ಆ್ಯಪ್ನಗರ

‘ಭಾರತೀಯ ಹಬ್ಬ ಹಿಂದೆ ವೈಜ್ಞಾನಿಕತೆ’

ಭಾರತೀಯ ಸಂಸ್ಕೃತಿಯಲ್ಲಿನ ಸಂಸ್ಕಾರ, ಸಂಪ್ರದಾಯ ವಿಶಿಷ್ಟವಾಗಿದೆ. ಆಧುನಿಕತೆ ಧಾವಂತದಲ್ಲಿಅದು ಕಣ್ಮರೆಯಾಗುವ ಆತಂಕ ಎದುರಿಸುತ್ತಿದೆ, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ಹೇಳಿದರು.

Vijaya Karnataka 17 Jan 2020, 5:00 am
ಶಿಕಾರಿಪುರ: ಭಾರತೀಯ ಸಂಸ್ಕೃತಿಯಲ್ಲಿನ ಸಂಸ್ಕಾರ, ಸಂಪ್ರದಾಯ ವಿಶಿಷ್ಟವಾಗಿದೆ. ಆಧುನಿಕತೆ ಧಾವಂತದಲ್ಲಿಅದು ಕಣ್ಮರೆಯಾಗುವ ಆತಂಕ ಎದುರಿಸುತ್ತಿದೆ, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ಹೇಳಿದರು.
Vijaya Karnataka Web 064815SKP2_46
ಶಿಕಾರಿಪುರದಲ್ಲಿಸಂಕ್ರಾಂತಿ ಅಂಗವಾಗಿ ಜೇಸಿಐ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ತಹಸೀಲ್ದಾರ್‌ ಎಂ.ಪಿ.ಕವಿರಾಜ್‌ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಚಾಲನೆ ನೀಡಿದರು.


ಪಟ್ಟಣದಲ್ಲಿಬುಧವಾರ ಶ್ರೀ ಹುಚ್ಚರಾಯಸ್ವಾಮಿ ದೇಗುಲದಲ್ಲಿಜೇಸಿಐ ಚಂದನ್‌ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಹಬ್ಬ ಹರಿದಿನ ಆಚರಣೆ ಹಿಂದೆ ವೈಜ್ಞಾನಿಕತೆ ಇದೆ. ಅದನ್ನು ಅರ್ಥ ಮಾಡಿಕೊಂಡು ಆಚರಿಸಬೇಕು. ಸೂರ‍್ಯನ ಪ್ರಖರತೆ ಹೆಚ್ಚಿರುವ ಈ ದಿನಗಳಲ್ಲಿಎಳ್ಳು-ಬೆಲ್ಲಸೇವಿಸಿದರೆ ದೇಹದ ಆರೋಗ್ಯಕ್ಕೆ ಒಳ್ಳೆಯದು. ದೇಶದ ಹಲವು ರಾಜ್ಯದಲ್ಲಿಸಂಕ್ರಾಂತಿ ಹೊಸ ವರ್ಷವಾಗಿ, ಹಲವು ಜಾತಿ ಜನಾಂಗದ ಸಾಂಪ್ರದಾಯಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ ಎಂದರು.

ಜೇಸಿಐ ಚಂದನ್‌ ಅಧ್ಯಕ್ಷ ದಿನೇಶ್‌ ಆಚಾರ‍್ಯ ಮಾತನಾಡಿ, ಹಬ್ಬ ಹರಿದಿನದಲ್ಲಿರಂಗೋಲಿ ವಿಶೇಷ ಸ್ಥಾನ ಪಡೆದಿದೆ ಎಂದರು. ರಂಗೋಲಿ ಸ್ಪರ್ಧೆಯಲ್ಲಿಇಂದಿರಾ, ಸ್ಪಂದನಾ, ಅಂಬಿಕಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು. ಕಂದಾಯ ಅಧಿಕಾರಿ ಶೈಲಜಾ, ಜೇಸಿರೇಟ್‌ ಶಾಲಿನಿ, ವಸಂತಕುಮಾರ್‌, ಸುರೇಶ್‌, ಶಿವಾನಂದ ಸಾನು, ಧನಂಜಯ ಆಚಾರ‍್ಯ, ಗಂಗಾಧರ, ರೇವಣಸಿದ್ಧಪ್ಪ, ಆನಂದಕೃಷ್ಣ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ