ಆ್ಯಪ್ನಗರ

ವೈಜ್ಞಾನಿಕ ಹೈನುಗಾರಿಕೆ ಲಾಭದಾಯಕ

ಹೈನುಗಾರಿಕೆ ಬಲಪಡಿಸುವುದು ಕೃಷಿ ಅವಲಂಬಿತ ರೈತರ ಜವಾಬ್ದಾರಿ. ವೈಜ್ಞಾನಿಕ ಹೈನುಗಾರಿಕೆ ಲಾಭದಾಯಕವಾಗಿದೆ. ಮಲೆನಾಡಿನ ಹಲವು ಕುಟುಂಬಗಳು ಹೈನುಗಾರಿಕೆಯನ್ನು ಉಪ ಕಸಬು ಮಾಡಿಕೊಂಡು ಲಾಭಗಳಿಸಿವೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.

Vijaya Karnataka 14 Sep 2019, 5:00 am
ತೀರ್ಥಹಳ್ಳಿ: ಹೈನುಗಾರಿಕೆ ಬಲಪಡಿಸುವುದು ಕೃಷಿ ಅವಲಂಬಿತ ರೈತರ ಜವಾಬ್ದಾರಿ. ವೈಜ್ಞಾನಿಕ ಹೈನುಗಾರಿಕೆ ಲಾಭದಾಯಕವಾಗಿದೆ. ಮಲೆನಾಡಿನ ಹಲವು ಕುಟುಂಬಗಳು ಹೈನುಗಾರಿಕೆಯನ್ನು ಉಪ ಕಸಬು ಮಾಡಿಕೊಂಡು ಲಾಭಗಳಿಸಿವೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.
Vijaya Karnataka Web 12TTH1_46


ತಾಲೂಕಿನ ಚಿಟ್ಟೆಬೈಲು ಕಿತ್ತನಗದ್ದೆಯಲ್ಲಿಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಸಮಾರಂಭ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಹಾಲು ಉತ್ಪಾದನೆಯಲ್ಲಿಸ್ವಾವಲಂಬಿ ಆಗಿದೆ. ಹೈನುಗಾರಿಕೆ ಉತ್ಪನ್ನಗಳು ಮಾರುಕಟ್ಟೆಯಲ್ಲಿಸಾಮಾನ್ಯರನ್ನು ತಲುಪಿವೆ. ಹಾಲು ಉತ್ಪಾದಕರ ಸಹಕಾರ ಸಂಘದ ಜತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡು ಹೈನುಗಾರಿಕೆಯನ್ನು ಎತ್ತರಕ್ಕೆ ಬೆಳೆಸಿದ್ದಾರೆ ಎಂದರು.

ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಆನಂದ್‌ ಮಾತನಾಡಿ, ಹಾಲು ಉತ್ಪಾದನೆಯಲ್ಲಿತೊಡಗಿರುವ ರೈತರು ಒಕ್ಕೂಟ ಬೆಳೆಸುವಲ್ಲಿಗಣನೀಯ ಸೇವೆ ಸಲ್ಲಿಸಿ ಆಧಾರವಾಗಿದ್ದಾರೆ. ಸಂಸ್ಥೆ ಸದೃಢವಾಗಿ ಬೆಳೆಯಲು ಹಾಲು ಉತ್ಪಾದಕರ ಸಹಕಾರ ಮುಖ್ಯ ಎಂದರು. ಕಿತ್ತನಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎ.ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಕಲ್ಪನಾ ಪದ್ಮನಾಭ್‌, ತಾ.ಪಂ.ಸದಸ್ಯ ಪ್ರಶಾಂತ್‌ಕುಕ್ಕೆ, ಹೊದಲ ಅರಳಾಪುರ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಸದಸ್ಯ ವಿಶ್ವನಾಥಪ್ರಭು, ಜಿಲ್ಲಾಹಾಲು ಒಕ್ಕೂಟದ ನಿರ್ದೇಶಕ ಕಡಿದಾಳ್‌ತಾರನಾಥ್‌, ವ್ಯವಸ್ಥಾಪಕ ನಿರ್ದೇಶಕ ಲೋಹಿತೇಶ್ವರ, ಹಾಲು ಒಕ್ಕೂಟದ ಮಾಜಿ ನಿರ್ದೇಶಕ ತುಂಬ್ರಮನೆ ಚಂದ್ರಶೇಖರ್‌, ದಿನೇಶ್‌, ನವೀನ್‌ ಮತ್ತಿತರರು ಇದ್ದರು. ಓವಿನಾಡಿಸೋಜ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ