿರಬೇಕು ಎಂದರು.

ಪ್ರಕೃತಿಯಲ್ಲಿಕಸ ಎನ್ನುವುದು ಇಲ್ಲ. ಅಲ್ಲಿಒಂದರ ಕಸ ಮತ್ತೊಂದಕ್ಕೆ ರಸವಾಗುತ್ತದೆ. ಪ್ರಕೃತಿಯಲ್ಲಿಅದು ಆಹಾರ ಸರಪಳಿ. ಆದರೆ, ಮನುಷ್ಯನ ಸಮಾಜದಲ್ಲಿಮಾತ್ರ ಕಸ ಇರುತ್ತದೆ. ಹಿಂದೆಲ್ಲಮನೆ ಕಸವನ್ನು ಹಿತ್ತಲಲ್ಲಿತಿಪ್ಪೆಗೆ ಹಾಕಲಾಗುತ್ತಿತ್ತು. ಉಳಿದ ಊಟ, ಮನೆ ಆವರಣದಲ್ಲಿನ ಗಿಡಗಂಟಿಗಳು, ಕೊಟ್ಟಿಗೆಯಲ್ಲಿನ ಸಗಣಿ ಕಸವಾಗಿ ತಿಪ್ಪೆ ಸೇರುತ್ತಿತ್ತು. ವರ್ಷ ಕಡೆಗೆ ಅದನ್ನು ಗದ್ದೆ, ಹೊಲ, ತೋಟಕ್ಕೆ ಸಾಗಿಸಿದರೆ ಅದು ಬೆಳೆಗಳಿಗೆ ರಸವಾಗುತ್ತಿತ್ತು. ಆದರೆ, ಆಧುನಿಕ ಯುಗದಲ್ಲಿಕಸ ಮತ್ತು ರಸ ಬೇರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಮನೆಗಳಲ್ಲಿಉತ್ಪತ್ತಿಯಾಗುವ ಕಸವನ್ನು ತಿಪ್ಪೆಗೆ ಹಾಕಲು ಸಾಧ್ಯವಿಲ್ಲ. ಭೂಗರ್ಭದೊಳಗಿನ ರಸ, ಅದಿರು ತೆಗೆದು ಪ್ಲಾಸ್ಟಿಕ್‌, ಪೆಟ್ರೋಲ್‌, ಡೀಸೆಲ್‌, ಕಬ್ಬಿಣ ತಯಾರಿಸುತ್ತಿದ್ದೇವೆ. ಇವೆಲ್ಲವು ಕಸವಾದ ಬಳಿಕ ತಿಪ್ಪೆಗೆ ಹಾಕಲು ಸಾಧ್ಯವಿಲ್ಲ. ಇದರಿಂದಾಗಿ ನಾವು ಕುಡಿಯಲು ಬಳಸುವ ನೀರು, ಎಣ್ಣೆ, ಹಾಲು ಕಲುಷಿತವಾಗಿದೆ. ತಿನ್ನುವ ಆಹಾರ ವಿಷವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭ ಕಾಲೇಜಿನ ಹಸಿರು ನೀತಿಯನ್ನು ಪ್ರಸನ್ನ ಬಿಡುಗಡೆಗೊಳಿಸಿದರು. ಪ್ರಾಂಶುಪಾಲ ಡಾ. ಎಚ್‌.ಆರ್‌.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್‌ ಅಧ್ಯಕ್ಷ ಎ.ಎಸ್‌.ವಿಶ್ವನಾಥ್‌, ಚಿರಂತನ ಹಸಿರು ತಂತ್ರಜ್ಞಾನ ಕೇಂದ್ರದ ಸಂಚಾಲಕ ಎಚ್‌.ಕೆ.ಪ್ರದೀಪ್‌ ಹಾಜರಿದ್ದರು. ಉಪ ಪ್ರಾಂಶುಪಾಲ ಡಾ. ಎಲ್‌.ಕೆ.ಶ್ರೀಪತಿ ಪ್ರಾಸ್ತಾವಿಕ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ