ಆ್ಯಪ್ನಗರ

ಹರೀಶ್‌ಗಾಗಿ ಕುಮದ್ವತಿಯಲ್ಲಿಹುಡುಕಾಟ

ಚೋರಡಿ ಬಳಿ ಕುಮದ್ವತಿ ನದಿಯಲ್ಲಿಕೊಚ್ಚಿ ಹೋಗಿದ್ದ ಕುಂಸಿಯ ಪತ್ರಿಕಾ ವಿತರಕ ಅಮರನಾಥ ಅವರ ಶವ ಪತ್ತೆಯಾದ ಬೆನ್ನಲ್ಲೇ ಹರೀಶ್‌ ಅವರ ಪತ್ತೆಗಾಗಿ ಹುಡುಕಾಟ ಚುರುಕುಗೊಂಡಿದೆ.

Vijaya Karnataka 17 Oct 2019, 5:00 am
ಶಿವಮೊಗ್ಗ: ಚೋರಡಿ ಬಳಿ ಕುಮದ್ವತಿ ನದಿಯಲ್ಲಿಕೊಚ್ಚಿ ಹೋಗಿದ್ದ ಕುಂಸಿಯ ಪತ್ರಿಕಾ ವಿತರಕ ಅಮರನಾಥ ಅವರ ಶವ ಪತ್ತೆಯಾದ ಬೆನ್ನಲ್ಲೇ ಹರೀಶ್‌ ಅವರ ಪತ್ತೆಗಾಗಿ ಹುಡುಕಾಟ ಚುರುಕುಗೊಂಡಿದೆ.
Vijaya Karnataka Web search for harish in kumadwadi
ಹರೀಶ್‌ಗಾಗಿ ಕುಮದ್ವತಿಯಲ್ಲಿಹುಡುಕಾಟ


ಕುಮದ್ವತಿ ಸೇತುವೆ ಬಳಿ ನಿಂತು ನದಿಯ ಹರಿವನ್ನು ನೋಡುತ್ತಿದ್ದ ವ್ಯಕ್ತಿಗಳಿಗೆ ಬೊಲೆರೋ ಪಿಕಪ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ನದಿಗೆ ಬಿದ್ದಿದ್ದರು. ತಕ್ಷಣ ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ಗಾಡಿಕೊಪ್ಪ ನಿವಾಸಿ ನಾಗರಾಜ್‌ ಅವರನ್ನು ರಕ್ಷಿಸಿದ್ದರು. ಮಾರನೇ ದಿನ (ಆ.11) ರಾಮಪ್ಪ ಅವರ ಮೃತದೇಹ ಘಟನಾ ಸ್ಥಳದಿಂದ ಸ್ವಲ್ಪ ಮುಂದೆ ಪತ್ತೆಯಾಗಿತ್ತು.

ಬಳಿಕ, ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಎಫ್‌)ಯಿಂದ ಶೋಧ ಕಾರ್ಯ ಭಾರಿ ಬಿರುಸಿನಿಂದ ನಡೆಸಲಾಯಿತು. ಆದರೆ, ಇನ್ನಿಬ್ಬರ ಪತ್ತೆಯಾಗಿರಲಿಲ್ಲ. ಅ.14ರಂದು ದೊಡ್ಡಮಟ್ಟಿ ಗ್ರಾಮ ಸಮೀಪದ ಅಂಜನಾಪುರ ಜಲಾಶಯ ಹಿನ್ನೀರಿನ ಏತ ನೀರಾವತಿ ಪಂಪ್‌ ಹೌಸ್‌ ಬಳಿ ಕುಂಸಿಯ ಕನಕ ನಗರ ನಿವಾಸಿ ಅಮರನಾಥ್‌ ಅವರ ಶವ ಸಿಕ್ಕಿತ್ತು.

ನದಿ ಹರಿವಿನಲ್ಲಿಕೊಚ್ಚಿಹೋಗಿದ್ದ ಇಬ್ಬರ ಶವಗಳು ಸಿಕ್ಕಿವೆ. ಆದರೆ, ಸನ್ನಿವಾಸ ಗ್ರಾಮದ ಹರೀಶ್‌ ಎಂಬುವವರು ಪತ್ತೆಯಾಗಿಲ್ಲ. ಹೀಗಾಗಿ, ಬುಧವಾರದಿಂದ ಸ್ಥಳೀಯರು ಹಾಗೂ ಕುಂಸಿ ಪೊಲೀಸ್‌ ಠಾಣೆ ಪಿಎಸ್‌ಐ ನೇತೃತ್ವದ ತಂಡ ತೆಪ್ಪ ಬಳಸಿ ದೊಡ್ಡಮಟ್ಟಿ ಗ್ರಾಮ ಹತ್ತಿರದ ಅಂಜನಾಪುರ ಜಲಾಶಯದ ಹಿನ್ನೀರಿನಲ್ಲಿಶೋಧ ಕಾರ್ಯ ಮುಂದುವರಿಸಿವೆ. ಗುರುವಾರವೂ ಈ ಕಾರ್ಯ ಮುಂದುವರಿಸಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ