ಆ್ಯಪ್ನಗರ

ರಾಷ್ಟ್ರಾದ್ಯಂತ ಎಸ್‌ಬಿಐ ಶಾಖಾ ಮಟ್ಟದ ಸಭೆ

ಎಸ್‌ಬಿಐ ಹೊಸ ಯೋಜನೆಗಳನ್ನು ಸೃಷ್ಟಿಸಲು ಮತ್ತು ರಾಷ್ಟ್ರೀಯ ಆದ್ಯತೆಗಳೊಂದಿಗೆ ಬ್ಯಾಂಕ್‌ನ ಕಾರ್ಯಕ್ಷಮತೆ ಪರಿಶೀಲನೆಗೆ ರಾಜ್ಯ ವಿವಿಧ ಶಾಖೆ, ಪ್ರಾದೇಶಿಕ ಕಚೇರಿಗಳಲ್ಲಿ ಚರ್ಚಾ ಸಭೆ ಆಯೋಜಿಸಲಾಗಿದೆ. ಇದರ ಭಾಗವಾಗಿ ಶಿವಮೊಗ್ಗದ ಪ್ರಾದೇಶಿಕ ವ್ಯವಹಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ಸಲಹೆಗಳು ಕೇಳಿಬಂದವು.

Vijaya Karnataka 19 Aug 2019, 5:00 am
ಶಿವಮೊಗ್ಗ : ಎಸ್‌ಬಿಐ ಹೊಸ ಯೋಜನೆಗಳನ್ನು ಸೃಷ್ಟಿಸಲು ಮತ್ತು ರಾಷ್ಟ್ರೀಯ ಆದ್ಯತೆಗಳೊಂದಿಗೆ ಬ್ಯಾಂಕ್‌ನ ಕಾರ್ಯಕ್ಷಮತೆ ಪರಿಶೀಲನೆಗೆ ರಾಜ್ಯ ವಿವಿಧ ಶಾಖೆ, ಪ್ರಾದೇಶಿಕ ಕಚೇರಿಗಳಲ್ಲಿ ಚರ್ಚಾ ಸಭೆ ಆಯೋಜಿಸಲಾಗಿದೆ. ಇದರ ಭಾಗವಾಗಿ ಶಿವಮೊಗ್ಗದ ಪ್ರಾದೇಶಿಕ ವ್ಯವಹಾರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ಸಲಹೆಗಳು ಕೇಳಿಬಂದವು.
Vijaya Karnataka Web sbi branch meeting national wide
ರಾಷ್ಟ್ರಾದ್ಯಂತ ಎಸ್‌ಬಿಐ ಶಾಖಾ ಮಟ್ಟದ ಸಭೆ


ಭಾರತೀಯ ಸ್ಟೇಟ್‌ ಬ್ಯಾಂಕಿನ ತಂಡದಿಂದ ಬೆಂಗಳೂರಿನ ಎಲ್‌ಎಚ್‌ಒ ಡಿಜಿಎಂ ಮಧುಸೂದನ್‌ ರೆಡ್ಡಿ, ಪ್ರಾದೇಶಿಕ ವ್ಯವಸ್ಥಾಪಕ ಟಿ.ರಾಮರಾವ್‌ ಭಾಗವಹಿಸಿದ್ದರು.

ಆರ್ಥಿಕತೆಯ ವಿವಿಧ ಕ್ಷೇತ್ರಗಳಿಗೆ ಸಾಲ ಹೆಚ್ಚಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಗುರುತಿಸಿ, ತಂತ್ರಜ್ಞಾನದ ಹೊಸ ಅನ್ವೇಷಣೆಯನ್ನು ಸಕ್ರಿಯಗೊಳಿಸುವುದು ಸಭೆಯ ಪ್ರಾಥಮಿಕ ಉದ್ದೇಶವಾಗಿದೆ. ಹಿರಿಯ ನಾಗರಿಕರು, ರೈತರು, ಸಣ್ಣ ಕೈಗಾರಿಕೆಗಳು, ಉದ್ಯಮ, ಯುವಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸಬೇಕು. ಈ ಎಲ್ಲ ಉದ್ದೇಶದಿಂದ ಆಯೋಜಿಸಿದ್ದ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಯಿತು.

===
ಸಭೆಯಲ್ಲಿ ನೀಡಲಾದ ಸಹೆಗಳು

* ಎಲ್ಲ ವಿಧದ ಅನುಮತಿ ಹಾಗೂ ಕಾನೂನಾತ್ಮಕ ಪ್ರಮಾಣ ಪತ್ರಗಳಿಗೆ ಏಕಗವಾಕ್ಷಿ ಕೌಂಟರ್‌ ಪದ್ಧತಿ

* ಬ್ಯಾಂಕ್‌ ವ್ಯವಹಾರ ಮತ್ತು ಉಳಿತಾಯ ಬಗ್ಗೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಆಯೋಜನೆ

* ರೈತ ಸಂಘಗಳಿಗೆ ಕೃಷಿ ಯಂತ್ರೀಕರಣಕ್ಕೆ ಸಾಲ ಸೌಲಭ್ಯ ಕಲ್ಪಿಸುವುದು

* ಹಳ್ಳಿಗಳ ಅಭಿವೃದ್ಧಿಗಾಗಿ ಬ್ಯಾಂಕ್‌ ಶಾಖೆಗಳಿಂದ ದತ್ತು ಪಡೆದುಕೊಳ್ಳುವುದು

* ಎಟಿಎಂ ವ್ಯವಹಾರಗಳ ಶುಲ್ಕ ಮನ್ನಾ ವಿನಾಯಿತಿ ಮಾಡುವುದು

* ಎಂಎಸ್‌ಎಂಇ ಗ್ರಾಹಕರು ಮತ್ತು ಉದ್ದಿಮೆದಾರರೊಂದಿಗೆ ಕೈಗಾರಿಕಾ ಸ್ಥಿತಿಗತಿಗಳ ಕುರಿತು ನಿರಂತರ ಸಮಾಲೋಚನೆ, ಸಭೆ ನಡೆಸುವುದು.

===

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ