ಆ್ಯಪ್ನಗರ

ಒಳ್ಳೆ ಗುಣ ವಿದ್ಯಾರ್ಥಿಗೆ ಭೂಷಣ

ವಿದ್ಯಾರ್ಥಿ ಜೀವನದಲ್ಲೇ ಸದ್ಭಾವನಾ ಗುಣ ಮೈಗೂಡಿಸಿಕೊಳ್ಳಬೇಕು. ಸದ್ಭಾವನೆಯಿಂದ ರಾಷ್ಟ್ರೀಯ ಭಾವೈಕ್ಯತೆ ಸಾಧ್ಯ ಎಂದು ಸಾಗರ ತಾ.ಪಂ.ಸದಸ್ಯೆ ಆನಂದಿ ಲಿಂಗರಾಜ್‌ ಹೇಳಿದರು.

Vijaya Karnataka 22 Aug 2019, 5:00 am
ಆನಂದಪುರಂ: ವಿದ್ಯಾರ್ಥಿ ಜೀವನದಲ್ಲೇ ಸದ್ಭಾವನಾ ಗುಣ ಮೈಗೂಡಿಸಿಕೊಳ್ಳಬೇಕು. ಸದ್ಭಾವನೆಯಿಂದ ರಾಷ್ಟ್ರೀಯ ಭಾವೈಕ್ಯತೆ ಸಾಧ್ಯ ಎಂದು ಸಾಗರ ತಾ.ಪಂ.ಸದಸ್ಯೆ ಆನಂದಿ ಲಿಂಗರಾಜ್‌ ಹೇಳಿದರು.
Vijaya Karnataka Web SMR-21ANPP2 SADBHAVANA DINA


ಅವರು ಮಂಗಳವಾರ ಕೆಪಿಎಸ್‌ ಶಾಲೆಯಲ್ಲಿ ಸ್ಕೌಟ್‌ ಆಂಡ್‌ ಗೈಡ್‌ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಎಲ್ಲ ಜಾತಿ, ಜನಾಂಗ ಹಾಗೂ ಮತದ ಜನರನ್ನು ಸಮಾನ ಗೌರವದಿಂದ ನೋಡಬೇಕು. ಪರಸ್ಪರರು ತೋರುವ ಉತ್ತಮ ಭಾವನೆಯಿಂದ ರಾಷ್ಟ್ರದ ಸಮಗ್ರತೆ ಹೆಚ್ಚುತ್ತದೆ ಎಂದರು. ಆನಂದಪುರಂ ಗ್ರಾ.ಪಂ.ಅಧ್ಯಕ್ಷೆ ಗಾಯತ್ರಿ, ಸ್ಕೌಟ್‌ ಆಂಡ್‌ ಗೈಡ್ಸ್‌ ಸಂಸ್ಥೆಯ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭಾರತಿದ್ಯಾಸ್‌, ಜಿಲ್ಲಾ ಸಹಾಯಕ ಆಯುಕ್ತ ನಾರಾಯಣ, ಸ್ಥಳೀಯ ಶಾಖೆ ಕಾರ್ಯದರ್ಶಿ ರಂಗಪ್ಪ, ಸಾಗರ ಬಿಆರ್‌ಸಿ ಮುಖ್ಯಸ್ಥ ಎನ್‌.ಕೆ.ಯೋಗೀಶ್‌, ಸ.ಪೂ.ಕಾಲೇಜು ಪ್ರಾಂಶುಪಾಲ ಡಾ.ಉಮೇಶ ಸೊರಬ, ಉಪ ಪ್ರಾಂಶುಪಾಲರಾದ ಪುಷ್ಪ , ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷ ಕ ಟೀಕಪ್ಪ ಇತರರು ಇದ್ದರು. ಸುತ್ತಮುತ್ತಲ 30 ಶಾಲೆಗಳಿಂದ 350 ಕ್ಕೂ ಅಧಿಕ ಸ್ಕೌಟ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ